ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕಡಗಾತ್ರಿ: ಮನಸೆಳೆದ ಪಲ್ಲಕ್ಕಿ ಉತ್ಸವ

Last Updated 23 ಡಿಸೆಂಬರ್ 2020, 7:19 IST
ಅಕ್ಷರ ಗಾತ್ರ

ಮಲೇಬೆನ್ನೂರು: ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ ಸೋಮವಾರಗೋಧೂಳಿ ಸಮಯದಲ್ಲಿ ವೈಭವದಿಂದ ಜರುಗಿತು.

ಬಗೆಬಗೆಯ ಹೂವಿನಿಂದ ಪಲ್ಲಕ್ಕಿಯನ್ನು ಅಲಂಕರಿಸಿದ್ದರು. ವೀರಭದ್ರ ದೇವರ ವೀರಗಾಸೆ, ಜಾನಪದ ಕಲಾತಂಡ, ಭಜನಾ ತಂಡಗಳು, ಜಾಂಚ್ ಮೇಳ, ಡೊಳ್ಳು, ಮಂಗಳವಾದ್ಯ, ಉತ್ಸವಕ್ಕೆ ಕಳೆ ತಂದಿದ್ದವು. ಭಕ್ತರು ‘ಕರಿಬಸವೇಶ್ವರ ಮಹಾರಾಜ್ ಕೀ ಜೈ, ಹರಹರ ಮಹಾದೇವ' ಎಂದು ಘೋಷಣೆ ಕೂಗಿದರು.

ಕಾರ್ತೀಕೋತ್ಸವದ ಅಂಗವಾಗಿ ಭಕ್ತರು ದೇವಾಲಯ ಹಾಗೂ ರಾಜಬೀದಿಯುದ್ದಕ್ಕೂ ಎಣ್ಣೆದೀಪ ಬೆಳಗಿದರು. ದೇವಾಲಯ ಹಾಗೂ ರಾಜಬೀದಿಯನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಟ್ರಸ್ಟ್ ಪದಾಧಿಕಾರಿಗಳು, ರಾಜ್ಯದ ವಿವಿಧ ಭಾಗದಿಂದ ಬಂದ ಭಕ್ತರು ಭಕ್ತಿ ಸಮರ್ಪಿಸಿದರು. ಮಾಡಿದರು.

ಪೊಲೀಸರು ಭದ್ರತೆ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT