<p><strong>ದಾವಣಗೆರೆ:</strong>ವಿಶ್ವ ಪರಿಸರ ದಿನದ ಅಂಗವಾಗಿ ಮಿಯಾವಾಕಿ ಪದ್ಧತಿಯಲ್ಲಿ ನಗರದಲ್ಲಿ ಅತಿ ಕಡಿಮೆ ಪ್ರದೇಶದಲ್ಲಿ ಹೆಚ್ಚು ಸಸಿ ನೆಡುವ ಮೂಲಕ ನಗರ ಅರಣ್ಯ ಮಾಡುವ ಗುರಿ ಹೊಂದಲಾಗಿದೆ ಎಂದು ಮೇಯರ್ ಎಸ್.ಟಿ. ವೀರೇಶ್ ಹೇಳಿದರು.</p>.<p>ವಿಶ್ವ ಪರಿಸರ ದಿನದ ಅಂಗವಾಗಿ ಡಿಸಿಎಂ ಟೌನ್ಶಿಪ್ನ ವಿವೇಕಾನಂದ ಪಾರ್ಕ್ನಲ್ಲಿ ಶನಿವಾರ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು.</p>.<p>ಮಿಯಾವಾಕಿ ಜಪಾನಿನ ಖ್ಯಾತ ಪರಿಸರ ತಜ್ಞ. ಅತಿಕಡಿಮೆ ಪ್ರದೇಶದಲ್ಲಿ ವಿವಿಧ ಜಾತಿಯ ಅತಿಹೆಚ್ಚು ಗಿಡಗಳನ್ನು ಬೆಳೆಸಿದವರು. ಸಸಿಗಳನ್ನು 15 ಅಡಿಗೆ ಒಂದರಂತೆ ನೆಡಲಾಗುತ್ತದೆ. ಮಿಯಾವಾಕಿ ಪದ್ಧತಿಯಲ್ಲಿ 8 ಅಡಿ ಅಗಲ ಮತ್ತು 2 ಅಡಿ ಅಂತರದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಬಹುದು. ಇದೇ ಪದ್ಧತಿಯನ್ನು ದಾವಣಗೆರೆಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು.</p>.<p>ನಗರ ಅರಣ್ಯ ಮಾಡಲು 20 ಜಾಗಗಳನ್ನು ಗುರುತಿಸಲಾಗಿದೆ. 60 ಸಾವಿರ ಗಿಡಗಳನ್ನು ನೆಡುವ ಚಿಂತನೆ ಇದೆ. 34 ಸಾವಿರ ಗಿಡಗಳು ಇವೆ. ಅವುಗಳನ್ನು ಮೊದಲು ನೆಡಲಾಗುವುದು. ಬಳಿಕ ಉಳಿದ ಗಿಡಗಳನ್ನು ತರಿಸಲಾಗುವುದು ಎಂದು ಹೇಳಿದರು.</p>.<p>‘ಈಚೆಗೆ ಮಂಗಳೂರಿನ ಶ್ರೀರಾಮಕೃಷ್ಣಾಶ್ರಮಕ್ಕೆ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳ ಜತೆಗೆ ಭೇಟಿ ನೀಡಿದ್ದೆವು. ಅಲ್ಲಿ ಮಿಯಾವಾಕಿ ಪದ್ಧತಿಯಲ್ಲಿ ಮಾಡಿರುವ ನಗರದ ದಟ್ಟ ಕಾಡು ವಾತಾವರಣ ಮನ ಸೆಳೆಯಿತು. ಹಸಿರು ಹೆಚ್ಚಿಸುವ, ಶುದ್ಧ ಉಸಿರು ಕಲ್ಪಿಸುವ ಈ ಯೋಜನೆಯನ್ನು ನಮ್ಮಲ್ಲೂ ಆರಂಭಿಸಿದ್ದೇವೆ. ಇದರಿಂದ ಪ್ರಾಣಿ ಪಕ್ಷಿಗಳಿಗೂ ಆಶ್ರಯತಾಣ ದೊರೆ<br />ಯಲಿದೆ’ ಎಂದು ಮಾಹಿತಿ ನೀಡಿದರು.</p>.<p>ಸಂಸದ ಜಿ.ಎಂ. ಸಿದ್ದೇಶ್ವರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಪ್ರಕಾಶ್, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯ ದೇವರಾಜ್ ಟಿ.ಎನ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong>ವಿಶ್ವ ಪರಿಸರ ದಿನದ ಅಂಗವಾಗಿ ಮಿಯಾವಾಕಿ ಪದ್ಧತಿಯಲ್ಲಿ ನಗರದಲ್ಲಿ ಅತಿ ಕಡಿಮೆ ಪ್ರದೇಶದಲ್ಲಿ ಹೆಚ್ಚು ಸಸಿ ನೆಡುವ ಮೂಲಕ ನಗರ ಅರಣ್ಯ ಮಾಡುವ ಗುರಿ ಹೊಂದಲಾಗಿದೆ ಎಂದು ಮೇಯರ್ ಎಸ್.ಟಿ. ವೀರೇಶ್ ಹೇಳಿದರು.</p>.<p>ವಿಶ್ವ ಪರಿಸರ ದಿನದ ಅಂಗವಾಗಿ ಡಿಸಿಎಂ ಟೌನ್ಶಿಪ್ನ ವಿವೇಕಾನಂದ ಪಾರ್ಕ್ನಲ್ಲಿ ಶನಿವಾರ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು.</p>.<p>ಮಿಯಾವಾಕಿ ಜಪಾನಿನ ಖ್ಯಾತ ಪರಿಸರ ತಜ್ಞ. ಅತಿಕಡಿಮೆ ಪ್ರದೇಶದಲ್ಲಿ ವಿವಿಧ ಜಾತಿಯ ಅತಿಹೆಚ್ಚು ಗಿಡಗಳನ್ನು ಬೆಳೆಸಿದವರು. ಸಸಿಗಳನ್ನು 15 ಅಡಿಗೆ ಒಂದರಂತೆ ನೆಡಲಾಗುತ್ತದೆ. ಮಿಯಾವಾಕಿ ಪದ್ಧತಿಯಲ್ಲಿ 8 ಅಡಿ ಅಗಲ ಮತ್ತು 2 ಅಡಿ ಅಂತರದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಬಹುದು. ಇದೇ ಪದ್ಧತಿಯನ್ನು ದಾವಣಗೆರೆಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದರು.</p>.<p>ನಗರ ಅರಣ್ಯ ಮಾಡಲು 20 ಜಾಗಗಳನ್ನು ಗುರುತಿಸಲಾಗಿದೆ. 60 ಸಾವಿರ ಗಿಡಗಳನ್ನು ನೆಡುವ ಚಿಂತನೆ ಇದೆ. 34 ಸಾವಿರ ಗಿಡಗಳು ಇವೆ. ಅವುಗಳನ್ನು ಮೊದಲು ನೆಡಲಾಗುವುದು. ಬಳಿಕ ಉಳಿದ ಗಿಡಗಳನ್ನು ತರಿಸಲಾಗುವುದು ಎಂದು ಹೇಳಿದರು.</p>.<p>‘ಈಚೆಗೆ ಮಂಗಳೂರಿನ ಶ್ರೀರಾಮಕೃಷ್ಣಾಶ್ರಮಕ್ಕೆ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳ ಜತೆಗೆ ಭೇಟಿ ನೀಡಿದ್ದೆವು. ಅಲ್ಲಿ ಮಿಯಾವಾಕಿ ಪದ್ಧತಿಯಲ್ಲಿ ಮಾಡಿರುವ ನಗರದ ದಟ್ಟ ಕಾಡು ವಾತಾವರಣ ಮನ ಸೆಳೆಯಿತು. ಹಸಿರು ಹೆಚ್ಚಿಸುವ, ಶುದ್ಧ ಉಸಿರು ಕಲ್ಪಿಸುವ ಈ ಯೋಜನೆಯನ್ನು ನಮ್ಮಲ್ಲೂ ಆರಂಭಿಸಿದ್ದೇವೆ. ಇದರಿಂದ ಪ್ರಾಣಿ ಪಕ್ಷಿಗಳಿಗೂ ಆಶ್ರಯತಾಣ ದೊರೆ<br />ಯಲಿದೆ’ ಎಂದು ಮಾಹಿತಿ ನೀಡಿದರು.</p>.<p>ಸಂಸದ ಜಿ.ಎಂ. ಸಿದ್ದೇಶ್ವರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಪ್ರಕಾಶ್, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯ ದೇವರಾಜ್ ಟಿ.ಎನ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>