ದಾವಣಗೆರೆ: ಶರಣ, ಶರಣೆಯರ ಸಾಹಿತ್ಯ ಬಹಳ ಸರಳವಾದುದು. ಯಾರೇ ಓದಿದರೂ ಅರ್ಥವಾಗುವಂಥದ್ದು. ಆದರೆ ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು, ಪಾಲಿಸಲು ಹೋದಾಗ ವಚನಗಳು ನಾವು ತಿಳಿದಷ್ಟು ಸರಳವಲ್ಲ ಎಂಬುದು ಗೊತ್ತಾಗುತ್ತದೆ. ಅಂತರಂಗ, ಬಹಿರಂಗ ಶುದ್ಧಿ, ಬದ್ಧತೆ, ಪ್ರಾಮಾಣಿಕತೆ ಇಲ್ಲದೇ ಪಾಲನೆ ಸಾಧ್ಯವಿಲ್ಲ ಎಂದು ಜನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.