<p><strong>ದಾವಣಗೆರೆ</strong>: ಅಟಲ್ ಬಿಹಾರಿ ವಾಜಪೇಯಿ ಅವರು ಚಾಣಾಕ್ಷತೆ ಜತೆಗೆ ಉತ್ತಮ ವಾಗ್ಮಿ ಆಗಿದ್ದರು. ಅವರ ಮಾತಿಗೆ ವಿರೋಧ ಪಕ್ಷದವರು ಕೂಡ ತಲೆದೂಗುತ್ತಿದ್ದರು.ಅಟಲ್ ಬಿಹಾರಿ ವಾಜಪೇಯಿ ಸ್ವಚ್ಛ ಹಾಗೂ ನಿಸ್ವಾರ್ಥದ ರಾಜಕಾರಣ ಮಾಡಿದವರು ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಬಣ್ಣಿಸಿದರು.</p>.<p>ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಎರಡನೇ ವರ್ಷದ ಪುಣ್ಯತಿಥಿ ಆಚರಣೆ ವೇಳೆ ಮಾತನಾಡಿದರು.</p>.<p>ದೇಶ ಮೊದಲು ಪಕ್ಷ ಆಮೇಲೆ ಎಂಬುದು ಅವರ ನಂಬಿಕೆ ಆಗಿತ್ತು. ಭಾರತೀಯ ಜನಸಂಘ ಭಾರತೀಯ ಜನತಾ ಪಕ್ಷದಲ್ಲಿ ವಿಲೀನವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.</p>.<p>‘ಧಾರ್ಮಿಕ, ಆಧ್ಯಾತ್ಮ, ಸಾಂಸ್ಕೃತಿಕ ಎಲ್ಲವನ್ನೂ ಅಳವಡಿಸಿಕೊಂಡು ಉತ್ತಮ ರಾಜಕಾರಣ ಮಾಡಿದ್ದ ವಾಜಪೇಯಿ, ತಾವೆಂದೂ ಪ್ರಧಾನಿಯಾಗುವ ಹಂಬಲ ವ್ಯಕ್ತಪಡಿಸಲಿಲ್ಲ. ಮೊರಾರ್ಜಿ ದೇಸಾಯಿ, ಅಡ್ವಾಣಿ, ಚಂದ್ರಶೇಖರ್, ಬಾಬು ಜಗಜೀವನರಾಂ ಅವರ ಹೆಸರು ಪ್ರಸ್ತಾಪಿಸುತ್ತಿದ್ದರು’ ಎಂದು ಸ್ಮರಿಸಿದರು.</p>.<p>‘ಪಕ್ಷವನ್ನು ಶಕ್ತಿಯುತವಾಗಿ ಬೆಳೆಸಿದ್ದರು. ಎನ್ಡಿಎ ಮೈತ್ರಿಕೂಟವನ್ನು ಸಮರ್ಥವಾಗಿ ನಿಭಾಯಿಸಿದ್ದರು. ‘ಹಳ್ಳಿಗಳಲ್ಲಿಯೇ ಕೆಲಸ ಮಾಡಿ, ದೆಹಲಿಗೆ ಹೋದರೆ ಹದಗೆಡುತ್ತೀರಿ’ ಎಂದು ಮುಖಂಡರಿಗೆ ಹೇಳುತ್ತಿದ್ದರು. ನಾಲ್ಕನೆ ಬಾರಿಗೆ ಪ್ರಧಾನಿ ಆಗಿದ್ದರೆ ಗಂಗಾ-ಕಾವೇರಿ ನದಿ ಜೋಡಣೆ ಕಾರ್ಯಸಾಧು ಆಗಿರುತ್ತಿತ್ತು’ ಎಂದು ಹೇಳಿದರು.</p>.<p>ಶಾಸಕ ಪ್ರೊ.ಎಂ. ಲಿಂಗಣ್ಣ ಮಾತನಾಡಿ, ‘ವಾಜಪೇಯಿ ಪಕ್ಷದ ಸಂಘಟನೆ ಹಾಗೂ ರಾಜಕಾರಣದಲ್ಲಿ ಬದ್ಧತೆ ಉಳಿಸಿಕೊಂಡಿದ್ದರು. ಅವರು ನಿರ್ವಹಿಸಿದ ಕೆಲಸಗಳನ್ನು ಕಾರ್ಯಕರ್ತರು ಉಳಿಸಬೇಕು. ಅವರ ಗುಣ, ಕಾರ್ಯಶೀಲತೆಯನ್ನು ಪಾಲನೆ ಮಾಡಬೇಕು’ ಎಂದರು.</p>.<p>ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ, ‘ವಾಜಪೇಯಿಯವರು ತಾವೇ ಪ್ರಧಾನಿ ಹುದ್ದೆ ಅಲಂಕರಿಸುವ ಕುರಿತಂತೆ ಗುಂಪುಗಾರಿಕೆ ನಡೆಸಲಿಲ್ಲ. ಬಿಜೆಪಿ ದುಸ್ಥಿತಿಯಲ್ಲಿದ್ದ ಹಂತದಲ್ಲೇ ಭವಿಷ್ಯದಲ್ಲಿ 300 ಸೀಟು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದರು’ ಎಂದು ತಿಳಿಸಿದರು.</p>.<p>ಕಾರ್ಯಕ್ರಮದಲ್ಲಿ ಪಕ್ಷದ ನಿಕಟಪೂರ್ವ ಅಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ಅಟಲ್ ಬಿಹಾರಿ ವಾಜಪೇಯಿ ಅವರು ಚಾಣಾಕ್ಷತೆ ಜತೆಗೆ ಉತ್ತಮ ವಾಗ್ಮಿ ಆಗಿದ್ದರು. ಅವರ ಮಾತಿಗೆ ವಿರೋಧ ಪಕ್ಷದವರು ಕೂಡ ತಲೆದೂಗುತ್ತಿದ್ದರು.ಅಟಲ್ ಬಿಹಾರಿ ವಾಜಪೇಯಿ ಸ್ವಚ್ಛ ಹಾಗೂ ನಿಸ್ವಾರ್ಥದ ರಾಜಕಾರಣ ಮಾಡಿದವರು ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಬಣ್ಣಿಸಿದರು.</p>.<p>ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಎರಡನೇ ವರ್ಷದ ಪುಣ್ಯತಿಥಿ ಆಚರಣೆ ವೇಳೆ ಮಾತನಾಡಿದರು.</p>.<p>ದೇಶ ಮೊದಲು ಪಕ್ಷ ಆಮೇಲೆ ಎಂಬುದು ಅವರ ನಂಬಿಕೆ ಆಗಿತ್ತು. ಭಾರತೀಯ ಜನಸಂಘ ಭಾರತೀಯ ಜನತಾ ಪಕ್ಷದಲ್ಲಿ ವಿಲೀನವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.</p>.<p>‘ಧಾರ್ಮಿಕ, ಆಧ್ಯಾತ್ಮ, ಸಾಂಸ್ಕೃತಿಕ ಎಲ್ಲವನ್ನೂ ಅಳವಡಿಸಿಕೊಂಡು ಉತ್ತಮ ರಾಜಕಾರಣ ಮಾಡಿದ್ದ ವಾಜಪೇಯಿ, ತಾವೆಂದೂ ಪ್ರಧಾನಿಯಾಗುವ ಹಂಬಲ ವ್ಯಕ್ತಪಡಿಸಲಿಲ್ಲ. ಮೊರಾರ್ಜಿ ದೇಸಾಯಿ, ಅಡ್ವಾಣಿ, ಚಂದ್ರಶೇಖರ್, ಬಾಬು ಜಗಜೀವನರಾಂ ಅವರ ಹೆಸರು ಪ್ರಸ್ತಾಪಿಸುತ್ತಿದ್ದರು’ ಎಂದು ಸ್ಮರಿಸಿದರು.</p>.<p>‘ಪಕ್ಷವನ್ನು ಶಕ್ತಿಯುತವಾಗಿ ಬೆಳೆಸಿದ್ದರು. ಎನ್ಡಿಎ ಮೈತ್ರಿಕೂಟವನ್ನು ಸಮರ್ಥವಾಗಿ ನಿಭಾಯಿಸಿದ್ದರು. ‘ಹಳ್ಳಿಗಳಲ್ಲಿಯೇ ಕೆಲಸ ಮಾಡಿ, ದೆಹಲಿಗೆ ಹೋದರೆ ಹದಗೆಡುತ್ತೀರಿ’ ಎಂದು ಮುಖಂಡರಿಗೆ ಹೇಳುತ್ತಿದ್ದರು. ನಾಲ್ಕನೆ ಬಾರಿಗೆ ಪ್ರಧಾನಿ ಆಗಿದ್ದರೆ ಗಂಗಾ-ಕಾವೇರಿ ನದಿ ಜೋಡಣೆ ಕಾರ್ಯಸಾಧು ಆಗಿರುತ್ತಿತ್ತು’ ಎಂದು ಹೇಳಿದರು.</p>.<p>ಶಾಸಕ ಪ್ರೊ.ಎಂ. ಲಿಂಗಣ್ಣ ಮಾತನಾಡಿ, ‘ವಾಜಪೇಯಿ ಪಕ್ಷದ ಸಂಘಟನೆ ಹಾಗೂ ರಾಜಕಾರಣದಲ್ಲಿ ಬದ್ಧತೆ ಉಳಿಸಿಕೊಂಡಿದ್ದರು. ಅವರು ನಿರ್ವಹಿಸಿದ ಕೆಲಸಗಳನ್ನು ಕಾರ್ಯಕರ್ತರು ಉಳಿಸಬೇಕು. ಅವರ ಗುಣ, ಕಾರ್ಯಶೀಲತೆಯನ್ನು ಪಾಲನೆ ಮಾಡಬೇಕು’ ಎಂದರು.</p>.<p>ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ, ‘ವಾಜಪೇಯಿಯವರು ತಾವೇ ಪ್ರಧಾನಿ ಹುದ್ದೆ ಅಲಂಕರಿಸುವ ಕುರಿತಂತೆ ಗುಂಪುಗಾರಿಕೆ ನಡೆಸಲಿಲ್ಲ. ಬಿಜೆಪಿ ದುಸ್ಥಿತಿಯಲ್ಲಿದ್ದ ಹಂತದಲ್ಲೇ ಭವಿಷ್ಯದಲ್ಲಿ 300 ಸೀಟು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದರು’ ಎಂದು ತಿಳಿಸಿದರು.</p>.<p>ಕಾರ್ಯಕ್ರಮದಲ್ಲಿ ಪಕ್ಷದ ನಿಕಟಪೂರ್ವ ಅಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>