<p><strong>ದಾವಣಗೆರೆ: </strong>ಮನೆ ಮುಂಭಾಗದಲ್ಲಿ ಕಸ ಗುಡಿಸುತ್ತಿದ್ದ ವೇಳೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದ ಸರಗಳ್ಳನೊಬ್ಬ ಮಹಿಳೆ ಕೊರಳಿನಲ್ಲಿದ್ದ 35 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.</p>.<p>ದೇವರಾಜ ಅರಸು ಲೇಔಟ್ನ ‘ಸಿ’ ಬ್ಲಾಕ್ನ 3ನೇ ಕ್ರಾಸ್ನ ನಿವಾಸಿ ಕೆ.ಎಸ್. ಚಂದ್ರಮ್ಮ ಸರ ಕಳೆದುಕೊಂಡವರು. ಕಾಂಪೌಂಡ್ನ ಮುಂಭಾಗ ಕಸ ಕುಡಿಸುತ್ತಿದ್ದ ವೇಳೆ ನೀಲಿ ಬಣ್ಣದ ಶರ್ಟ್, ಬಿಳಿ ಬಣ್ಣದ ಮಾಸ್ಕ್ ಧರಿಸಿದ್ದ ಯುವಕನೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಏಕಾಏಕಿ ₹1.06 ಲಕ್ಷ ಮೌಲ್ಯದ ಎರಡೆಳೆಯ ಸರ ಕಿತ್ತುಕೊಂಡು ಓಡಿಹೋಗಿದ್ದಾನೆ.</p>.<p>ಬಸವನಗರ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<p>===</p>.<p class="Briefhead"><strong>₹4.50 ಲಕ್ಷ ಮೌಲ್ಯದ ಆಭರಣ ಕಳವು</strong></p>.<p><strong>ದಾವಣಗೆರೆ: </strong>ನ್ಯಾಮತಿ ತಾಲ್ಲೂಕಿನ ಚೀಲೂರು ಗ್ರಾಮದಲ್ಲಿ ಮನೆಯ ತಗಡಿನ ಸಂದಿಯಲ್ಲಿಟ್ಟ ಇಟ್ಟಿದ್ದ ಬೀಗದ ಕೀಯನ್ನು ತೆಗೆದುಕೊಂಡು ಮನೆಯ ಒಳಗೆ ನುಗ್ಗಿದ ಕಳ್ಳರು 140 ಗ್ರಾಂ ಬಂಗಾರದ ಒಡವೆ, 100 ಗ್ರಾಂ ತೂಕದ ಬೆಳ್ಳಿ ಹಾಗೂ ನಗದನ್ನು ಕಳ್ಳತನ ಮಾಡಿದ್ದಾರೆ.</p>.<p>ಗ್ರಾಮದ ಜಿ.ಎಸ್.ರಮೇಶ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದು, ಮನೆಯ ಒಳಗಡೆ ಎರಡು ಗಾಡ್ರೇಜ್ ಬೀರುಗಳ ಬಾಗಿಲು ಮುರಿದ ಕಳ್ಳರು ಮುರಿದು ಅದರಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಆಭರಣವನ್ನು ಕಳ್ಳತನ ಮಾಡಿದ್ದಾರೆ.</p>.<p>₹ 4.50 ಲಕ್ಷ ಮೌಲ್ಯದ ಚಿನ್ನದ ಆಭರಣ, ₹5 ಸಾವಿರ ಬೆಲೆ ಬಾಳುವ ಬೆಳ್ಳಿ ಹಾಗೂ ₹31 ಸಾವಿರವನ್ನು ಕಳವು ಮಾಡಿ, ಹಿಂಬಾಗಿಲ ಮೂಲಕ ಹೊರ ಹೋಗಿದ್ದಾರೆ.</p>.<p>ಮನೆಯ ಒಳಗಡೆ ಖಾರದ ಪುಡಿ ಚೆಲ್ಲಿ ಹೋಗಿದ್ದಾರೆ. ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>==</p>.<p class="Briefhead"><strong>ನೇರ್ಲಿಗೆ ಶಾಲೆಯಲ್ಲಿ ಕಂಪ್ಯೂಟರ್ ಕಳವು</strong></p>.<p><strong>ಮಾಯಕೊಂಡ: </strong>ಸಮೀಪದ ನೇರ್ಲಿಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಮತ್ತು ಸಿಪಿಯು ಕಳವು ಮಾಡಲಾಗಿದೆ.</p>.<p>ಮಾರ್ಚ್ ತಿಂಗಳಲ್ಲಿ ಲಾಕ್ಡೌನ್ ಇದ್ದುದರಿಂದ ಶಾಲೆಗೆ ಬೀಗ ಹಾಕಲಾಗಿತ್ತು. ಜೂನ್ 21ರಂದು ಶಾಲೆಯ ಬಾಗಿಲು ತೆರೆದಾಗ ಕಂಪ್ಯೂಟರ್ ಕೊಠಡಿ ಬೀಗ ಹಾಕಿದಂತೆ ಇತ್ತು. ಜೂನ್ 29ರಂದು ನೋಡಿದಾಗ 26 ಮಾನಿಟರ್ ಹಾಗೂ 26 ಸಿಪಿಯು ಕಳ್ಳತನವಾಗಿದೆ. ಇವುಗಳ ₹5.20 ಲಕ್ಷ ಎಂದು ಅಂದಾಜಿಸಲಾಗಿದೆ. ಮುಖ್ಯ ಶಿಕ್ಷಕಿ ನಾಗರತ್ನಮ್ಮ ಮಾಯಕೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<p>===</p>.<p class="Briefhead"><strong>ಬೈಕ್ ಅಪಘಾತ ಯುವಕ ಸಾವು</strong></p>.<p><strong>ಮಾಯಕೊಂಡ:</strong> ಸಮೀಪದ ಕೊಡಗನೂರು ಕ್ರಾಸ್ ಬಳಿ ಮಂಗಳವಾರ ಬೈಕ್ ಅಪಘಾತದಲ್ಲಿ ಯುವಕರೊಬ್ಬರು ಮೃತಪಟ್ಟಿದ್ದಾರೆ.</p>.<p>ಚಿತ್ರದುರ್ಗ ತಾಲ್ಲೂಕು ಅಳವುದರ ಗ್ರಾಮದ ವೀರೇಶ್ ಮೃತಪಟ್ಟವರು.</p>.<p>ಕೀಟನಾಶಕ ತರಲೆಂದು ಅದೇ ಗ್ರಾಮದ ಸಿದ್ದನಗೌಡ ಅವರೊಂದಿಗೆ ಜೂನ್ 29ರ ರಾತ್ರಿ ಕೊಡಗನೂರು ಕ್ರಾಸ್ಗೆ ಹೊರಟಿದ್ದರು. ಆ ವೇಳೆ ಅಪಘಾತವಾಗಿ,ವೀರೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಅಪಘಾತದಲ್ಲಿ ಗಾಯಗೊಂಡ ಸಿದ್ದನಗೌಡ ಮಾಯಕೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<p>ಸ್ಥಳಕ್ಕೆ ಸಿಪಿಐ ಮಂಜುನಾಥ್ ಪಿಎಸ್ಐ ವೀರಭದ್ರಪ್ಪ ಭೇಟಿ ನೀಡಿ ಪರಿಶೀಲಿಸಿದರು.</p>.<p>===</p>.<p class="Briefhead"><strong>ಮಟ್ಕಾ ಚೀಟಿ: ₹1.77 ಲಕ್ಷ ವಶ</strong></p>.<p>ದಾವಣಗೆರೆ: ಇಮಾಮ್ನಗರದಲ್ಲಿ ಮಟ್ಕಾದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿರುವ ಪೊಲೀಸರು ಅವರಿಂದ ₹1.77 ಲಕ್ಷ ವಶಪಡಿಸಿಕೊಂಡಿದ್ದಾರೆ.</p>.<p>ಕೆಟಿಜೆ ನಗರದ ನಯಾಜ್ ಬೇಗ್, ಹಸನ್ ಸಾಬ್, ಸೈಯದ್ ಸಲ್ಮಾನ್, ನವಾಬ್ ಜಾನ್ ಬಂಧಿತರು. ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುಸ್ತಾಕ್ ಅಹಮ್ಮದ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಮನೆ ಮುಂಭಾಗದಲ್ಲಿ ಕಸ ಗುಡಿಸುತ್ತಿದ್ದ ವೇಳೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದ ಸರಗಳ್ಳನೊಬ್ಬ ಮಹಿಳೆ ಕೊರಳಿನಲ್ಲಿದ್ದ 35 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.</p>.<p>ದೇವರಾಜ ಅರಸು ಲೇಔಟ್ನ ‘ಸಿ’ ಬ್ಲಾಕ್ನ 3ನೇ ಕ್ರಾಸ್ನ ನಿವಾಸಿ ಕೆ.ಎಸ್. ಚಂದ್ರಮ್ಮ ಸರ ಕಳೆದುಕೊಂಡವರು. ಕಾಂಪೌಂಡ್ನ ಮುಂಭಾಗ ಕಸ ಕುಡಿಸುತ್ತಿದ್ದ ವೇಳೆ ನೀಲಿ ಬಣ್ಣದ ಶರ್ಟ್, ಬಿಳಿ ಬಣ್ಣದ ಮಾಸ್ಕ್ ಧರಿಸಿದ್ದ ಯುವಕನೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಏಕಾಏಕಿ ₹1.06 ಲಕ್ಷ ಮೌಲ್ಯದ ಎರಡೆಳೆಯ ಸರ ಕಿತ್ತುಕೊಂಡು ಓಡಿಹೋಗಿದ್ದಾನೆ.</p>.<p>ಬಸವನಗರ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<p>===</p>.<p class="Briefhead"><strong>₹4.50 ಲಕ್ಷ ಮೌಲ್ಯದ ಆಭರಣ ಕಳವು</strong></p>.<p><strong>ದಾವಣಗೆರೆ: </strong>ನ್ಯಾಮತಿ ತಾಲ್ಲೂಕಿನ ಚೀಲೂರು ಗ್ರಾಮದಲ್ಲಿ ಮನೆಯ ತಗಡಿನ ಸಂದಿಯಲ್ಲಿಟ್ಟ ಇಟ್ಟಿದ್ದ ಬೀಗದ ಕೀಯನ್ನು ತೆಗೆದುಕೊಂಡು ಮನೆಯ ಒಳಗೆ ನುಗ್ಗಿದ ಕಳ್ಳರು 140 ಗ್ರಾಂ ಬಂಗಾರದ ಒಡವೆ, 100 ಗ್ರಾಂ ತೂಕದ ಬೆಳ್ಳಿ ಹಾಗೂ ನಗದನ್ನು ಕಳ್ಳತನ ಮಾಡಿದ್ದಾರೆ.</p>.<p>ಗ್ರಾಮದ ಜಿ.ಎಸ್.ರಮೇಶ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದು, ಮನೆಯ ಒಳಗಡೆ ಎರಡು ಗಾಡ್ರೇಜ್ ಬೀರುಗಳ ಬಾಗಿಲು ಮುರಿದ ಕಳ್ಳರು ಮುರಿದು ಅದರಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಆಭರಣವನ್ನು ಕಳ್ಳತನ ಮಾಡಿದ್ದಾರೆ.</p>.<p>₹ 4.50 ಲಕ್ಷ ಮೌಲ್ಯದ ಚಿನ್ನದ ಆಭರಣ, ₹5 ಸಾವಿರ ಬೆಲೆ ಬಾಳುವ ಬೆಳ್ಳಿ ಹಾಗೂ ₹31 ಸಾವಿರವನ್ನು ಕಳವು ಮಾಡಿ, ಹಿಂಬಾಗಿಲ ಮೂಲಕ ಹೊರ ಹೋಗಿದ್ದಾರೆ.</p>.<p>ಮನೆಯ ಒಳಗಡೆ ಖಾರದ ಪುಡಿ ಚೆಲ್ಲಿ ಹೋಗಿದ್ದಾರೆ. ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>==</p>.<p class="Briefhead"><strong>ನೇರ್ಲಿಗೆ ಶಾಲೆಯಲ್ಲಿ ಕಂಪ್ಯೂಟರ್ ಕಳವು</strong></p>.<p><strong>ಮಾಯಕೊಂಡ: </strong>ಸಮೀಪದ ನೇರ್ಲಿಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಮತ್ತು ಸಿಪಿಯು ಕಳವು ಮಾಡಲಾಗಿದೆ.</p>.<p>ಮಾರ್ಚ್ ತಿಂಗಳಲ್ಲಿ ಲಾಕ್ಡೌನ್ ಇದ್ದುದರಿಂದ ಶಾಲೆಗೆ ಬೀಗ ಹಾಕಲಾಗಿತ್ತು. ಜೂನ್ 21ರಂದು ಶಾಲೆಯ ಬಾಗಿಲು ತೆರೆದಾಗ ಕಂಪ್ಯೂಟರ್ ಕೊಠಡಿ ಬೀಗ ಹಾಕಿದಂತೆ ಇತ್ತು. ಜೂನ್ 29ರಂದು ನೋಡಿದಾಗ 26 ಮಾನಿಟರ್ ಹಾಗೂ 26 ಸಿಪಿಯು ಕಳ್ಳತನವಾಗಿದೆ. ಇವುಗಳ ₹5.20 ಲಕ್ಷ ಎಂದು ಅಂದಾಜಿಸಲಾಗಿದೆ. ಮುಖ್ಯ ಶಿಕ್ಷಕಿ ನಾಗರತ್ನಮ್ಮ ಮಾಯಕೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<p>===</p>.<p class="Briefhead"><strong>ಬೈಕ್ ಅಪಘಾತ ಯುವಕ ಸಾವು</strong></p>.<p><strong>ಮಾಯಕೊಂಡ:</strong> ಸಮೀಪದ ಕೊಡಗನೂರು ಕ್ರಾಸ್ ಬಳಿ ಮಂಗಳವಾರ ಬೈಕ್ ಅಪಘಾತದಲ್ಲಿ ಯುವಕರೊಬ್ಬರು ಮೃತಪಟ್ಟಿದ್ದಾರೆ.</p>.<p>ಚಿತ್ರದುರ್ಗ ತಾಲ್ಲೂಕು ಅಳವುದರ ಗ್ರಾಮದ ವೀರೇಶ್ ಮೃತಪಟ್ಟವರು.</p>.<p>ಕೀಟನಾಶಕ ತರಲೆಂದು ಅದೇ ಗ್ರಾಮದ ಸಿದ್ದನಗೌಡ ಅವರೊಂದಿಗೆ ಜೂನ್ 29ರ ರಾತ್ರಿ ಕೊಡಗನೂರು ಕ್ರಾಸ್ಗೆ ಹೊರಟಿದ್ದರು. ಆ ವೇಳೆ ಅಪಘಾತವಾಗಿ,ವೀರೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಅಪಘಾತದಲ್ಲಿ ಗಾಯಗೊಂಡ ಸಿದ್ದನಗೌಡ ಮಾಯಕೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<p>ಸ್ಥಳಕ್ಕೆ ಸಿಪಿಐ ಮಂಜುನಾಥ್ ಪಿಎಸ್ಐ ವೀರಭದ್ರಪ್ಪ ಭೇಟಿ ನೀಡಿ ಪರಿಶೀಲಿಸಿದರು.</p>.<p>===</p>.<p class="Briefhead"><strong>ಮಟ್ಕಾ ಚೀಟಿ: ₹1.77 ಲಕ್ಷ ವಶ</strong></p>.<p>ದಾವಣಗೆರೆ: ಇಮಾಮ್ನಗರದಲ್ಲಿ ಮಟ್ಕಾದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿರುವ ಪೊಲೀಸರು ಅವರಿಂದ ₹1.77 ಲಕ್ಷ ವಶಪಡಿಸಿಕೊಂಡಿದ್ದಾರೆ.</p>.<p>ಕೆಟಿಜೆ ನಗರದ ನಯಾಜ್ ಬೇಗ್, ಹಸನ್ ಸಾಬ್, ಸೈಯದ್ ಸಲ್ಮಾನ್, ನವಾಬ್ ಜಾನ್ ಬಂಧಿತರು. ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುಸ್ತಾಕ್ ಅಹಮ್ಮದ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>