ನಿಮ್ಮ ಮಕ್ಕಳಿಗೆ ಉರ್ದುವನ್ನು ಒಂದು ಭಾಷೆಯಾಗಿ ಕಲಿಸಿ. ಆದರೆ ಒಂದು ಮಾಧ್ಯಮವಾಗಿ ಕಲಿಸಬೇಡಿ. ಮಾಧ್ಯಮವಾಗಿ ಕಲಿಸಿದರೆ 7ನೇ ತರಗತಿಗೆ ವಿದ್ಯಾಭ್ಯಾಸ ನಿಂತು ಹೋಗುತ್ತದೆ. ಅಬ್ಬಬ್ಬ ಅಂದರೆ 10ನೇ ತರಗತಿವರೆಗೆ ಬರಬಹುದು. ಅದರ ನಂತರ ಕರ್ನಾಟಕದಲ್ಲಿ ಉರ್ದು ಕಲಿಕೆಯ ಕಾಲೇಜುಗಳು ಇಲ್ಲ. ಇದನ್ನು ಅರ್ಥ ಮಾಡಿಕೊಂಡು ಕನ್ನಡ ಮಾಧ್ಯಮ ಇಲ್ಲವೇ ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಿ ಎಂದು ಸಲಹೆ ನೀಡಿದರು. ಧರ್ಮ ಮನೆಯೊಳಗೆ ಇರಬೇಕು. ಸಾರ್ವಜನಿಕವಾಗಿ ಸಂವಿಧಾನವನ್ನು ಪಾಲನೆ ಮಾಡಬೇಕು. ಸಂವಿಧಾನವೇ ನಮಗೆ ಸೌಹಾರ್ದ, ಸಹಬಾಳ್ವೆಯನ್ನು ನೀಡಿದೆ. ಹಕ್ಕುಗಳನ್ನು ನೀಡಿದೆ ಎಂದರು. ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾಖಾನಂ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕರಿಬಸಪ್ಪ ಕಾರ್ಯಕ್ರಮ ನಿರೂಪಿಸಿದರು. ನಗೀನ ಬಾನು ಉಪಸ್ಥಿತರಿದ್ದರು.