<p><strong>ದಾವಣಗೆರೆ: </strong>ವನಿತಾ ಸಮಾಜ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದೆ. ಸಂಸ್ಥೆಯ ಸದಸ್ಯೆಯರು ರಾಜಕೀಯಕ್ಕೂ ಬರಬೇಕು. ಇದರಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದು ಪಾಲಿಕೆ ಸದಸ್ಯ ಶಿವನಳ್ಳಿ ರಮೇಶ್ ಸಲಹೆ ನೀಡಿದರು.</p>.<p>ನಗರದ ವನಿತಾ ಸಮಾಜದಲ್ಲಿ ಶುಕ್ರವಾರ ಜಿಲ್ಲಾ ಶಿಶು ಕಲ್ಯಾಣ ಮಂಡಳಿ ಏರ್ಪಡಿಸಿದ್ದ ಮಕ್ಕಳ ಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಬುದ್ಧಿಮಾಂದ್ಯ, ಅಂಗವಿಕಲ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದಕ್ಕಾಗಿ ವನಿತಾ ಸಮಾಜದ ಅಂಗ ಸಂಸ್ಥೆಯಾದ ಜಿಲ್ಲಾ ಶಿಶು ಕಲ್ಯಾಣ ಮಂಡಳಿ ಅವಿರತವಾಗಿ ಶ್ರಮಿಸುತ್ತಿದೆ. ಈ ಮಹಿಳೆಯರಿಗೆ ರಾಜಕೀಯ ಶಕ್ತಿ ಸಿಕ್ಕರೆ ಇನ್ನಷ್ಟು ಮಾದರಿಯಾಗಿ ಕೆಲಸ ಮಾಡಬಲ್ಲರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಾದರೂ ಸ್ಪರ್ಧಿಸಲು ಮನಸ್ಸು ಮಾಡಬೇಕು ಎಂದರು.</p>.<p>ಪಾಲಿಕೆ ಸದಸ್ಯೆ ವಿ. ಅಶ್ವಿನಿ ಮಾತನಾಡಿ, ‘ಮೊಬೈಲ್ ಮಹಾ ಮಾರಿಯಂತೆ ಮಕ್ಕಳ ಬಾಲ್ಯವನ್ನು ಹಾಳು ಮಾಡುತ್ತಿದೆ. ಮೊಬೈಲ್ ಗೀಳು ಪೀಳಿಗೆಯನ್ನೇ ನಾಶ ಮಾಡುತ್ತಿದೆ. ಟಿ.ವಿ.ಗಳು ಮಕ್ಕಳಲ್ಲಿ ಸೌಜನ್ಯ ಹಾಳು ಮಾಡುತ್ತಿವೆ. ಪೋಷಕರು ಮಕ್ಕಳನ್ನು ತಿದ್ದಿ, ಸರಿತಪ್ಪುಗಳನ್ನು ತಿಳಿಸಬೇಕು’ ಎಂದರು.</p>.<p>ಸಮಾಜ ಸೇವಕಿ ಅನಿತಾ ವಿರೂಪಾಕ್ಷಪ್ಪ ಅವರಿಗೆ ‘ಶಿಶುಸೇವಾ’, ತರಳಬಾಳು ಜಗದ್ಗುರು ಸಂಯುಕ್ತ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಎಚ್.ಬಿ. ಸಹನಾ ಅವರಿಗೆ ‘ವರ್ಷದ ಅತ್ಯುತ್ತಮ ವಿದ್ಯಾರ್ಥಿನಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>ಗಾಯತ್ರಿ ನಾಗರಾಜ್, ಶೀಲಾ ನಲ್ಲೂರು ಇದ್ದರು. ಪ್ರೇಮಾ ನಾಗರಾಜ್ ಸ್ವಾಗತಿಸಿದರು. ಮಮತಾ ವೆಂಕಟೇಶ್ ವಂದಿಸಿದರು. ಸುಜಾತಾ ಕೃಷ್ಣ ನಿರೂಪಿಸಿದರು.</p>.<p>ಮಕ್ಕಳ ಮೇಳದಲ್ಲಿ ಸಿ. ಕೇಶವಮೂರ್ತಿ ವಾಕ್ ಶ್ರವಣ ಕೇಂದ್ರ ‘ಸಾಹಸ್’ ಮಕ್ಕಳು, ವೃತ್ತಿ ತರಬೇತಿ ಕೇಂದ್ರ ‘ವಿಮೋಚನಾ’ ಮಕ್ಕಳು ನೃತ್ಯ ಪ್ರದರ್ಶಿಸಿದರು. ಪ್ರೇಮಾಲಯ ಸಂಸ್ಥೆಯ ಮಕ್ಕಳು ಯೋಗ ಪ್ರದರ್ಶನ ಮಾಡಿದರು.</p>.<p>* * *</p>.<p><strong>‘ಪ್ರೋತ್ಸಾಹವೇ ಶಕ್ತಿ’</strong></p>.<p>40 ವರ್ಷಗಳಿಂದ ಮಕ್ಕಳ ಮೇಳ ನಡೆಸಲಾಗುತ್ತಿದೆ. ಬಡವರ, ಅಶಕ್ತರ ಮಕ್ಕಳಿಗೆ ಅವಕಾಶ ಒದಗಿಸುವುದೇ ಇದರ ಉದ್ದೇಶ. ವಿಶೇಷ ಮಕ್ಕಳನ್ನು ಪ್ರೋತ್ಸಾಹಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಲಾಗುತ್ತಿದೆ ಎಂದು ಜಿಲ್ಲಾ ಶಿಶು ಕಲ್ಯಾಣ ಮಂಡಳಿ ಗೌರವಾಧ್ಯಕ್ಷೆ ಸಿ. ನಾಗಮ್ಮ ಕೇಶವಮೂರ್ತಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ವನಿತಾ ಸಮಾಜ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದೆ. ಸಂಸ್ಥೆಯ ಸದಸ್ಯೆಯರು ರಾಜಕೀಯಕ್ಕೂ ಬರಬೇಕು. ಇದರಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದು ಪಾಲಿಕೆ ಸದಸ್ಯ ಶಿವನಳ್ಳಿ ರಮೇಶ್ ಸಲಹೆ ನೀಡಿದರು.</p>.<p>ನಗರದ ವನಿತಾ ಸಮಾಜದಲ್ಲಿ ಶುಕ್ರವಾರ ಜಿಲ್ಲಾ ಶಿಶು ಕಲ್ಯಾಣ ಮಂಡಳಿ ಏರ್ಪಡಿಸಿದ್ದ ಮಕ್ಕಳ ಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಬುದ್ಧಿಮಾಂದ್ಯ, ಅಂಗವಿಕಲ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದಕ್ಕಾಗಿ ವನಿತಾ ಸಮಾಜದ ಅಂಗ ಸಂಸ್ಥೆಯಾದ ಜಿಲ್ಲಾ ಶಿಶು ಕಲ್ಯಾಣ ಮಂಡಳಿ ಅವಿರತವಾಗಿ ಶ್ರಮಿಸುತ್ತಿದೆ. ಈ ಮಹಿಳೆಯರಿಗೆ ರಾಜಕೀಯ ಶಕ್ತಿ ಸಿಕ್ಕರೆ ಇನ್ನಷ್ಟು ಮಾದರಿಯಾಗಿ ಕೆಲಸ ಮಾಡಬಲ್ಲರು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಾದರೂ ಸ್ಪರ್ಧಿಸಲು ಮನಸ್ಸು ಮಾಡಬೇಕು ಎಂದರು.</p>.<p>ಪಾಲಿಕೆ ಸದಸ್ಯೆ ವಿ. ಅಶ್ವಿನಿ ಮಾತನಾಡಿ, ‘ಮೊಬೈಲ್ ಮಹಾ ಮಾರಿಯಂತೆ ಮಕ್ಕಳ ಬಾಲ್ಯವನ್ನು ಹಾಳು ಮಾಡುತ್ತಿದೆ. ಮೊಬೈಲ್ ಗೀಳು ಪೀಳಿಗೆಯನ್ನೇ ನಾಶ ಮಾಡುತ್ತಿದೆ. ಟಿ.ವಿ.ಗಳು ಮಕ್ಕಳಲ್ಲಿ ಸೌಜನ್ಯ ಹಾಳು ಮಾಡುತ್ತಿವೆ. ಪೋಷಕರು ಮಕ್ಕಳನ್ನು ತಿದ್ದಿ, ಸರಿತಪ್ಪುಗಳನ್ನು ತಿಳಿಸಬೇಕು’ ಎಂದರು.</p>.<p>ಸಮಾಜ ಸೇವಕಿ ಅನಿತಾ ವಿರೂಪಾಕ್ಷಪ್ಪ ಅವರಿಗೆ ‘ಶಿಶುಸೇವಾ’, ತರಳಬಾಳು ಜಗದ್ಗುರು ಸಂಯುಕ್ತ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಎಚ್.ಬಿ. ಸಹನಾ ಅವರಿಗೆ ‘ವರ್ಷದ ಅತ್ಯುತ್ತಮ ವಿದ್ಯಾರ್ಥಿನಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>ಗಾಯತ್ರಿ ನಾಗರಾಜ್, ಶೀಲಾ ನಲ್ಲೂರು ಇದ್ದರು. ಪ್ರೇಮಾ ನಾಗರಾಜ್ ಸ್ವಾಗತಿಸಿದರು. ಮಮತಾ ವೆಂಕಟೇಶ್ ವಂದಿಸಿದರು. ಸುಜಾತಾ ಕೃಷ್ಣ ನಿರೂಪಿಸಿದರು.</p>.<p>ಮಕ್ಕಳ ಮೇಳದಲ್ಲಿ ಸಿ. ಕೇಶವಮೂರ್ತಿ ವಾಕ್ ಶ್ರವಣ ಕೇಂದ್ರ ‘ಸಾಹಸ್’ ಮಕ್ಕಳು, ವೃತ್ತಿ ತರಬೇತಿ ಕೇಂದ್ರ ‘ವಿಮೋಚನಾ’ ಮಕ್ಕಳು ನೃತ್ಯ ಪ್ರದರ್ಶಿಸಿದರು. ಪ್ರೇಮಾಲಯ ಸಂಸ್ಥೆಯ ಮಕ್ಕಳು ಯೋಗ ಪ್ರದರ್ಶನ ಮಾಡಿದರು.</p>.<p>* * *</p>.<p><strong>‘ಪ್ರೋತ್ಸಾಹವೇ ಶಕ್ತಿ’</strong></p>.<p>40 ವರ್ಷಗಳಿಂದ ಮಕ್ಕಳ ಮೇಳ ನಡೆಸಲಾಗುತ್ತಿದೆ. ಬಡವರ, ಅಶಕ್ತರ ಮಕ್ಕಳಿಗೆ ಅವಕಾಶ ಒದಗಿಸುವುದೇ ಇದರ ಉದ್ದೇಶ. ವಿಶೇಷ ಮಕ್ಕಳನ್ನು ಪ್ರೋತ್ಸಾಹಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಲಾಗುತ್ತಿದೆ ಎಂದು ಜಿಲ್ಲಾ ಶಿಶು ಕಲ್ಯಾಣ ಮಂಡಳಿ ಗೌರವಾಧ್ಯಕ್ಷೆ ಸಿ. ನಾಗಮ್ಮ ಕೇಶವಮೂರ್ತಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>