<p><strong>ದಾವಣಗೆರೆ:</strong> ಕರೂರು ಕೈಗಾರಿಕಾ ಪ್ರದೇಶದಲ್ಲಿ ಬಳಕೆ ಮಾಡದೇ ಇರುವ ಜಮೀನನ್ನು ಮರಳಿ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿ ಗುರುವಾರ ರಾಜ್ಯ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು `ಸಮಾಧಿ ಚಳವಳಿ~ ನಡೆಸಿದರು.</p>.<p>ವಿವಾದಿತ ಭೂಮಿಯಲ್ಲಿ ರೈತರೇ ದೊಡ್ಡ ಗುಂಡಿ ತೋಡಿ, ಅದರಲ್ಲಿ 50-60 ಮಂದಿ ಕುಳಿತು ತಮ್ಮನ್ನು ಜೀವಂತ ಸಮಾಧಿ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.</p>.<p>`ನಮ್ಮ ಭೂಮಿ ಕಸಿದುಕೊಂಡ ಸರ್ಕಾರ ನಮ್ಮ ಬದುಕನ್ನು ಹತ್ಯೆ ಮಾಡಿದೆ. ಈಗ ನಾವೇ ಸಮಾಧಿ ತೋಡಿದ್ದೇವೆ. ಜಿಲ್ಲಾಧಿಕಾರಿ ಅಥವಾ ಕೈಗಾರಿಕಾ ಸಚಿವರು ಸ್ಥಳಕ್ಕೆ ಆಗಮಿಸಿ ನಮ್ಮ ಮೇಲೆ ಮಣ್ಣು ಹಾಕಿ ಮುಚ್ಚಲಿ~ ಎಂದು ಆಗ್ರಹಿಸಿದರು.</p>.<p>ಕೈಗಾರಿಕಾ ಉದ್ದೇಶಕ್ಕಾಗಿ ಸರ್ಕಾರ 143.25 ಎಕರೆ ರೈತರ ಭೂಮಿ ವಶಪಡಿಸಿಕೊಂಡಿತ್ತು. ಆದರೆ, ಯಾವ ಉದ್ದೇಶಕ್ಕೆ ಭೂಮಿ ವಶಪಡಿಸಿಕೊಳ್ಳಲಾಗಿದೆಯೋ, ಅದೇ ಉದ್ದೇಶಕ್ಕೆ ಬಳಕೆಯಾಗಿರುವುದು ಕೇವಲ 10-12 ಎಕರೆ ಭೂಮಿ. ಉಳಿದ ಭೂಮಿಯನ್ನು ಕೆಲವರ ಹಿತಾಸಕ್ತಿಗಾಗಿ ನೀಡಲಾಗಿದೆ. ಇದುವರೆಗೂ ಅಲ್ಲಿ ಉದ್ದೇಶಿತ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. 40 ಎಕರೆ ಭೂಮಿ ಇದುವರೆಗೆ ಯಾರಿಗೂ ಹಂಚಿಲ್ಲ. ಆ ಭೂಮಿಯನ್ನು ನಿವೇಶನ ಕಳೆದುಕೊಂಡ 1,200 ಮಂದಿಗೆ ಹಂಚಬೇಕು. ರೈತರಿಗೆ ಇಂದಿನ ಮಾರುಕಟ್ಟೆ ಬೆಲೆಗೆ ತಕ್ಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.</p>.<p>ಪ್ರಭಾವಿ ರಾಜಕಾರಣಿಗಳಿಗೆ, ಕುಟುಂಬದ ಅನುಕೂಲಕ್ಕೆ ಬಿಜೆಪಿ ಸರ್ಕಾರ ಹೇಗೆ ಡೀನೋಟಿಫಿಕೇಶನ್ ಮಾಡಿದೆ ಎನ್ನುವುದು ರಾಜ್ಯದ ಜನತೆಗೆ ತಿಳಿದಿದೆ. ಈಗ ಕೂಲಿ ಕಾರ್ಮಿಕರು, ರೈತರ ಭೂಮಿ ಹಿಂದಿರುಗಿಸಲು ಡೀನೋಟಿಫಿಕೇಶನ್ ಮಾಡುವ ಮೂಲಕ ಪಾಪ ಪರಿಹಾರ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.</p>.<p>ರೈತ ಮುಖಂಡರಾದ ತೇಜಸ್ವಿ ವಿ. ಪಟೇಲ್, ವಾಸನದ ಓಂಕಾರಪ್ಪ, ಪೂಜಾರ್ ಅಂಜಿನಪ್ಪ, ಮರಡಿ ನಾಗಣ್ಣ, ಸೈಯದ್ ನಯಾಜ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಕರೂರು ಕೈಗಾರಿಕಾ ಪ್ರದೇಶದಲ್ಲಿ ಬಳಕೆ ಮಾಡದೇ ಇರುವ ಜಮೀನನ್ನು ಮರಳಿ ರೈತರಿಗೆ ನೀಡಬೇಕು ಎಂದು ಒತ್ತಾಯಿಸಿ ಗುರುವಾರ ರಾಜ್ಯ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು `ಸಮಾಧಿ ಚಳವಳಿ~ ನಡೆಸಿದರು.</p>.<p>ವಿವಾದಿತ ಭೂಮಿಯಲ್ಲಿ ರೈತರೇ ದೊಡ್ಡ ಗುಂಡಿ ತೋಡಿ, ಅದರಲ್ಲಿ 50-60 ಮಂದಿ ಕುಳಿತು ತಮ್ಮನ್ನು ಜೀವಂತ ಸಮಾಧಿ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.</p>.<p>`ನಮ್ಮ ಭೂಮಿ ಕಸಿದುಕೊಂಡ ಸರ್ಕಾರ ನಮ್ಮ ಬದುಕನ್ನು ಹತ್ಯೆ ಮಾಡಿದೆ. ಈಗ ನಾವೇ ಸಮಾಧಿ ತೋಡಿದ್ದೇವೆ. ಜಿಲ್ಲಾಧಿಕಾರಿ ಅಥವಾ ಕೈಗಾರಿಕಾ ಸಚಿವರು ಸ್ಥಳಕ್ಕೆ ಆಗಮಿಸಿ ನಮ್ಮ ಮೇಲೆ ಮಣ್ಣು ಹಾಕಿ ಮುಚ್ಚಲಿ~ ಎಂದು ಆಗ್ರಹಿಸಿದರು.</p>.<p>ಕೈಗಾರಿಕಾ ಉದ್ದೇಶಕ್ಕಾಗಿ ಸರ್ಕಾರ 143.25 ಎಕರೆ ರೈತರ ಭೂಮಿ ವಶಪಡಿಸಿಕೊಂಡಿತ್ತು. ಆದರೆ, ಯಾವ ಉದ್ದೇಶಕ್ಕೆ ಭೂಮಿ ವಶಪಡಿಸಿಕೊಳ್ಳಲಾಗಿದೆಯೋ, ಅದೇ ಉದ್ದೇಶಕ್ಕೆ ಬಳಕೆಯಾಗಿರುವುದು ಕೇವಲ 10-12 ಎಕರೆ ಭೂಮಿ. ಉಳಿದ ಭೂಮಿಯನ್ನು ಕೆಲವರ ಹಿತಾಸಕ್ತಿಗಾಗಿ ನೀಡಲಾಗಿದೆ. ಇದುವರೆಗೂ ಅಲ್ಲಿ ಉದ್ದೇಶಿತ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. 40 ಎಕರೆ ಭೂಮಿ ಇದುವರೆಗೆ ಯಾರಿಗೂ ಹಂಚಿಲ್ಲ. ಆ ಭೂಮಿಯನ್ನು ನಿವೇಶನ ಕಳೆದುಕೊಂಡ 1,200 ಮಂದಿಗೆ ಹಂಚಬೇಕು. ರೈತರಿಗೆ ಇಂದಿನ ಮಾರುಕಟ್ಟೆ ಬೆಲೆಗೆ ತಕ್ಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.</p>.<p>ಪ್ರಭಾವಿ ರಾಜಕಾರಣಿಗಳಿಗೆ, ಕುಟುಂಬದ ಅನುಕೂಲಕ್ಕೆ ಬಿಜೆಪಿ ಸರ್ಕಾರ ಹೇಗೆ ಡೀನೋಟಿಫಿಕೇಶನ್ ಮಾಡಿದೆ ಎನ್ನುವುದು ರಾಜ್ಯದ ಜನತೆಗೆ ತಿಳಿದಿದೆ. ಈಗ ಕೂಲಿ ಕಾರ್ಮಿಕರು, ರೈತರ ಭೂಮಿ ಹಿಂದಿರುಗಿಸಲು ಡೀನೋಟಿಫಿಕೇಶನ್ ಮಾಡುವ ಮೂಲಕ ಪಾಪ ಪರಿಹಾರ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.</p>.<p>ರೈತ ಮುಖಂಡರಾದ ತೇಜಸ್ವಿ ವಿ. ಪಟೇಲ್, ವಾಸನದ ಓಂಕಾರಪ್ಪ, ಪೂಜಾರ್ ಅಂಜಿನಪ್ಪ, ಮರಡಿ ನಾಗಣ್ಣ, ಸೈಯದ್ ನಯಾಜ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>