<p>ದಾವಣಗೆರೆ: ಸಮಗಾರ ಹರಳಯ್ಯ ಸಮಾಜದ ಏಳಿಗೆಗಾಗಿ ಕೈಲಾದಷ್ಟು ಶ್ರಮಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ನುಡಿದರು.<br /> <br /> ನಗರದ ಮಹಾತ್ಮ ಬಸವ ಬುದ್ಧ ಭೀಮಾ ನಗರದಲ್ಲಿ ಭಾನುವಾರ ನಡೆದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ನಗರ ಪಾಲಿಕೆಯ ಶೇ 22.75ರ ಅನುದಾನದ ಅಡಿಯಲ್ಲಿ ನಿರ್ಮಿಸಲಾದ ಲಿಡ್ಕರ್ ಕುಟೀರಗಳನ್ನು ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು. <br /> <br /> ಅತ್ಯಂತ ಹಿಂದುಳಿದ ಸಮಾಜಗಳ ಏಳ್ಗೆಗೆ ಸರ್ಕಾರವು ಶ್ರಮಿಸುತ್ತಿದೆ. ಸಮಗಾರ ಸಮಾಜಕ್ಕೆ ಕಲ್ಯಾಣ ಮಂಟಪದ ಅವಶ್ಯಕತೆ ಇದ್ದು, ಅದನ್ನು ಆದಷ್ಟು ಬೇಗ ನೆರವೇರಿಸಿ ಕೊಡುವುದಾಗಿ ತಿಳಿಸಿದರು. <br /> <br /> ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿ ಮಾತನಾಡಿ, ಸಮಗಾರ ಹರಳಯ್ಯ ತನ್ನ ತೊಡೆ ಚರ್ಮದಿಂದಲೇ ಪಾದರಕ್ಷೆ ತಯಾರಿಸಿ ಬಸವಣ್ಣ ಅವರಿಗೆ ಅರ್ಪಿಸಿದ ಮಹಾನ್ ವ್ಯಕ್ತಿ. ಸಮಗಾರರು ಸ್ವಂತ ಉದ್ಯೋಗಿಗಳಾಗಿ ಸಮಾಜದಲ್ಲಿ ಉತ್ತಮವಾಗಿ ಜೀವನ ನಿರ್ವಹಿಸಬೇಕು ಎಂದರು. <br /> <br /> ನ್ಯಾ.ಸದಾಶಿವ ಆಯೋಗದ ವರದಿಯಲ್ಲಿ ಸಮಗಾರ ಸಮಾಜಕ್ಕೆ ಯಾವುದೇ ಒಳಮೀಸಲಾತಿಯನ್ನು ನೀಡಲಾಗಿಲ್ಲ ಎಂಬ ಮಾಹಿತಿ ನೀಡಿದರು. <br /> <br /> ಕಾರ್ಯಕ್ರಮದಲ್ಲಿ ಫಕ್ಕಿರಪ್ಪ ಬೆಟಗೇರಿ, ಕೆ. ಬಾಬುಮಾನೆ, ಸುರೇಶ್ ಉಳ್ಳಿಕಾಶಿ, ರಾಜಶೇಖರ್ ತೆಲಗಾವಿ ಅವರನ್ನು ಸನ್ಮಾನಿಸಲಾಯಿತು. <br /> <br /> ಧಾರವಾಡದ ಮಾರ್ಕಂಡೆಯ ದೊಡಮನಿ, ಲಿಡ್ಕರ್ ನಿರ್ದೇಶಕ ಎನ್. ರಾಜಶೇಖರ್, ಉಪ ಮೇಯರ್ ಮಹೇಶ್ ರಾಯಚೂರು, ದಶರಥ ಹೆಗ್ಗೇಳಿಕರ್, ಜಗದೀಶ್ ಬೆಟಗೇರಿ, ಭೀಮಣ್ಣ ತೇರದಾಳ, ಯಲ್ಲಪ್ಪ ಬೆಂಡಿಗೇರಿ, ಡಾ.ಮೋಹನ ಉಳ್ಳಿಕಾಶಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ಸಮಗಾರ ಹರಳಯ್ಯ ಸಮಾಜದ ಏಳಿಗೆಗಾಗಿ ಕೈಲಾದಷ್ಟು ಶ್ರಮಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ನುಡಿದರು.<br /> <br /> ನಗರದ ಮಹಾತ್ಮ ಬಸವ ಬುದ್ಧ ಭೀಮಾ ನಗರದಲ್ಲಿ ಭಾನುವಾರ ನಡೆದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ನಗರ ಪಾಲಿಕೆಯ ಶೇ 22.75ರ ಅನುದಾನದ ಅಡಿಯಲ್ಲಿ ನಿರ್ಮಿಸಲಾದ ಲಿಡ್ಕರ್ ಕುಟೀರಗಳನ್ನು ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು. <br /> <br /> ಅತ್ಯಂತ ಹಿಂದುಳಿದ ಸಮಾಜಗಳ ಏಳ್ಗೆಗೆ ಸರ್ಕಾರವು ಶ್ರಮಿಸುತ್ತಿದೆ. ಸಮಗಾರ ಸಮಾಜಕ್ಕೆ ಕಲ್ಯಾಣ ಮಂಟಪದ ಅವಶ್ಯಕತೆ ಇದ್ದು, ಅದನ್ನು ಆದಷ್ಟು ಬೇಗ ನೆರವೇರಿಸಿ ಕೊಡುವುದಾಗಿ ತಿಳಿಸಿದರು. <br /> <br /> ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿ ಮಾತನಾಡಿ, ಸಮಗಾರ ಹರಳಯ್ಯ ತನ್ನ ತೊಡೆ ಚರ್ಮದಿಂದಲೇ ಪಾದರಕ್ಷೆ ತಯಾರಿಸಿ ಬಸವಣ್ಣ ಅವರಿಗೆ ಅರ್ಪಿಸಿದ ಮಹಾನ್ ವ್ಯಕ್ತಿ. ಸಮಗಾರರು ಸ್ವಂತ ಉದ್ಯೋಗಿಗಳಾಗಿ ಸಮಾಜದಲ್ಲಿ ಉತ್ತಮವಾಗಿ ಜೀವನ ನಿರ್ವಹಿಸಬೇಕು ಎಂದರು. <br /> <br /> ನ್ಯಾ.ಸದಾಶಿವ ಆಯೋಗದ ವರದಿಯಲ್ಲಿ ಸಮಗಾರ ಸಮಾಜಕ್ಕೆ ಯಾವುದೇ ಒಳಮೀಸಲಾತಿಯನ್ನು ನೀಡಲಾಗಿಲ್ಲ ಎಂಬ ಮಾಹಿತಿ ನೀಡಿದರು. <br /> <br /> ಕಾರ್ಯಕ್ರಮದಲ್ಲಿ ಫಕ್ಕಿರಪ್ಪ ಬೆಟಗೇರಿ, ಕೆ. ಬಾಬುಮಾನೆ, ಸುರೇಶ್ ಉಳ್ಳಿಕಾಶಿ, ರಾಜಶೇಖರ್ ತೆಲಗಾವಿ ಅವರನ್ನು ಸನ್ಮಾನಿಸಲಾಯಿತು. <br /> <br /> ಧಾರವಾಡದ ಮಾರ್ಕಂಡೆಯ ದೊಡಮನಿ, ಲಿಡ್ಕರ್ ನಿರ್ದೇಶಕ ಎನ್. ರಾಜಶೇಖರ್, ಉಪ ಮೇಯರ್ ಮಹೇಶ್ ರಾಯಚೂರು, ದಶರಥ ಹೆಗ್ಗೇಳಿಕರ್, ಜಗದೀಶ್ ಬೆಟಗೇರಿ, ಭೀಮಣ್ಣ ತೇರದಾಳ, ಯಲ್ಲಪ್ಪ ಬೆಂಡಿಗೇರಿ, ಡಾ.ಮೋಹನ ಉಳ್ಳಿಕಾಶಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>