<p><strong>ತ್ಯಾವಣಿಗೆ: </strong>ಮಾನವ ಸಂಪನ್ಮೂಲ ಹಾಗೂ ತಾಂಡಾಗಳು ಅಭಿವೃದ್ಧಿಯಾಗಬೇಕಾದರೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ವಲಯ ಸಮಾಜ ಕಲ್ಯಾಣಾಧಿಕಾರಿ ಹನುಮಂತಪ್ಪ ಅಭಿಪ್ರಾಯಪಟ್ಟರು.<br /> <br /> ಸಮೀಪದ ಕರೇಕಟ್ಟೆ ತಾಂಡದ ಸೇವಾಲಾಲ್ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ವಲಯ ಕಚೇರಿ ಹಾಗೂ ದಾವಣಗೆರೆ ಜಿಲ್ಲಾ ಬಂಜಾರ್ (ಲಂಬಾಣಿ) ಸೇವಾ ಸಂಘದ ಆಶ್ರಯದಲ್ಲಿ ನಡೆದ ತಾಂಡ ವಾಸಿಗಳಿಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. <br /> <br /> ಸಾರ್ವಜನಿಕರು ಸ್ವಂತ ಹಣ ಹಾಕಿ ಮಾಡುವ ಕೆಲಸ, ಕಾಮಗಾರಿ ಗುಣಮಟ್ಟದಿಂದ ಕೂಡಿರುತ್ತದೆ ಇದಕ್ಕೆ ಇಲ್ಲಿ ನಿರ್ಮಿಸಿರುವ ಸೇವಾಲಾಲ್ ದೇವಸ್ಥಾನವೇ ಸಾಕ್ಷಿಯಾಗಿದೆ. ಇಂದು ತಾಂಡಾಗಳು ಅಭಿವೃದ್ಧಿಯಾಗಬೇಕಾದರೆ ಎಲ್ಲರೂ ಶಿಕ್ಷಣ ಪಡೆಯುವುದು ಅಗತ್ಯ ಎಂದರು.<br /> <br /> ರಾಜ್ಯ ತಾಂಡಾ ಅಭಿವೃದ್ಧಿ ನಿಗಮವು ತಾಂಡಾಗಳ ಅಭಿವೃದ್ಧಿಗಾಗಿ ಅನೇಕ ಯೋಜನೆ ಹಾಕಿಕೊಂಡಿದೆ ಎಂದು ತಿಳಿಸಿದರು.<br /> ಹಿರಿಯ ವಕೀಲ ಜಯದೇವ ನಾಯ್ಕ ಮಾತನಾಡಿ, ಲಂಬಾಣಿ ಜನಾಂಗವು ಒಂದೇ ರೀತಿಯ ಭಾಷೆ, ಸಂಸ್ಕೃತಿ ಹೊಂದಿರುವುದು ವಿಶೇಷ ಎಂದು ಹೇಳಿದರು.<br /> <br /> ಹಿರಿಯ ಮುಖಂಡ ಚೂಡಾನಾಯ್ಕ, ಪತ್ರಕರ್ತ ಮಲ್ಲೇಶನಾಯ್ಕ, ತ್ಯಾವಣಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿರೂಪಾಕ್ಷಪ್ಪ ಮಾತನಾಡಿದರು.<br /> <br /> ಮೋಹನ್ಕುಮಾರ್, ಕುಬ್ಯಾನಾಯ್ಕ, ಕಾರಿಗನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಚ್.ರಾಜು, ಕರೇಕಟ್ಟೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಮಂಜುನಾಥ ಲಾಲ್, ಓಂಕಾರನಾಯ್ಕ, ಗೋವಿಂದಸ್ವಾಮಿ, ಮಲ್ಲೇಶ್ನಾಯ್ಕ ಇದ್ದರು.<br /> ನಂಜಾನಾಯ್ಕ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತ್ಯಾವಣಿಗೆ: </strong>ಮಾನವ ಸಂಪನ್ಮೂಲ ಹಾಗೂ ತಾಂಡಾಗಳು ಅಭಿವೃದ್ಧಿಯಾಗಬೇಕಾದರೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ವಲಯ ಸಮಾಜ ಕಲ್ಯಾಣಾಧಿಕಾರಿ ಹನುಮಂತಪ್ಪ ಅಭಿಪ್ರಾಯಪಟ್ಟರು.<br /> <br /> ಸಮೀಪದ ಕರೇಕಟ್ಟೆ ತಾಂಡದ ಸೇವಾಲಾಲ್ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ವಲಯ ಕಚೇರಿ ಹಾಗೂ ದಾವಣಗೆರೆ ಜಿಲ್ಲಾ ಬಂಜಾರ್ (ಲಂಬಾಣಿ) ಸೇವಾ ಸಂಘದ ಆಶ್ರಯದಲ್ಲಿ ನಡೆದ ತಾಂಡ ವಾಸಿಗಳಿಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. <br /> <br /> ಸಾರ್ವಜನಿಕರು ಸ್ವಂತ ಹಣ ಹಾಕಿ ಮಾಡುವ ಕೆಲಸ, ಕಾಮಗಾರಿ ಗುಣಮಟ್ಟದಿಂದ ಕೂಡಿರುತ್ತದೆ ಇದಕ್ಕೆ ಇಲ್ಲಿ ನಿರ್ಮಿಸಿರುವ ಸೇವಾಲಾಲ್ ದೇವಸ್ಥಾನವೇ ಸಾಕ್ಷಿಯಾಗಿದೆ. ಇಂದು ತಾಂಡಾಗಳು ಅಭಿವೃದ್ಧಿಯಾಗಬೇಕಾದರೆ ಎಲ್ಲರೂ ಶಿಕ್ಷಣ ಪಡೆಯುವುದು ಅಗತ್ಯ ಎಂದರು.<br /> <br /> ರಾಜ್ಯ ತಾಂಡಾ ಅಭಿವೃದ್ಧಿ ನಿಗಮವು ತಾಂಡಾಗಳ ಅಭಿವೃದ್ಧಿಗಾಗಿ ಅನೇಕ ಯೋಜನೆ ಹಾಕಿಕೊಂಡಿದೆ ಎಂದು ತಿಳಿಸಿದರು.<br /> ಹಿರಿಯ ವಕೀಲ ಜಯದೇವ ನಾಯ್ಕ ಮಾತನಾಡಿ, ಲಂಬಾಣಿ ಜನಾಂಗವು ಒಂದೇ ರೀತಿಯ ಭಾಷೆ, ಸಂಸ್ಕೃತಿ ಹೊಂದಿರುವುದು ವಿಶೇಷ ಎಂದು ಹೇಳಿದರು.<br /> <br /> ಹಿರಿಯ ಮುಖಂಡ ಚೂಡಾನಾಯ್ಕ, ಪತ್ರಕರ್ತ ಮಲ್ಲೇಶನಾಯ್ಕ, ತ್ಯಾವಣಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿರೂಪಾಕ್ಷಪ್ಪ ಮಾತನಾಡಿದರು.<br /> <br /> ಮೋಹನ್ಕುಮಾರ್, ಕುಬ್ಯಾನಾಯ್ಕ, ಕಾರಿಗನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಚ್.ರಾಜು, ಕರೇಕಟ್ಟೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಮಂಜುನಾಥ ಲಾಲ್, ಓಂಕಾರನಾಯ್ಕ, ಗೋವಿಂದಸ್ವಾಮಿ, ಮಲ್ಲೇಶ್ನಾಯ್ಕ ಇದ್ದರು.<br /> ನಂಜಾನಾಯ್ಕ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>