ಶಿವಮೊಗ್ಗ: ತುಮಕೂರಿನಲ್ಲಿ ಗುರುವಾರ ನಡೆದ ಪ್ರಧಾನಮಂತ್ರಿನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿಕಪ್ಪು ಬಾವುಟ ಪ್ರದರ್ಶಿಸಲು ಹೊರಟಿದ್ದರೈತರನ್ನು ಪೊಲೀಸರು ಬೆಳಗಿನ ಜಾವ ರೈಲುನಿಲ್ದಾಣದಲ್ಲೇಬಂಧಿಸಿದರು.
ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಎಸ್.ಬಸವರಾಜಪ್ಪ ಅವರ ನೇತೃತ್ವದಲ್ಲಿ25ಕ್ಕೂ ಹೆಚ್ಚು ರೈತರು ತುಮಕೂರಿಗೆ ಹೊರಟಿದ್ದರು. ಕೃಷಿ ಕ್ಷೇತ್ರಕ್ಕೆಸಮರ್ಪಕ ಯೋಜನೆ ರೂಪಿಸುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲು ತುಮಕೂರಿಗೆ ಹೊರಟಿದ್ದರು.
ಸಂಘದ ಜಿಲ್ಲಾಘಟಕದ ಅಧ್ಯಕ್ಷ ಎಸ್.ಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ.ಜಗದೀಶ್, ಮುಖಂಡರಾದ ಪಿ.ಡಿ.ಮಂಜಪ್ಪ, ಗುರುಶಾಂತ, ಸಿ.ಚಂದ್ರಪ್ಪ, ಜಿ.ಪಂಚಾಕ್ಷರಿಮತ್ತಿತರರು ಬಂಧಿತರು. ನಂತರ ಅವರನ್ನು ಬಿಡುಗಡೆ ಮಾಡಿದರು.