ಅದೇ ಕಾರಣಕ್ಕಾಗಿ ಹಲವರನ್ನು ವಿಚಾರಣೆ ಕೂಡ ನಡೆಸಲಾಗಿದೆ. ಈ ಪೈಕಿ, ಮಹಾಂತೇಶನ ಜೊತೆ ಹೆಚ್ಚು ಆತ್ಮೀಯವಾಗಿದ್ದವರು ಕೊಲೆಯ ಹಿಂದೆ ಇದ್ದಾರೆಯೇ ಎಂಬ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ. ಕೈವಾಡ ಇರುವುದರು ಖಚಿತವಾದರೆ ಅವರನ್ನು ಸಹ ಬಂಧಿಸಲಾಗುವುದು. ಸದ್ಯ ಆರೋಪಿಗಳ 6 ದಿನಗಳ ಪೊಲೀಸ್ ಕಸ್ಟಡಿ ಅವಧಿ ಜುಲೈ 12ರಂದು ಅಂತ್ಯಗೊಳ್ಳಲಿದೆ. ಅಂದು ಇಬ್ಬರನ್ನು ಕೋರ್ಟ್ಗೆ ಹಾಜರುಪಡಿಸಲಾಗವುದು. ಅಗತ್ಯವಿದ್ದರೆ, ಮತ್ತೆ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದರು.