‘ಭೂಮಿ ಕಳೆದುಕೊಂಡ ಗೋಕುಲದ ರೈತ ಕೃಷ್ಣಪ್ಪ ಬೆಳ್ಳೇರಿ ಮಾತನಾಡಿ, ‘ಕೆಐಎಡಿಬಿ ನಮ್ಮ ಜಮೀನನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಿದೆ. ಆದರೆ, 2022ರಲ್ಲಿ ನನ್ನ ಹೆಸರಲ್ಲಿ ಬ್ಯಾಂಕ್ನಲ್ಲಿ ನಕಲಿ ಖಾತೆ ತೆರೆದು ₹2.95 ಕೋಟಿ ಆರ್ಟಿಜಿಎಸ್ ಮಾಡಲಾಗಿದೆ. ನನ್ನ ಸೋದರ ನಾಗಪ್ಪ ಬೆಳ್ಳೇರಿ 2019ರಲ್ಲಿಯೇ ನಿಧನರಾಗಿದ್ದು, 2022ರಲ್ಲಿ ಅವರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ₹2.58 ಕೋಟಿ ವರ್ಗಾಯಿಸಿಕೊಳ್ಳಲಾಗಿದೆ’ ಎಂದು ಆರೋಪಿಸಿದರು.