ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೇಂದ್ರ ಸರ್ಕಾರ ಕುಡಿಯುವ ನೀರಿಗೆ ₹1,762 ಕೋಟಿ, ಬರ ನಿರ್ವಹಣೆಗೆ ಎನ್ಆರ್ಡಿಎಫ್ ಅನುದಾನದಲ್ಲಿ ₹ 7,170 ಕೋಟಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ₹ 1,755 ಕೋಟಿ, 14ನೇ ಹಣಕಾಸು ಯೋಜನೆಯಡಿ ₹ 2 ಲಕ್ಷ ಕೋಟಿ ನೀಡಿದೆ. ನಿರ್ಭಯಾ ಯೋಜನೆಗೆ ಕೊಟ್ಟ ಹಣ ಸರಿಯಾಗಿ ಬಳಕೆಯಾಗಿಲ್ಲ. ರೈಲ್ವೆ ಯೋಜನೆಗೂ ಕೇಂದ್ರ ಸಾಕಷ್ಟು ಹಣ ನೀಡಿದೆ’ ಎಂದರು.