ಧಾರವಾಡ: ಕೋವಿಡ್–19 ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದಾರೆ.
ಇಲ್ಲಿನ ಧಾರವಾಡ ಹೋಟೆಲ್ ಬಳಿಯಿಂದ ಮಂದಾರ ಹೋಟೆಲ್ ವರೆಗೆ ₹25ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಬೆಲ್ಲದ ಅವರು ಶುಕ್ರವಾರ ರಾತ್ರಿ 8ಕ್ಕೆ ಬರಬೇಕಿತ್ತು. ಆದರೆ ಅವರು ಬರುವ ಹೊತ್ತಿಗೆ 10 ಆಗಿತ್ತು. ಆ ಹೊತ್ತಿಗೆ ಬಂದ ಶಾಸಕರು ಭೂಮಿಪೂಜೆ ನೆರವೇರಿಸಿದರು. ಮಾಸ್ಕ್ ಧಾರಣೆಗೆ ತಿಲಾಂಜಲಿ ಹೇಳಲಾಗಿತ್ತು.
ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಸುರೇಶ ಬೆದರೆ, ಸುಕಂನರಾಜ ಬಫನಾ, ಟಿ.ಎಸ್.ಪಾಟೀಲ, ಮೋಹನ ರಾಮದುರ್ಗ, ಕೇದಾರನಾಥ ಚವ್ಹಾಣ, ರಮೇಶ ದೊಡ್ಡವಾಡ, ನಾಗರಾಜ ನಾಯಕ ಇದ್ದರು.