ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಕರ್ಫ್ಯೂ ವೇಳೆ ಭೂಮಿಪೂಜೆ ನೆರವೇರಿಸಿದ ಶಾಸಕ ಅರವಿಂದ ಬೆಲ್ಲದ

Last Updated 22 ಜನವರಿ 2022, 16:49 IST
ಅಕ್ಷರ ಗಾತ್ರ

ಧಾರವಾಡ: ಕೋವಿಡ್–19 ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದಾರೆ.

ಇಲ್ಲಿನ ಧಾರವಾಡ ಹೋಟೆಲ್ ಬಳಿಯಿಂದ ಮಂದಾರ ಹೋಟೆಲ್ ವರೆಗೆ ₹25ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಬೆಲ್ಲದ ಅವರು ಶುಕ್ರವಾರ ರಾತ್ರಿ 8ಕ್ಕೆ ಬರಬೇಕಿತ್ತು. ಆದರೆ ಅವರು ಬರುವ ಹೊತ್ತಿಗೆ 10 ಆಗಿತ್ತು. ಆ ಹೊತ್ತಿಗೆ ಬಂದ ಶಾಸಕರು ಭೂಮಿಪೂಜೆ ನೆರವೇರಿಸಿದರು. ಮಾಸ್ಕ್ ಧಾರಣೆಗೆ ತಿಲಾಂಜಲಿ ಹೇಳಲಾಗಿತ್ತು.

ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಸುರೇಶ ಬೆದರೆ, ಸುಕಂನರಾಜ ಬಫನಾ, ಟಿ.ಎಸ್.ಪಾಟೀಲ, ಮೋಹನ ರಾಮದುರ್ಗ, ಕೇದಾರನಾಥ ಚವ್ಹಾಣ, ರಮೇಶ ದೊಡ್ಡವಾಡ, ನಾಗರಾಜ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT