ಕಲಘಟಗಿ: ತಾಲ್ಲೂಕಿನ ಜೋಡಳ್ಳಿ ಗ್ರಾಮದ ಬಸವಣ್ಣ ದೇವರ ಜಾತ್ರಾ ಮಹೋತ್ಸವಕ್ಕೆ ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.
ಗ್ರಾಮೀಣ ಭಾಗದ ಜಾತ್ರೆಗಳು ತಾಲ್ಲೂಕಿನ ಘನತೆ,ಗೌರವ, ಸಂಸ್ಕೃತಿ ಎತ್ತಿ ತೋರಿಸುವಲ್ಲಿ ಸಾಕ್ಷಿಯಾಗಿವೆ ಎಂದು ಹೇಳಿದರು. ಗ್ರಾಮದಲ್ಲಿ ಮಹಿಳೆಯರಿಂದ ಕುಂಭಮೇಳ ಹಮ್ಮಿಕೊಳ್ಳಲಾಗಿತ್ತು. ಲಾಡ್ ಅವರು ಜಾತ್ರಾಮಹೋತ್ಸವದ ಅನ್ನ ದಾಸೋಹಕ್ಕೆ ₹ 1 ಲಕ್ಷ ಹಣ ದೇಣಿಗೆ ನೀಡಿದರು.
ಮಂಜುನಾಥ ಮುರಳ್ಳಿ, ಸೋಮಶೇಖರ ಬೆನ್ನೂರ, ಗಿರೀಶ ಸೂರ್ಯವಂಶಿ, ನರೇಶ ಮಲೆನಾಡ, ಗುರು ಬೆಂಗೇರಿ, ಶಿವಯ್ಯ ಹಿರೇಮಠ, ಚನ್ನಬಸಯ್ಯ ಹೆಬ್ಬಳಿಮಠ, ರುದ್ರಗೌಡ ಪಾಟೀಲ್ ಇದ್ದರು.