‘ಕಳೆದ ವರ್ಷ ಶೆಟ್ಟರ್ ಅವರ ಜೊತೆ ಪಕ್ಷ ತೊರೆದು ಹೋಗಿದ್ದ ಎಲ್ಲರನ್ನೂ ಮರುಸೇರ್ಪಡೆಗೊಳಿಸಲಾಗುವುದು. 27ರಂದು ಬೆಂಗಳೂರಿನಲ್ಲಿ ರಾಜ್ಯಸಭೆ ಚುನಾವಣೆ ಇದ್ದು, ಇದರಲ್ಲಿ ಪಾಲ್ಗೊಂಡ ನಂತರ ಪಕ್ಷದ ಜಿಲ್ಲೆಯ ಶಾಸಕರು ಮರುದಿನ ಹುಬ್ಬಳ್ಳಿಗೆ ಬರಲಿದ್ದಾರೆ. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆನ್ನುವ ಕಾರಣಕ್ಕಾಗಿ 28ರಂದು ದಿನಾಂಕ ನಿಗದಿ ಮಾಡಲಾಗಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.