ತುರ್ತಾಗಿ ಆಗಬೇಕಾದ ಕೆಲಸ: ‘ದೆಹಲಿಯಲ್ಲಿ ಕೇಂದ್ರ ಕಚೇರಿ ಇರುವುದರಿಂದ ಅಲ್ಲಿ ಪಂಜಾಬ್, ಉತ್ತರ ಪ್ರದೇಶ, ದೆಹಲಿ, ಮಧ್ಯಪ್ರದೇಶ ರಾಜ್ಯಗಳ ಕಲಾವಿದರದ್ದೇ ಪ್ರಾಬಲ್ಯ. ಇದರಿಂದಾಗಿ ದಕ್ಷಿಣದ ರಾಜ್ಯಗಳ ಕಲಾವಿದರಿಗೆ ಸಿಗಬೇಕಾದ ಫೆಲೋಷಿಪ್, ಸಂಗೀತ ಕಾರ್ಯಕ್ರಮಗಳು, ಪ್ರಶಸ್ತಿ, ಅಧ್ಯಕ್ಷ ಸ್ಥಾನ ಹಾಗೂ ಸದಸ್ಯತ್ವ ಹೀಗೆ ಎಲ್ಲಾ ಸೌಲಭ್ಯಗಳಲ್ಲಿ ಅನ್ಯಾಯವಾಗುತ್ತಿದೆ. ಸಂಗೀತಕ್ಕೆ ಸಂಬಂಧಿಸಿದ ಹೊಸ ಪ್ರಯೋಗ ಹಾಗೂ ಸಂಶೋಧನೆಗಳು ನಡೆಯುವುದು ಕೂಡ ದಕ್ಷಿಣದ ರಾಜ್ಯಗಳಲ್ಲಿಯೇ. ಇಲ್ಲಿ ಅಕಾಡೆಮಿ ಆರಂಭವಾದರೆ, ಸ್ಥಳೀಯ ಕಲಾವಿದರಿಗೆ ಆದ್ಯತೆ ಸಿಗುತ್ತದೆ. ಅಕಾಡೆಮಿಯನ್ನು ತುರ್ತಾಗಿ ಆರಂಭಿಸಬೇಕು’ ಎಂದು ಗಾಯಕ ಪಂಡಿತ್ ಕೈವಲ್ಯಕುಮಾರ್ ಪ್ರತಿಕ್ರಿಯಿಸಿದರು.