ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೀನಾಸಂ ಸತೀಶ ‘ನೈಜ ಘಟನೆಯೊಂದನ್ನು ಆಧರಿಸಿ ಚಿತ್ರ ನಿರ್ಮಿಸಲಾಗಿದೆ. ಗೋದ್ರಾ ಚಿತ್ರದ ನಿರ್ದೇಶಕ ಕೆಎಸ್. ನಂದೀಶ್ ಚಿತ್ರಕಥೆ ಹಾಗೂ ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ. ಯೂ ಟರ್ನ್ ಚಿತ್ರದ ಕಲಾವಿದರಾದ ರೋಜರ್ ನಾರಾಯಣ, ಕಿಶೋರ್, ಪವನ ಕುಮಾರ್, ಸರ್ದಾರ್ ಸತ್ಯ, ಗಿರಿಜಾ ಲೋಕೇಶ್ ಮತ್ತು ಅಚ್ಯುತ್ ಕುಮಾರ್ ಅಭಿನಯಿಸಿದ್ದಾರೆ’ ಎಂದರು.