ನಗರದ ಬೆಂಗೇರಿಯಲ್ಲಿರುವ ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ, ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಧ್ವಜ ಸಂಹಿತೆ ತಿದ್ದುಪಡಿ ಆತಂಕದ ವಿಷಯವಾಗಿದೆ. ಖಾದಿ ತ್ರಿವರ್ಣ ಧ್ವಜ ಭಾರತೀಯರ ಸ್ವಾಭಿಮಾನದ ಸಂಕೇತ. ಅದನ್ನು ಸಿದ್ಧಪಡಿಸಲು ಮಾನದಂಡಗಳಿವೆ. ಅದರ ಜೊತೆ ಜನರಲ್ಲಿ ಅವಿನಾಭಾವ ಸಂಬಂಧಗಳು ಅಡಗಿದೆ ಎಂದರು.