<p><strong>ಧಾರವಾಡ: ಖ</strong>ರೀದಿದಾರನಿಂದ ಹಣ ಪಡೆದು ಪ್ಲಾಟ್ ನೋಂದಣಿ ಮಾಡಿಕೊಡದ ಪ್ರಕರಣದಲ್ಲಿ ಹುಬ್ಬಳ್ಳಿಯ ವಾಸವಿ ಹೆರಿಟೇಜ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಖರೀದಿದಾರಗೆ ಬಡ್ಡಿಸಮೇತ ಹಣ ವಾಪಸ್ ನೀಡುವಂತೆ ಆದೇಶಿಸಿದೆ.</p>.<p>ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಆದೇಶ ನೀಡಿದ್ದಾರೆ. ಪರಿಹಾರ ₹50 ಸಾವಿರ, ಪ್ರಕರಣದ ವೆಚ್ಚ ₹10 ಸಾವಿರ ನೀಡಬೇಕು, ಖರೀದಿದಾರಗೆ ಕೊಡಬೇಕಿದ್ದ ₹5.63 ಲಕ್ಷಕ್ಕೆ ವಾರ್ಷಿಕ ಶೇ10ಬಡ್ಡಿ ಲೆಕ್ಕ ಹಾಕಿ ಮೊತ್ತ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.</p>.<p>ಏನಿದು ಪ್ರಕರಣ?: ಹುಬ್ಬಳ್ಳಿಯ ಮಿಶ್ರಿಕೋಟಿಯಲ್ಲಿ ವಾಸವಿ ಹೆರಿಟೇಜ್ ಸಂಸ್ಥೆ ಅಭಿವೃದ್ದಿಪಡಿಸುತ್ತಿದ್ದ ಪ್ಲಾಟೊಂದನ್ನು ಧಾರವಾಡದ ರವೀಂದ್ರನಗರದ ನಿವಾಸಿ ಶಿಕ್ಷಕಿ ಪ್ರೆಸಿಲ್ಲಾ ರೋಜಾರಿಯೊ ಅವರು ಖರೀದಿಸಿ, ₹ 6.35 ಲಕ್ಷ ಪಾವತಿಸಿದ್ದರು.</p>.<p>ನೋಂದಣಿ ಖರೀದಿ ಪತ್ರ ಮಾಡಸಿಕೊಡುವಂತೆ ಸಂಸ್ಥೆಯ ಮಹಾಲಕ್ಷ್ಮಿ ಬೊಸ್ಲೆ ಮತ್ತು ಸಂದೀಪ್ ಶಿಂದೆ ಅವರಿಗೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ, ಅವರು ಸ್ಪಂದಿಸಿರಲಿಲ್ಲ.</p>.<p>ಕಾನೂನು ನೋಟಿಸ್ ನೀಡಿದರೂ ನೋಂದಣಿ ಮಾಡಿಕೊಟ್ಟಿರಲಿಲ್ಲ. ಹಣ ವಾಪಸ್ ನೀಡುವಂತೆ ಕೇಳಿದಾಗ, ₹72 ಸಾವಿರ ಕೊಟ್ಟಿದ್ದರು. ಬಾಕಿ ಹಣ ಕೊಟ್ಟಿರಲಿಲ್ಲ. ಪ್ರೆಸಿಲ್ಲಾ ಅವರು ಆಗಸ್ಟ್ 4ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ: ಖ</strong>ರೀದಿದಾರನಿಂದ ಹಣ ಪಡೆದು ಪ್ಲಾಟ್ ನೋಂದಣಿ ಮಾಡಿಕೊಡದ ಪ್ರಕರಣದಲ್ಲಿ ಹುಬ್ಬಳ್ಳಿಯ ವಾಸವಿ ಹೆರಿಟೇಜ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಖರೀದಿದಾರಗೆ ಬಡ್ಡಿಸಮೇತ ಹಣ ವಾಪಸ್ ನೀಡುವಂತೆ ಆದೇಶಿಸಿದೆ.</p>.<p>ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಆದೇಶ ನೀಡಿದ್ದಾರೆ. ಪರಿಹಾರ ₹50 ಸಾವಿರ, ಪ್ರಕರಣದ ವೆಚ್ಚ ₹10 ಸಾವಿರ ನೀಡಬೇಕು, ಖರೀದಿದಾರಗೆ ಕೊಡಬೇಕಿದ್ದ ₹5.63 ಲಕ್ಷಕ್ಕೆ ವಾರ್ಷಿಕ ಶೇ10ಬಡ್ಡಿ ಲೆಕ್ಕ ಹಾಕಿ ಮೊತ್ತ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.</p>.<p>ಏನಿದು ಪ್ರಕರಣ?: ಹುಬ್ಬಳ್ಳಿಯ ಮಿಶ್ರಿಕೋಟಿಯಲ್ಲಿ ವಾಸವಿ ಹೆರಿಟೇಜ್ ಸಂಸ್ಥೆ ಅಭಿವೃದ್ದಿಪಡಿಸುತ್ತಿದ್ದ ಪ್ಲಾಟೊಂದನ್ನು ಧಾರವಾಡದ ರವೀಂದ್ರನಗರದ ನಿವಾಸಿ ಶಿಕ್ಷಕಿ ಪ್ರೆಸಿಲ್ಲಾ ರೋಜಾರಿಯೊ ಅವರು ಖರೀದಿಸಿ, ₹ 6.35 ಲಕ್ಷ ಪಾವತಿಸಿದ್ದರು.</p>.<p>ನೋಂದಣಿ ಖರೀದಿ ಪತ್ರ ಮಾಡಸಿಕೊಡುವಂತೆ ಸಂಸ್ಥೆಯ ಮಹಾಲಕ್ಷ್ಮಿ ಬೊಸ್ಲೆ ಮತ್ತು ಸಂದೀಪ್ ಶಿಂದೆ ಅವರಿಗೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ, ಅವರು ಸ್ಪಂದಿಸಿರಲಿಲ್ಲ.</p>.<p>ಕಾನೂನು ನೋಟಿಸ್ ನೀಡಿದರೂ ನೋಂದಣಿ ಮಾಡಿಕೊಟ್ಟಿರಲಿಲ್ಲ. ಹಣ ವಾಪಸ್ ನೀಡುವಂತೆ ಕೇಳಿದಾಗ, ₹72 ಸಾವಿರ ಕೊಟ್ಟಿದ್ದರು. ಬಾಕಿ ಹಣ ಕೊಟ್ಟಿರಲಿಲ್ಲ. ಪ್ರೆಸಿಲ್ಲಾ ಅವರು ಆಗಸ್ಟ್ 4ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>