<p><strong>ಹುಬ್ಬಳ್ಳಿ</strong>: ಭಾನುವಾರದ ಅಕ್ಷಯ ತೃತೀಯ ಹಾಗೂ ಮದುವೆ ಸೀಸನ್ ಬಂಗಾರದ ಖರೀದಿ ಸಂಭ್ರಮಕ್ಕೆ ಕೊರೊನಾ ಕರಿನೆರಳು ಆವರಿಸಿಕೊಂಡಿದೆ. ಆನ್ಲೈನ್ನಲ್ಲಿ ಖರೀದಿಸಲು ಕೆಲವು ಅಂಗಡಿಗಳವರು ಅವಕಾಶ ನೀಡಿದ್ದಾರಾದರೂ ಚಿನ್ನ ಈಗ ಸಿಗುವುದಿಲ್ಲ.</p>.<p>ಏಪ್ರಿಲ್– ಮೇ ತಿಂಗಳಗಳಲ್ಲಿ ಮದುವೆ ಮುಹೂರ್ತಗಳು ಜಾಸ್ತಿ. ಮದುವೆಗೆ ತಾಳಿ, ಚೈನ್, ಉಂಗುರ, ನೆಕ್ಲೆಸ್, ಕಿವಿಯೋಲೆ ಸೇರಿದಂತೆ ಹತ್ತು ಹಲವು ಬಂಗಾರದ ಆಭರಣಗಳನ್ನು ಜನರು ಖರೀದಿಸುತ್ತಿದ್ದರು. ಒಂದು ತಿಂಗಳಿಂದ ಲಾಕ್ಡೌನ್ ಇರುವುದರಿಂದ ಅಂಗಡಿಗಳು ತೆರೆದಿಲ್ಲ.</p>.<p>ಚಿನ್ನಾಭರಣದ ಅಂಗಡಿಗಳು ತೆರೆದಿಲ್ಲವಾದರೂ ಅಕ್ಷಯ ತೃತೀಯದ ಲಾಭ ಪಡೆಯಲು ಮಲಬಾರ್ ಗೋಲ್ಡ್ ಸೇರಿದಂತೆ ಕೆಲವು ಮಳಿಗೆಗಳವರು ಆನ್ಲೈನ್ನಲ್ಲಿ ಮುಂಗಡ ಖರೀದಿಗೆ ಅವಕಾಶ ಕಲ್ಪಿಸಿದ್ದಾರೆ. ಹಲವಾರು ರಿಯಾಯ್ತಿಗಳನ್ನೂ ಘೋಷಿಸಿದ್ದಾರೆ. ಆ ಆಭರಣಗಳೂ ಲಾಕ್ಡೌನ್ ಮುಗಿದ ಮೇಲೆಯೇ ಗ್ರಾಹಕರ ಕೈ ಸೇರುತ್ತವೆ.</p>.<p>ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಒಳ್ಳೆಯದು ಎಂಬ ನಂಬಿಕೆ ಹಿನ್ನೆಲೆಯಲ್ಲಿ ಬಹಳಷ್ಟು ಜನರು ಖರೀದಿ ಮಾಡುತ್ತಾರೆ. ಆದರೆ, ಈ ಬಾರಿ ಖರೀದಿಗೆ ಅವಕಾಶವಿಲ್ಲದಂತಾಗಿದೆ. ಬೃಹತ್ ಮಳಿಗೆಯವರು ಆನ್ಲೈನ್ ಮೂಲಕ ಅವಕಾಶ ನೀಡಿರುವರಾದರೂ ಚಿನ್ನ ಮಾತ್ರ ಈಗ ಸಿಗುವುದಿಲ್ಲ.</p>.<p>ಅಕ್ಷಯ ತೃತೀಯದಂದು ಆನ್ಲೈನ್ ಮೂಲಕ ಚಿನ್ನ ಖರೀದಿ ಮಾಡುವವರಿಗೆ ತಯಾರಿಕೆಯ ವೆಚ್ಚದಲ್ಲಿ ರಿಯಾಯ್ತಿ ನೀಡಲಾಗುತ್ತಿದೆ. ಇವತ್ತಿನ ಬೆಲೆಗೆ ಚಿನ್ನವನ್ನು ಮುಂಗಡವಾಗಿ ಕಾಯ್ದಿರಿಸಿದ್ದರೂ, ಚಿನ್ನ ಪಡೆಯುವ ದಿನ ಬೆಲೆ ಕಡಿಮೆ ಇದ್ದರೆ ಆ ಬೆಲೆಗೇ ಚಿನ್ನ ನೀಡಲಾಗುತ್ತದೆ. ಹೆಚ್ಚಿದ್ದರೆ, ಮುಂಗಡ ನೀಡಿದ ದಿನದ ಬೆಲೆಗೆ ನೀಡಲಾಗುತ್ತದೆ ಎಂದು ಮಲಬಾರ್ ಗೋಲ್ಡ್ನ ಶಶಾಂಕ ಏಕಬೋಟೆ ತಿಳಿಸಿದರು.</p>.<p>‘ಯುಗಾದಿಯಿಂದಲೇ ಚಿನ್ನ ಖರೀದಿ ಆರಂಭವಾಗುತ್ತಿತ್ತು. ಮದುವೆಗಳಿಗೆ ಹಾಗೂ ಅಕ್ಷಯ ತೃತೀಯ ದಿನದಂದು ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು. ಬೆಂಗಳೂರು ನಂತರ ಹುಬ್ಬಳ್ಳಿಯದ್ದೇ ದೊಡ್ಡ ವಹಿವಾಟು ₹ 6 ಕೋಟಿ ಮೌಲ್ಯದ ಚಿನ್ನ ಒಂದೇ ದಿನ ಮಾರಾಟವಾಗುತ್ತಿತ್ತು’ ಎಂದು ಜುವೆಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಪರಶುರಾಮ ಚಿಲ್ಲಾಳ.</p>.<p>ಅಸೋಸಿಯೇಷನ್ಗೆ 180 ಮಳಿಗೆಗಳವರು ಸದಸ್ಯರಾಗಿದ್ದಾರೆ. ಇವರಲ್ಲದೆ 120 ಮಳಿಗೆಗಳಿವೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಬಂದ್ ಮಾಡಿದ್ದೇವೆ. ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಸರ್ಕಾರದ ನಿರ್ದೇಶನ ಪಾಲಿಸುತ್ತದ್ದೇವೆ’ ಎಂದು ಅವರು ತಿಳಿಸಿದರು.</p>.<p>ಬಂಗಾರದ ಆಭರಣಗಳನ್ನು ಮಾಡುತ್ತಿದ್ದ ಅಕ್ಕಸಾಲಿಗರೂ ತಿಂಗಳಿಂದ ಕೆಲಸವಿಲ್ಲದೆ ಸುಮ್ಮನೆ ಕುಳಿತುಕೊಳ್ಳುವಂತಾಗಿದೆ. ದುಡಿಯುವ ಸಮಯದಲ್ಲಿ ಕೆಲಸವಿಲ್ಲದಂತಾಗಿರುವುದರಿಂದ ಅವರೆಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>**</p>.<p>ಚಿನ್ನದ ಅಂಗಡಿಗಳು ಬಂದ್ ಆಗಿರುವುದರಿಂದ ಮಾಲೀಕರಿಗೆ, ನೌಕರರಿಗೆ, ಆಭರಣ ತಯಾರಕರಿಗೆ, ಗ್ರಾಹಕರಿಗೆ ತೊಂದರೆಯಾಗಿದೆ<br /><em><strong>-ಪರಶುರಾಮ ಚಿಲ್ಲಾಳ, ಅಧ್ಯಕ್ಷ, ಜುವೆಲ್ಲರ್ಸ್ ಅಸೋಸಿಯೇಷನ್, ಹುಬ್ಬಳ್ಳಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಭಾನುವಾರದ ಅಕ್ಷಯ ತೃತೀಯ ಹಾಗೂ ಮದುವೆ ಸೀಸನ್ ಬಂಗಾರದ ಖರೀದಿ ಸಂಭ್ರಮಕ್ಕೆ ಕೊರೊನಾ ಕರಿನೆರಳು ಆವರಿಸಿಕೊಂಡಿದೆ. ಆನ್ಲೈನ್ನಲ್ಲಿ ಖರೀದಿಸಲು ಕೆಲವು ಅಂಗಡಿಗಳವರು ಅವಕಾಶ ನೀಡಿದ್ದಾರಾದರೂ ಚಿನ್ನ ಈಗ ಸಿಗುವುದಿಲ್ಲ.</p>.<p>ಏಪ್ರಿಲ್– ಮೇ ತಿಂಗಳಗಳಲ್ಲಿ ಮದುವೆ ಮುಹೂರ್ತಗಳು ಜಾಸ್ತಿ. ಮದುವೆಗೆ ತಾಳಿ, ಚೈನ್, ಉಂಗುರ, ನೆಕ್ಲೆಸ್, ಕಿವಿಯೋಲೆ ಸೇರಿದಂತೆ ಹತ್ತು ಹಲವು ಬಂಗಾರದ ಆಭರಣಗಳನ್ನು ಜನರು ಖರೀದಿಸುತ್ತಿದ್ದರು. ಒಂದು ತಿಂಗಳಿಂದ ಲಾಕ್ಡೌನ್ ಇರುವುದರಿಂದ ಅಂಗಡಿಗಳು ತೆರೆದಿಲ್ಲ.</p>.<p>ಚಿನ್ನಾಭರಣದ ಅಂಗಡಿಗಳು ತೆರೆದಿಲ್ಲವಾದರೂ ಅಕ್ಷಯ ತೃತೀಯದ ಲಾಭ ಪಡೆಯಲು ಮಲಬಾರ್ ಗೋಲ್ಡ್ ಸೇರಿದಂತೆ ಕೆಲವು ಮಳಿಗೆಗಳವರು ಆನ್ಲೈನ್ನಲ್ಲಿ ಮುಂಗಡ ಖರೀದಿಗೆ ಅವಕಾಶ ಕಲ್ಪಿಸಿದ್ದಾರೆ. ಹಲವಾರು ರಿಯಾಯ್ತಿಗಳನ್ನೂ ಘೋಷಿಸಿದ್ದಾರೆ. ಆ ಆಭರಣಗಳೂ ಲಾಕ್ಡೌನ್ ಮುಗಿದ ಮೇಲೆಯೇ ಗ್ರಾಹಕರ ಕೈ ಸೇರುತ್ತವೆ.</p>.<p>ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಒಳ್ಳೆಯದು ಎಂಬ ನಂಬಿಕೆ ಹಿನ್ನೆಲೆಯಲ್ಲಿ ಬಹಳಷ್ಟು ಜನರು ಖರೀದಿ ಮಾಡುತ್ತಾರೆ. ಆದರೆ, ಈ ಬಾರಿ ಖರೀದಿಗೆ ಅವಕಾಶವಿಲ್ಲದಂತಾಗಿದೆ. ಬೃಹತ್ ಮಳಿಗೆಯವರು ಆನ್ಲೈನ್ ಮೂಲಕ ಅವಕಾಶ ನೀಡಿರುವರಾದರೂ ಚಿನ್ನ ಮಾತ್ರ ಈಗ ಸಿಗುವುದಿಲ್ಲ.</p>.<p>ಅಕ್ಷಯ ತೃತೀಯದಂದು ಆನ್ಲೈನ್ ಮೂಲಕ ಚಿನ್ನ ಖರೀದಿ ಮಾಡುವವರಿಗೆ ತಯಾರಿಕೆಯ ವೆಚ್ಚದಲ್ಲಿ ರಿಯಾಯ್ತಿ ನೀಡಲಾಗುತ್ತಿದೆ. ಇವತ್ತಿನ ಬೆಲೆಗೆ ಚಿನ್ನವನ್ನು ಮುಂಗಡವಾಗಿ ಕಾಯ್ದಿರಿಸಿದ್ದರೂ, ಚಿನ್ನ ಪಡೆಯುವ ದಿನ ಬೆಲೆ ಕಡಿಮೆ ಇದ್ದರೆ ಆ ಬೆಲೆಗೇ ಚಿನ್ನ ನೀಡಲಾಗುತ್ತದೆ. ಹೆಚ್ಚಿದ್ದರೆ, ಮುಂಗಡ ನೀಡಿದ ದಿನದ ಬೆಲೆಗೆ ನೀಡಲಾಗುತ್ತದೆ ಎಂದು ಮಲಬಾರ್ ಗೋಲ್ಡ್ನ ಶಶಾಂಕ ಏಕಬೋಟೆ ತಿಳಿಸಿದರು.</p>.<p>‘ಯುಗಾದಿಯಿಂದಲೇ ಚಿನ್ನ ಖರೀದಿ ಆರಂಭವಾಗುತ್ತಿತ್ತು. ಮದುವೆಗಳಿಗೆ ಹಾಗೂ ಅಕ್ಷಯ ತೃತೀಯ ದಿನದಂದು ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು. ಬೆಂಗಳೂರು ನಂತರ ಹುಬ್ಬಳ್ಳಿಯದ್ದೇ ದೊಡ್ಡ ವಹಿವಾಟು ₹ 6 ಕೋಟಿ ಮೌಲ್ಯದ ಚಿನ್ನ ಒಂದೇ ದಿನ ಮಾರಾಟವಾಗುತ್ತಿತ್ತು’ ಎಂದು ಜುವೆಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಪರಶುರಾಮ ಚಿಲ್ಲಾಳ.</p>.<p>ಅಸೋಸಿಯೇಷನ್ಗೆ 180 ಮಳಿಗೆಗಳವರು ಸದಸ್ಯರಾಗಿದ್ದಾರೆ. ಇವರಲ್ಲದೆ 120 ಮಳಿಗೆಗಳಿವೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಬಂದ್ ಮಾಡಿದ್ದೇವೆ. ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಸರ್ಕಾರದ ನಿರ್ದೇಶನ ಪಾಲಿಸುತ್ತದ್ದೇವೆ’ ಎಂದು ಅವರು ತಿಳಿಸಿದರು.</p>.<p>ಬಂಗಾರದ ಆಭರಣಗಳನ್ನು ಮಾಡುತ್ತಿದ್ದ ಅಕ್ಕಸಾಲಿಗರೂ ತಿಂಗಳಿಂದ ಕೆಲಸವಿಲ್ಲದೆ ಸುಮ್ಮನೆ ಕುಳಿತುಕೊಳ್ಳುವಂತಾಗಿದೆ. ದುಡಿಯುವ ಸಮಯದಲ್ಲಿ ಕೆಲಸವಿಲ್ಲದಂತಾಗಿರುವುದರಿಂದ ಅವರೆಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>**</p>.<p>ಚಿನ್ನದ ಅಂಗಡಿಗಳು ಬಂದ್ ಆಗಿರುವುದರಿಂದ ಮಾಲೀಕರಿಗೆ, ನೌಕರರಿಗೆ, ಆಭರಣ ತಯಾರಕರಿಗೆ, ಗ್ರಾಹಕರಿಗೆ ತೊಂದರೆಯಾಗಿದೆ<br /><em><strong>-ಪರಶುರಾಮ ಚಿಲ್ಲಾಳ, ಅಧ್ಯಕ್ಷ, ಜುವೆಲ್ಲರ್ಸ್ ಅಸೋಸಿಯೇಷನ್, ಹುಬ್ಬಳ್ಳಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>