ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚಕ್ರವರ್ತಿ ಎಂಬಾತ ಯುವತಿ ಮನೆ ಮುಂದೆ ಧರಣಿ ಕುಳಿತಿದ್ದ ಯುವಕ. ಮ್ಯಾಟ್ರಿಮೊನಿಯಲ್ಲಿ ಇಬ್ಬರೂ ಪರಸ್ಪರ ಮೆಚ್ಚಿಕೊಂಡಿದ್ದ ಕಾರಣಕ್ಕೆ ಮದುವೆ ಮಾಡಿಕೊಡುವುದಾಗಿ ಯುವತಿ ಕಡೆಯವರು ಆರಂಭದಲ್ಲಿ ಮಾತುಕೊಟ್ಟಿದ್ದರು. ಆದರೆ, ಜಾತಿ ಬೇರೆ ಎಂಬ ಕಾರಣಕ್ಕೆ ಮದುವೆ ಮಾಡಿಕೊಡಲು ನಿರಾಕರಿಸಿದ್ದಾರ ಎನ್ನಲಾಗಿದೆ. ಇದರಿಂದ ನೊಂದ ಆತ ಯುವತಿ ಮನೆ ಮುಂದೆ ಧರಣಿ ಕುಳಿತಿದ್ದ ಎಂದು ತಿಳಿದುಬಂದಿದೆ.