ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ಕ್ರಮ ಡಿ.ಕೆ. ಶಿವಕುಮಾರ್ ಅವರಿಗೆ ಮುನ್ನಡೆಯೋ, ಹಿನ್ನೆಡೆಯೋ ಅವರವರ ವಿಚಾರಕ್ಕೆ ಬಿಟ್ಟಿದ್ದು. ಮೇಲ್ಮನವಿಯನ್ನು ವಿಭಾಗೀಯ ಪೀಠದಲ್ಲಿ ಹಿಂಪಡೆದಿದ್ದಾರೆ. ಆದರೆ, ಏಕಸದಸ್ಯ ಪೀಠ ವಿಚಾರಣೆ ಮುಂದುವರಿಸಲು ಹೇಳಿತ್ತು. ಮೇಲ್ಮನವಿ ಹಿಂಪಡೆಯಲಾಗಿದೆ ಎಂದರೆ, ಕೋರ್ಟ್ ಒಪ್ಪಿದೆ ಎಂದರ್ಥವಲ್ಲ’ ಎಂದರು.