<p><strong>ಧಾರವಾಡ</strong>: ‘ನಾಮದೇವ ಡಸಾಳ್, ಪವಾರ್ ಹಾಗೂ ರಾಜಾ ಈ ಮೂವರು ಮಹಾರಾಷ್ಟ್ರದಲ್ಲಿ ದಲಿತ ಪ್ಯಾಂಥರ್ಸ್ ಚಳವಳಿ ಪ್ರಾರಂಭಿಸಿದರು. ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ಕಟ್ಟಿದ ಸಾಮಾಜಿಕ, ರಾಜಕೀಯ, ಆರ್ಥಿಕ ಚಳವಳಿ ಇದು’ ಎಂದು ಹೋರಾಟಗಾರ ಸಿದ್ದನಗೌಡ ಪಾಟೀಲ ಹೇಳಿದರು.</p>.<p>ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಬುಧವಾರ ನಡೆದ ‘ದಲಿತ ಪ್ಯಾಂಥರ್ಸ್’ (ಕನ್ನಡ ಅನುವಾದ) ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.</p>.<p>‘ದಲಿತ ಪ್ಯಾಂಥರ್ಸ್’ ರಾಜಕೀಯ ಸಂಘಟನೆಯಾಗಿತ್ತು, ರಾಜಕೀಯ ಪಕ್ಷವಾಗಿರಲಿಲ್ಲ. ಶೋಷಣೆಯ ವಿರುದ್ಧ ಹೋರಾಟದ ಧ್ವನಿಯಾಗಿತ್ತು. ಈ ಚಳವಳಿ ಮಧ್ಯಪ್ರದೇಶ, ದೆಹಲಿ, ಕರ್ನಾಟಕ ಸಹಿತ ವಿವಿಧೆಡೆಗಳಲ್ಲಿ ಪ್ರಭಾವ ಬೀರಿತು. ದೌರ್ಜನ್ಯಗಳನ್ನು ಪ್ರತಿರೋಧಿಸುವ ಮಾದರಿಗಳನ್ನು ನೀಡಿದ, ಒಂದು ಜನಾಂಗದ ಕಣ್ಣು ತೆರೆಸಿದ ಚಳವಳಿ ಇದು ಎಂದರು.</p>.<p>‘ಈ ಚಳವಳಿ ಇದ್ದದ್ದು ಐದು ವರ್ಷ ಮಾತ್ರ. ಅಷ್ಟರಲ್ಲಿ ಬಹಳಷ್ಟು ತಲ್ಲಣ ಉಂಟು ಮಾಡಿತು. ದಲಿತ ಪ್ಯಾಂಥರ್ಸ್ನಿಂದ ದಲಿತರ ಮೇಲಿನ ದೌರ್ಜನ್ಯಗಳು ಕಡಿಮೆಯಾದವು. ಚಳವಳಿ ಕಟ್ಟಿದ ಮೂವರ ನಂತರದ (1982) ತಲೆಮಾರಿನವರ ಮೇಲೆ ದೊಡ್ಡ ಪ್ರಭಾವ ಬೀರಿತು’ ಎಂದರು.</p>.<p>ಜೆ.ವಿ.ಪವಾರ್ ಅವರ ‘ದಲಿತ ಪ್ಯಾಂಥರ್ಸ್’ ಕೃತಿಯನ್ನು ಲೇಖಕ ಸದಾಶಿವ ಮಿರ್ಜಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯನ್ನು ಎಲ್ಲರೂ ಓದಬೇಕು. ಈ ಚಳವಳಿಯ ಕುರಿತು ತಿಳಿದುಕೊಳ್ಳಬೇಕು ಎಂದು ಹೇಳಿದರು.</p>.<p>ಭಾಷಾಂತರ ಇಲಾಖೆ ನಿರ್ದೇಶಕ ಎಂ.ವೆಂಕಟೇಶ ಮಾತನಾಡಿ, ‘ಭಾರತೀಯ ಪರಂಪರೆಯೇ ಚಳವಳಿಗಳ ಪರಂಪರೆ. ಗಾಂಧೀಜಿ ಮತ್ತು ಅಂಬೇಡ್ಕರ್ ಅವರು ಚಳವಳಿಗಳ ಇತಿಹಾಸದ ಕಣ್ಣಗಳು’ ಎಂದರು.</p>.<p>ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.</p>. <p>ಪುಸ್ತಕ ವಿವರ ಕೃತಿ: ದಲಿತ ಪ್ಯಾಂಥರ್ಸ್ ಕೃತಿಕಾರ: ಜೆ.ವಿ.ಪವಾರ್ ಅನುವಾದ: ಸದಾಶಿವ ಮಿರ್ಜಿ ಪ್ರಕಾಶನ: ಕ್ರಿಯಾ ಮಾಧ್ಯಮ ಬೆಂಗಳೂರು ಪುಟ:332 ಬೆಲೆ: ₹ 370</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ‘ನಾಮದೇವ ಡಸಾಳ್, ಪವಾರ್ ಹಾಗೂ ರಾಜಾ ಈ ಮೂವರು ಮಹಾರಾಷ್ಟ್ರದಲ್ಲಿ ದಲಿತ ಪ್ಯಾಂಥರ್ಸ್ ಚಳವಳಿ ಪ್ರಾರಂಭಿಸಿದರು. ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ಕಟ್ಟಿದ ಸಾಮಾಜಿಕ, ರಾಜಕೀಯ, ಆರ್ಥಿಕ ಚಳವಳಿ ಇದು’ ಎಂದು ಹೋರಾಟಗಾರ ಸಿದ್ದನಗೌಡ ಪಾಟೀಲ ಹೇಳಿದರು.</p>.<p>ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಬುಧವಾರ ನಡೆದ ‘ದಲಿತ ಪ್ಯಾಂಥರ್ಸ್’ (ಕನ್ನಡ ಅನುವಾದ) ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.</p>.<p>‘ದಲಿತ ಪ್ಯಾಂಥರ್ಸ್’ ರಾಜಕೀಯ ಸಂಘಟನೆಯಾಗಿತ್ತು, ರಾಜಕೀಯ ಪಕ್ಷವಾಗಿರಲಿಲ್ಲ. ಶೋಷಣೆಯ ವಿರುದ್ಧ ಹೋರಾಟದ ಧ್ವನಿಯಾಗಿತ್ತು. ಈ ಚಳವಳಿ ಮಧ್ಯಪ್ರದೇಶ, ದೆಹಲಿ, ಕರ್ನಾಟಕ ಸಹಿತ ವಿವಿಧೆಡೆಗಳಲ್ಲಿ ಪ್ರಭಾವ ಬೀರಿತು. ದೌರ್ಜನ್ಯಗಳನ್ನು ಪ್ರತಿರೋಧಿಸುವ ಮಾದರಿಗಳನ್ನು ನೀಡಿದ, ಒಂದು ಜನಾಂಗದ ಕಣ್ಣು ತೆರೆಸಿದ ಚಳವಳಿ ಇದು ಎಂದರು.</p>.<p>‘ಈ ಚಳವಳಿ ಇದ್ದದ್ದು ಐದು ವರ್ಷ ಮಾತ್ರ. ಅಷ್ಟರಲ್ಲಿ ಬಹಳಷ್ಟು ತಲ್ಲಣ ಉಂಟು ಮಾಡಿತು. ದಲಿತ ಪ್ಯಾಂಥರ್ಸ್ನಿಂದ ದಲಿತರ ಮೇಲಿನ ದೌರ್ಜನ್ಯಗಳು ಕಡಿಮೆಯಾದವು. ಚಳವಳಿ ಕಟ್ಟಿದ ಮೂವರ ನಂತರದ (1982) ತಲೆಮಾರಿನವರ ಮೇಲೆ ದೊಡ್ಡ ಪ್ರಭಾವ ಬೀರಿತು’ ಎಂದರು.</p>.<p>ಜೆ.ವಿ.ಪವಾರ್ ಅವರ ‘ದಲಿತ ಪ್ಯಾಂಥರ್ಸ್’ ಕೃತಿಯನ್ನು ಲೇಖಕ ಸದಾಶಿವ ಮಿರ್ಜಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯನ್ನು ಎಲ್ಲರೂ ಓದಬೇಕು. ಈ ಚಳವಳಿಯ ಕುರಿತು ತಿಳಿದುಕೊಳ್ಳಬೇಕು ಎಂದು ಹೇಳಿದರು.</p>.<p>ಭಾಷಾಂತರ ಇಲಾಖೆ ನಿರ್ದೇಶಕ ಎಂ.ವೆಂಕಟೇಶ ಮಾತನಾಡಿ, ‘ಭಾರತೀಯ ಪರಂಪರೆಯೇ ಚಳವಳಿಗಳ ಪರಂಪರೆ. ಗಾಂಧೀಜಿ ಮತ್ತು ಅಂಬೇಡ್ಕರ್ ಅವರು ಚಳವಳಿಗಳ ಇತಿಹಾಸದ ಕಣ್ಣಗಳು’ ಎಂದರು.</p>.<p>ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.</p>. <p>ಪುಸ್ತಕ ವಿವರ ಕೃತಿ: ದಲಿತ ಪ್ಯಾಂಥರ್ಸ್ ಕೃತಿಕಾರ: ಜೆ.ವಿ.ಪವಾರ್ ಅನುವಾದ: ಸದಾಶಿವ ಮಿರ್ಜಿ ಪ್ರಕಾಶನ: ಕ್ರಿಯಾ ಮಾಧ್ಯಮ ಬೆಂಗಳೂರು ಪುಟ:332 ಬೆಲೆ: ₹ 370</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>