ಆರ್.ಎನ್. ಶೆಟ್ಟಿ ರಸ್ತೆ ಸಮೀಪದ ಗಣೇಶ ನಗರದಲ್ಲಿ ಸೋಂಕು ದೃಢಪಟ್ಟಿದೆ. ಆದ್ದರಿಂದ ಮಠದ ಮುಂಭಾಗದಲ್ಲಿದ್ದ ಕಟ್ಟೆಯ ಕೆಳಗಿನಿಂದಲೇ ಭಕ್ತರು ದರ್ಶನ ಪಡೆಯಬೇಕಾಗಿದೆ. ಲಾಕ್ಡೌನ್ ಅವಧಿ ಪೂರ್ಣಗೊಂಡ ಬಳಿಕ ಭಕ್ತರಿಗೆ ಕಟ್ಟೆಯ ಮೇಲೆ ಕುಳಿತುಕೊಳ್ಳಲು ಅವಕಾಶ ಕೊಡಲಾಗಿತ್ತು. ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಸುರಕ್ಷತಾ ಅಂತರ ಪಾಲನೆಗೆ ಒತ್ತು ಕೊಡಲಾಗಿದೆ. ಮಠದ ಭಕ್ತರೇ ಸೇರಿಕೊಂಡು ಕಬ್ಬಿಣದ ಬ್ಯಾರಿಕೇಡ್ಗಳನ್ನು ಹಾಕಿದ್ದಾರೆ.