<p><strong>ಧಾರವಾಡ:</strong> ತಾಲ್ಲೂಕಿನ ತಡಕೋಡ ಗ್ರಾಮಕ್ಕೆವಸತಿ ಯೋಜನೆ ಅಡಿ ಹೆಚ್ಚುವರಿ 150 ಮನೆಗಳನ್ನು ನೀಡುವಂತೆ ಆಗ್ರಹಿಸಿ, ಗ್ರಾಮ ಪಂಚಾಯ್ತಿ ಸದಸ್ಯ ಭೀಮಪ್ಪ ಕಾಸಾಯಿ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸುಶೀಲಾ ಅವರಿಗೆ ಮನವಿ ಸಲ್ಲಿಸಿದರು.</p>.<p>‘ತಡಕೋಡ ಗ್ರಾಮವು ಸೇರಿದಂತೆ ಧಾರವಾಡ ತಾಲ್ಲೂಕಿನ ಎಲ್ಲ ಗ್ರಾಮಗಳ ಜನಸಂಖ್ಯೆಗೆ ಅನುಗುಣವಾಗಿ ವಸತಿ ಮನೆಗಳನ್ನು ಮಂಜೂರು ಮಾಡಬೇಕಿದ್ದ ಸರ್ಕಾರ, ಎಲ್ಲ ಗ್ರಾಮಗಳಿಗೆ ಕಡಿಮೆ ಮನೆಗಳನ್ನು ಹಂಚಿಕೆ ಮಾಡಿರುವುದು ಅವೈಜ್ಞಾನಿಕ ಮತ್ತು ಅಸಮರ್ಪಕ ಕ್ರಮವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಯೋಜನೆ ಅಡಿ ವಸತಿ ಮನೆಗಳು ಮಂಜೂರಾಗಿಲ್ಲ. ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿಯಿಂದಾಗಿ ಅನೇಕರು ವಸತಿ ರಹಿತರಾಗಿದ್ದು, ಅಂತಹ ಅರ್ಹರಿಗೆ ವಸತಿ ಮನೆಗಳ ಹಂಚಿಕೆಯಾಗಿಲ್ಲ’ ಎಂದರು.</p>.<p>‘ಸರ್ಕಾರವು ಪ್ರಸ್ತುತ ವಿವಿಧ ಯೋಜನೆಗಳ ಅಡಿ ನೀಡುತ್ತಿರುವ ಮನೆಗಳ ಸಂಖ್ಯೆಗೂ ಫಲಾನುಭವಿಗಳ ಸಂಖ್ಯೆಗೂ ಅಜಗಜಾಂತರವಿದೆ. ಸರ್ಕಾರವು ಇದರ ಕುರಿತು ಗಮನ ಹರಿಸಿ ಅಗತ್ಯವಿರುವ ಹೆಚ್ಚುವರಿ ಮನೆಗಳನ್ನುಪ್ರಸಕ್ತ ಹಣಕಾಸಿನ ವರ್ಷದಲ್ಲಿಯೇ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.</p>.<p>ಪ್ರಕಾಶ ಹೂಗಾರ, ನೀಲಕಂಠ ಕಲ್ಲೂರ, ಮಂಜುಳಾ ಹೂಲಮನಿ, ಮಾರುತಿ ಭಾಂಗಡೆ, ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ತಾಲ್ಲೂಕಿನ ತಡಕೋಡ ಗ್ರಾಮಕ್ಕೆವಸತಿ ಯೋಜನೆ ಅಡಿ ಹೆಚ್ಚುವರಿ 150 ಮನೆಗಳನ್ನು ನೀಡುವಂತೆ ಆಗ್ರಹಿಸಿ, ಗ್ರಾಮ ಪಂಚಾಯ್ತಿ ಸದಸ್ಯ ಭೀಮಪ್ಪ ಕಾಸಾಯಿ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸುಶೀಲಾ ಅವರಿಗೆ ಮನವಿ ಸಲ್ಲಿಸಿದರು.</p>.<p>‘ತಡಕೋಡ ಗ್ರಾಮವು ಸೇರಿದಂತೆ ಧಾರವಾಡ ತಾಲ್ಲೂಕಿನ ಎಲ್ಲ ಗ್ರಾಮಗಳ ಜನಸಂಖ್ಯೆಗೆ ಅನುಗುಣವಾಗಿ ವಸತಿ ಮನೆಗಳನ್ನು ಮಂಜೂರು ಮಾಡಬೇಕಿದ್ದ ಸರ್ಕಾರ, ಎಲ್ಲ ಗ್ರಾಮಗಳಿಗೆ ಕಡಿಮೆ ಮನೆಗಳನ್ನು ಹಂಚಿಕೆ ಮಾಡಿರುವುದು ಅವೈಜ್ಞಾನಿಕ ಮತ್ತು ಅಸಮರ್ಪಕ ಕ್ರಮವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಯೋಜನೆ ಅಡಿ ವಸತಿ ಮನೆಗಳು ಮಂಜೂರಾಗಿಲ್ಲ. ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿಯಿಂದಾಗಿ ಅನೇಕರು ವಸತಿ ರಹಿತರಾಗಿದ್ದು, ಅಂತಹ ಅರ್ಹರಿಗೆ ವಸತಿ ಮನೆಗಳ ಹಂಚಿಕೆಯಾಗಿಲ್ಲ’ ಎಂದರು.</p>.<p>‘ಸರ್ಕಾರವು ಪ್ರಸ್ತುತ ವಿವಿಧ ಯೋಜನೆಗಳ ಅಡಿ ನೀಡುತ್ತಿರುವ ಮನೆಗಳ ಸಂಖ್ಯೆಗೂ ಫಲಾನುಭವಿಗಳ ಸಂಖ್ಯೆಗೂ ಅಜಗಜಾಂತರವಿದೆ. ಸರ್ಕಾರವು ಇದರ ಕುರಿತು ಗಮನ ಹರಿಸಿ ಅಗತ್ಯವಿರುವ ಹೆಚ್ಚುವರಿ ಮನೆಗಳನ್ನುಪ್ರಸಕ್ತ ಹಣಕಾಸಿನ ವರ್ಷದಲ್ಲಿಯೇ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.</p>.<p>ಪ್ರಕಾಶ ಹೂಗಾರ, ನೀಲಕಂಠ ಕಲ್ಲೂರ, ಮಂಜುಳಾ ಹೂಲಮನಿ, ಮಾರುತಿ ಭಾಂಗಡೆ, ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>