ಇಡೀ ಗ್ರಾಮದಲ್ಲಿ ವಿದ್ಯುದ್ದೀಪ ಮತ್ತಿತರ ಅಲಂಕಾರಗಳನ್ನು ಮಾಡಲಾಗಿದೆ. ಮೇ 1ರಿಂದ 10ರವರೆಗೆ ಪ್ರತಿದಿನ ಸಂಜೆ 7ಕ್ಕೆ ಕಲ್ಲಿನಾಥ ಶಾಸ್ತ್ರಿ ಅವರಿಂದ ಪ್ರವಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೇ 1ರಂದು ಬ್ರಾಹ್ಮಿ ಮುಹೂರ್ತದಲ್ಲಿ ಸಂಕಲ್ಪ, ಕಳಾಕರ್ಷಣೆ, ಹೋಮದೃಷ್ಟಿ, ಬರೆಯುವುದು, ಮಾಂಗಲ್ಯ ಧಾರಣೆ, ಉಡಿ ತುಂಬುವುದು, ಸಂಜೆ 7ಕ್ಕೆ ಹೊನ್ನಾಟ ನಡೆಯಲಿದೆ. ಮೇ 2ರಿಂದ 4ರವರೆಗೆ ದೇವಿಯರ ಹೊನ್ನಾಟ, ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮೇ 5ರಂದು ಮಧ್ಯಾಹ್ನ ಗ್ರಾಮದೇವಿಯರ ರಥೋತ್ಸವ ನಡೆಯಲಿದೆ.