<p><strong>ಧಾರವಾಡ</strong>: ‘ಆರ್ಯ (ಪಿ.ಆರ್.ಆಚಾರ್ಯ) ಅವರು ಬಹುಮುಖ ಪ್ರತಿಭೆಯಾಗಿದ್ದರು. ಅವರು ಚಿತ್ರಕಲೆ, ಸಾಹಿತ್ಯದಲ್ಲಿ ಪಾಂಡಿತ್ಯ ಗಳಿಸಿದ್ದರು’ ಎಂದು ಅಥಣಿಯ ವಿಮೋಚನಾ ದೇವದಾಸಿ ಪುನರ್ವಸತಿ ಸಂಸ್ಥೆ ಅಧ್ಯಕ್ಷ ಬಿ.ಎಲ್.ಪಾಟೀಲ ಹೇಳಿದರು.</p>.<p>ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದ ಭವನದಲ್ಲಿ ಭಾನುವಾರ ನಡೆದ ‘ಆರ್ಯ ಸ್ಮರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಆರ್ಯ ಅವರು ಸರಳ ಜೀವನ ನಡೆಸಿದರು. ಅವರ ಚಿಂತನೆಗಳು ಉನ್ನತವಾಗಿದ್ದವು. ಅಥಣಿಯ ದೇವದಾಸಿಯರ ಮಕ್ಕಳ ಅಭ್ಯುದಯಕ್ಕೆ ಶ್ರಮಿಸಿದರು ಎಂದರು.</p>.<p>ಚಿತ್ರ ಕಲಾವಿದೆ ಗಾಯತ್ರಿ ದೇಸಾಯಿ ಮಾತನಾಡಿ, ‘ಆರ್ಯ ಅವರು ಜ್ಞಾನ ಸಂಪಾದನೆಗೆ ಆದ್ಯತೆ ನೀಡಿದ್ದರು. ಪಡೆದುಕೊಂಡ ಜ್ಞಾನವನ್ನು ಪಸರಿಸುತ್ತಿದ್ದರು. ಚಿತ್ರಕಲೆಯಲ್ಲಿ ತಮ್ಮದೇ ವಿಶಿಷ್ಟ ಶೈಲಿ ರೂಢಿಸಿಕೊಂಡಿದ್ದರು’ ಎಂದು ತಿಳಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಜಿ.ಸಿ.ತಲ್ಲೂರ ಮಾತನಾಡಿ, ಉಡುಪಿಯಿಂದ ಧಾರವಾಡಕ್ಕೆ ಬಂದ ಆರ್ಯ ಅವರು ಸದಾ ಕ್ರಿಯಾಶೀಲರು. ಸಮಯ ನಿರ್ವಹಣೆ, ಶಿಸ್ತುಬದ್ಧತೆ ರೂಢಿಸಿಕೊಂಡಿದ್ದರು ಎಂದರು. ಲಾತವ್ಯ ಆಚಾರ್ಯ ಮಾತನಾಡಿದರು. ಲೇಖಕ ಹ.ವೆಂ.ಕಾಖಂಡಿಕಿ ನಿರೂಪಿಸಿದರು.</p>.<p>‘ಆರ್ಯರ ಸೃಜನಶೀಲ ಸಾಹಿತ್ಯ: ನಾಟಕ’ ಗೋಷ್ಠಿಯಲ್ಲಿ ಪ್ರಕಾಶ ಗರುಡ, ವಿಜಯಸಿಂಹ ಆಚಾರ್ಯ, ಶಶಿಧರ ನರೇಂದ್ರ ಹಾಗೂ ‘ಆರ್ಯ ಅವರ ಸೃಜನಶೀಲ ಸಾಹಿತ್ಯ: ಕಥೆಗಳು’ ಗೋಷ್ಠಿಯಲ್ಲಿ ಶಾಮಸುಂದರ ಬಿದರಕುಂದಿ, ಹರ್ಷ ಡಂಬಳ, ವಿನಾಯಕ ನಾಯಕ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ‘ಆರ್ಯ (ಪಿ.ಆರ್.ಆಚಾರ್ಯ) ಅವರು ಬಹುಮುಖ ಪ್ರತಿಭೆಯಾಗಿದ್ದರು. ಅವರು ಚಿತ್ರಕಲೆ, ಸಾಹಿತ್ಯದಲ್ಲಿ ಪಾಂಡಿತ್ಯ ಗಳಿಸಿದ್ದರು’ ಎಂದು ಅಥಣಿಯ ವಿಮೋಚನಾ ದೇವದಾಸಿ ಪುನರ್ವಸತಿ ಸಂಸ್ಥೆ ಅಧ್ಯಕ್ಷ ಬಿ.ಎಲ್.ಪಾಟೀಲ ಹೇಳಿದರು.</p>.<p>ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದ ಭವನದಲ್ಲಿ ಭಾನುವಾರ ನಡೆದ ‘ಆರ್ಯ ಸ್ಮರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಆರ್ಯ ಅವರು ಸರಳ ಜೀವನ ನಡೆಸಿದರು. ಅವರ ಚಿಂತನೆಗಳು ಉನ್ನತವಾಗಿದ್ದವು. ಅಥಣಿಯ ದೇವದಾಸಿಯರ ಮಕ್ಕಳ ಅಭ್ಯುದಯಕ್ಕೆ ಶ್ರಮಿಸಿದರು ಎಂದರು.</p>.<p>ಚಿತ್ರ ಕಲಾವಿದೆ ಗಾಯತ್ರಿ ದೇಸಾಯಿ ಮಾತನಾಡಿ, ‘ಆರ್ಯ ಅವರು ಜ್ಞಾನ ಸಂಪಾದನೆಗೆ ಆದ್ಯತೆ ನೀಡಿದ್ದರು. ಪಡೆದುಕೊಂಡ ಜ್ಞಾನವನ್ನು ಪಸರಿಸುತ್ತಿದ್ದರು. ಚಿತ್ರಕಲೆಯಲ್ಲಿ ತಮ್ಮದೇ ವಿಶಿಷ್ಟ ಶೈಲಿ ರೂಢಿಸಿಕೊಂಡಿದ್ದರು’ ಎಂದು ತಿಳಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಜಿ.ಸಿ.ತಲ್ಲೂರ ಮಾತನಾಡಿ, ಉಡುಪಿಯಿಂದ ಧಾರವಾಡಕ್ಕೆ ಬಂದ ಆರ್ಯ ಅವರು ಸದಾ ಕ್ರಿಯಾಶೀಲರು. ಸಮಯ ನಿರ್ವಹಣೆ, ಶಿಸ್ತುಬದ್ಧತೆ ರೂಢಿಸಿಕೊಂಡಿದ್ದರು ಎಂದರು. ಲಾತವ್ಯ ಆಚಾರ್ಯ ಮಾತನಾಡಿದರು. ಲೇಖಕ ಹ.ವೆಂ.ಕಾಖಂಡಿಕಿ ನಿರೂಪಿಸಿದರು.</p>.<p>‘ಆರ್ಯರ ಸೃಜನಶೀಲ ಸಾಹಿತ್ಯ: ನಾಟಕ’ ಗೋಷ್ಠಿಯಲ್ಲಿ ಪ್ರಕಾಶ ಗರುಡ, ವಿಜಯಸಿಂಹ ಆಚಾರ್ಯ, ಶಶಿಧರ ನರೇಂದ್ರ ಹಾಗೂ ‘ಆರ್ಯ ಅವರ ಸೃಜನಶೀಲ ಸಾಹಿತ್ಯ: ಕಥೆಗಳು’ ಗೋಷ್ಠಿಯಲ್ಲಿ ಶಾಮಸುಂದರ ಬಿದರಕುಂದಿ, ಹರ್ಷ ಡಂಬಳ, ವಿನಾಯಕ ನಾಯಕ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>