<p><strong>ಧಾರವಾಡ:</strong> ಕನ್ನಡ ಸಿನಿಮಾಗಳು ಜಗತ್ತಿನಲ್ಲಿ ಹೆಸರು ಮಾಡುತ್ತಿವೆ.ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರು ಪ್ರೋತ್ಸಾಹ ನೀಡಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.</p>.<p>ಕರ್ನಾಟಕ ಕಾಲೇಜು (ಕೆಸಿಡಿ) ಮೈದಾನದಲ್ಲಿ ಗುರುವಾರ ನಡೆದ ‘ಲ್ಯಾಂಡ್ ಲಾರ್ಡ್’ ಸಿನಿಮಾ ಟೀಸರ್ ಹಾಗೂ ರೋಮಾಂಚಕ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಲ್ಯಾಂಡ್ ಲಾರ್ಡ್’ ಸಿನಿಮಾ ಈ ನೆಲದ ಕಥೆಯಾಗಿದ್ದು, ಜ.23 ರಂದು ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಬೇಕು ಎಂದರು.</p>.<p>ಲ್ಯಾಂಡ್ ಲಾರ್ಡ್ ಸಿನೆಮಾದ ನಿರ್ದೇಶಕರು ಧಾರವಾಡದವರೇ. ನಿರ್ಮಾಪಕರು ಉತ್ತರ ಕರ್ನಾಟಕ ಜನರು ಎಂದರು.</p>.<p>ನಟಿ ರಚಿತಾ ರಾಮ್ ಮಾತನಾಡಿ, ಧಾರವಾಡ ಜನರ ಪ್ರೀತಿ ಫೇಡಾದಷ್ಟೆ ರುಚಿಯಾಗಿದೆ. ನಮ್ಮ ಮಣ್ಣಿನ ಸಿನಿಮಾವನ್ನು ಎಲ್ಲರೂ ನೋಡಬೇಕು. ‘ನಿಂಗವ್ವ ನಿಂಗವ್ವ...’ ಹಾಡು ಹಿಟ್ ಆಗಿದೆ ಎಂದರು.</p>.<p>ನಟಿ ಭಾವನಾ ರಾವ್, ಗಾಯಕಿ ಪೃಥ್ವಿ ಭಟ್ , ಮಾಜಿ ಶಾಸಕಿ ಸೀಮಾ ಮಸೂತಿ, ಗುರುರಾಜ ಹುಣಸೀಮರದ, ನಾಗೇಶ ಕಲಬುರ್ಗಿ ಪಾಲ್ಗೊಂಡಿದ್ದರು.</p>
<p><strong>ಧಾರವಾಡ:</strong> ಕನ್ನಡ ಸಿನಿಮಾಗಳು ಜಗತ್ತಿನಲ್ಲಿ ಹೆಸರು ಮಾಡುತ್ತಿವೆ.ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರು ಪ್ರೋತ್ಸಾಹ ನೀಡಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.</p>.<p>ಕರ್ನಾಟಕ ಕಾಲೇಜು (ಕೆಸಿಡಿ) ಮೈದಾನದಲ್ಲಿ ಗುರುವಾರ ನಡೆದ ‘ಲ್ಯಾಂಡ್ ಲಾರ್ಡ್’ ಸಿನಿಮಾ ಟೀಸರ್ ಹಾಗೂ ರೋಮಾಂಚಕ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಲ್ಯಾಂಡ್ ಲಾರ್ಡ್’ ಸಿನಿಮಾ ಈ ನೆಲದ ಕಥೆಯಾಗಿದ್ದು, ಜ.23 ರಂದು ಬಿಡುಗಡೆಯಾಗಲಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಬೇಕು ಎಂದರು.</p>.<p>ಲ್ಯಾಂಡ್ ಲಾರ್ಡ್ ಸಿನೆಮಾದ ನಿರ್ದೇಶಕರು ಧಾರವಾಡದವರೇ. ನಿರ್ಮಾಪಕರು ಉತ್ತರ ಕರ್ನಾಟಕ ಜನರು ಎಂದರು.</p>.<p>ನಟಿ ರಚಿತಾ ರಾಮ್ ಮಾತನಾಡಿ, ಧಾರವಾಡ ಜನರ ಪ್ರೀತಿ ಫೇಡಾದಷ್ಟೆ ರುಚಿಯಾಗಿದೆ. ನಮ್ಮ ಮಣ್ಣಿನ ಸಿನಿಮಾವನ್ನು ಎಲ್ಲರೂ ನೋಡಬೇಕು. ‘ನಿಂಗವ್ವ ನಿಂಗವ್ವ...’ ಹಾಡು ಹಿಟ್ ಆಗಿದೆ ಎಂದರು.</p>.<p>ನಟಿ ಭಾವನಾ ರಾವ್, ಗಾಯಕಿ ಪೃಥ್ವಿ ಭಟ್ , ಮಾಜಿ ಶಾಸಕಿ ಸೀಮಾ ಮಸೂತಿ, ಗುರುರಾಜ ಹುಣಸೀಮರದ, ನಾಗೇಶ ಕಲಬುರ್ಗಿ ಪಾಲ್ಗೊಂಡಿದ್ದರು.</p>