ಮಜೇಥಿಯಾ ಫೌಂಡೇಷನ್ ಮತ್ತು ಸಂಸ್ಕೃತ ಭಾರತಿ ಸಹಯೋಗದಲ್ಲಿ ಹುಬ್ಬಳ್ಳಿ–ಧಾರವಾಡ ನಗರಗಳಲ್ಲಿ ಆಯೋಜಿಸಿರುವ ಸಂಸ್ಕೃತ ಸಂಭಾಷಣ ಶಿಬಿರ ‘ಸಂಸ್ಕೃತಾಮೃತಮ್’ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಂಭಾಷಣೆಯಿಂದಲೇ ಭಾಷೆ ಉಳಿಯಲು ಸಾಧ್ಯ. ಇಲ್ಲದಿದ್ದರೆ ಅದು ಮೃತ ಭಾಷೆ ಆಗುತ್ತದೆ. ನಾವೆಲ್ಲರೂ ಸಂಸ್ಕೃತ ಭಾಷೆಯಲ್ಲೇ ಸಂಭಾಷಣೆಯಲ್ಲಿ ತೊಡಗೋಣ, ಅದಕ್ಕೆ ಮುಜುಗರಪಡುವ ಅಗತ್ಯವಿಲ್ಲ’ ಎಂದರು.