<p><strong>ಧಾರವಾಡ</strong>: ಮುಂಗಡ ಹಣ ಪಡೆದು ಖರೀದಿದಾರಗೆ ನಿವೇಶನ (ಪ್ಲಾಟ್) ನೀಡದ ಪ್ರಕರಣದಲ್ಲಿ ಸಾಮನ್ ಡೆವಲಪರ್ಸ್ನ ಮಾಲೀಕ ವಿನಯ ಸಾಹುಕಾರಗೆ ಜಿಲ್ಲಾ ಗ್ರಾಹಕರ ಕೋರ್ಟ್ ದಂಡ ವಿಧಿಸಿದೆ. ಬಡ್ಡಿಸಮೇತ ಹಣವನ್ನು ಖರೀದಿದಾರಗೆ ವಾಪಸ್ ನೀಡಲು ಆದೇಶಿಸಿದೆ.</p>.<p>ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಈ ಆದೇಶ ನೀಡಿದ್ದಾರೆ. ₹50 ಸಾವಿರ ಪರಿಹಾರ, ₹10 ಸಾವಿರ ಪ್ರಕರಣದ ವೆಚ್ಚ ಹಾಗೂ ಮುಂಗಡ ಪಡೆದಿದ್ದ ₹6 ಲಕ್ಷಕ್ಕೆ (2011 ಆಗಸ್ಟ್ 19ರಿಂದ) ವಾರ್ಷಿಕ ಶೇ 12 ಬಡ್ಡಿ ಲೆಕ್ಕ ಹಾಕಿ ಖರೀದಾರರಿಗೆ ಸಂದಾಯ ಮಾಡುವಂತೆ ಆದೇಶಿಸಿದ್ದಾರೆ.</p>.<p>ಏನಿದು ಪ್ರಕರಣ?: ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಎತ್ತಿನ ಹಳ್ಳಿಯ ನೇತಾಜಿ ಅವರು 2011ರಲ್ಲಿ ಧಾರವಾಡದಲ್ಲಿ ವಾಸ ಇದ್ದಾಗ ಸಾಮನ್ ಡೆವಲಪರ್ಸ್ನಿಂದ ಪ್ಲಾಟ್ ಅನ್ನು ₹10.37 ಲಕ್ಷಕ್ಕೆ ಖರೀದಿಸಿ ₹6 ಲಕ್ಷ ಮುಂಗಡ ಪಾವತಿಸಿದ್ದರು.</p>.<p>ಡೆವಲಪರ್ಸ್ ಮಾಲೀಕ ‘ಲೇ ಔಟ್’ ನಿರ್ಮಾಣ ಮಾಡಲಿಲ್ಲ. ನೇತಾಜಿ ಅವರಿಗೆ ನಿವೇಶವನ್ನೂ ನೀಡದೆ, ಹಣವನ್ನು ವಾಪಸ್ ನೀಡದೆ ಸತಾಯಿಸಿದ್ದರು. ನೇತಾಜಿ ಅವರು ಸಾಮನ್ ಡೆವಲಪರ್ಸ್ ಮಾಲೀಕನ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಮಾರ್ಚ್ 7ರಂದು ದೂರು ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ಮುಂಗಡ ಹಣ ಪಡೆದು ಖರೀದಿದಾರಗೆ ನಿವೇಶನ (ಪ್ಲಾಟ್) ನೀಡದ ಪ್ರಕರಣದಲ್ಲಿ ಸಾಮನ್ ಡೆವಲಪರ್ಸ್ನ ಮಾಲೀಕ ವಿನಯ ಸಾಹುಕಾರಗೆ ಜಿಲ್ಲಾ ಗ್ರಾಹಕರ ಕೋರ್ಟ್ ದಂಡ ವಿಧಿಸಿದೆ. ಬಡ್ಡಿಸಮೇತ ಹಣವನ್ನು ಖರೀದಿದಾರಗೆ ವಾಪಸ್ ನೀಡಲು ಆದೇಶಿಸಿದೆ.</p>.<p>ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಈ ಆದೇಶ ನೀಡಿದ್ದಾರೆ. ₹50 ಸಾವಿರ ಪರಿಹಾರ, ₹10 ಸಾವಿರ ಪ್ರಕರಣದ ವೆಚ್ಚ ಹಾಗೂ ಮುಂಗಡ ಪಡೆದಿದ್ದ ₹6 ಲಕ್ಷಕ್ಕೆ (2011 ಆಗಸ್ಟ್ 19ರಿಂದ) ವಾರ್ಷಿಕ ಶೇ 12 ಬಡ್ಡಿ ಲೆಕ್ಕ ಹಾಕಿ ಖರೀದಾರರಿಗೆ ಸಂದಾಯ ಮಾಡುವಂತೆ ಆದೇಶಿಸಿದ್ದಾರೆ.</p>.<p>ಏನಿದು ಪ್ರಕರಣ?: ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಎತ್ತಿನ ಹಳ್ಳಿಯ ನೇತಾಜಿ ಅವರು 2011ರಲ್ಲಿ ಧಾರವಾಡದಲ್ಲಿ ವಾಸ ಇದ್ದಾಗ ಸಾಮನ್ ಡೆವಲಪರ್ಸ್ನಿಂದ ಪ್ಲಾಟ್ ಅನ್ನು ₹10.37 ಲಕ್ಷಕ್ಕೆ ಖರೀದಿಸಿ ₹6 ಲಕ್ಷ ಮುಂಗಡ ಪಾವತಿಸಿದ್ದರು.</p>.<p>ಡೆವಲಪರ್ಸ್ ಮಾಲೀಕ ‘ಲೇ ಔಟ್’ ನಿರ್ಮಾಣ ಮಾಡಲಿಲ್ಲ. ನೇತಾಜಿ ಅವರಿಗೆ ನಿವೇಶವನ್ನೂ ನೀಡದೆ, ಹಣವನ್ನು ವಾಪಸ್ ನೀಡದೆ ಸತಾಯಿಸಿದ್ದರು. ನೇತಾಜಿ ಅವರು ಸಾಮನ್ ಡೆವಲಪರ್ಸ್ ಮಾಲೀಕನ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಮಾರ್ಚ್ 7ರಂದು ದೂರು ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>