‘ಕಂದಾಯ ಇಲಾಖೆ ನೇರ ನೇಮಕಾತಿಯಲ್ಲಿ ಕರ್ನಾಟಕ ಆಡಳಿತ ಸೇವೆ ಉತ್ತೀರ್ಣಗೊಂಡವರು ಸುಮಾರ ಎರಡು ವರ್ಷಗಳಲ್ಲಿ ಎಲ್ಲ ಹಂತಗಳ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ತರಬೇತಿ, ರಾಜಸ್ವ ನಿರೀಕ್ಷಕ ಹುದ್ದೆಯ ತರಬೇತಿ, ವಿಷಯ ನಿರ್ವಾಹಕರ ತರಬೇತಿ, ಉಪ ತಹಶೀಲ್ದಾರ್ ಹುದ್ದೆಗೆ ತರಬೇತಿ ಹಾಗೂ ಮೈಸೂರಿನ ಆಡಳಿತ ತರಬೇತಿ ಕೆಂದ್ರದಲ್ಲಿ ತರಬೇತಿ ಪಡೆದು ನಂತರ ತಹಶೀಲ್ದಾರ್ ಹುದ್ದೆಗೆ ಬರುತ್ತಾರೆ. ಉಳಿದ ಶೇ 50 ಹುದ್ದೆಗಳು ಮೂಲ ಕಂದಾಯ ನೌಕರರಾದ ಗ್ರಾಮ ಲೆಕ್ಕಾಧಿಕಾರಿ ಹುದ್ದೆ, ದ್ವಿತೀಯ ದರ್ಜೆ ಸಹಾಯಕ ಹುದ್ದೆ ಹಾಗೂ ಶೀರಸ್ತೆದಾರರಾಗಿ ಕಳೆದ 30ರಿಂದ 35 ವರ್ಷಗಳ ಕಾಲ ಕೆಲಸ ಮಾಡಿ ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್ ಆಗಿ ಮುಂಬಡ್ತಿ ಹೊಂದುತ್ತಾರೆ. ಕಂದಾಯ ಇಲಾಖೆ ಮೂಲ ಆಡಳಿತ ಇಲಾಖೆಯಾಗಿದ್ದು, ಬೇರೆ ಇಲಾಖೆ ಅಧಿಕಾರಿಗಳನ್ನು ತಹಶೀಲ್ದಾರ್ ಹುದ್ದೆ ನೀಡಬಾರದು’ ಎಂದರು.