<p><strong>ಹುಬ್ಬಳ್ಳಿ</strong>: ‘ಬರಗಾಲದಿಂದಾಗಿ ಆಕಳು, ದನ–ಕರು, ಎಮ್ಮೆ ಸಾಕಲು ನಮಗೆ ಕಷ್ಟವಾಗುತ್ತಿದೆ. ಹೀಗಾಗಿ ನಮ್ಮಲ್ಲಿನ ಕೆಲ ಜಾನುವಾರುಗಳನ್ನು ಅನಿವಾರ್ಯವಾಗಿ ಮಾರಾಟ ಮಾಡಲು ಬಂದಿದ್ದೇವೆ’ ಎಂದರು ಕುಸಗಲ್ ಗ್ರಾಮದ ರೈತ ಸೋಮಣ್ಣನವರ.</p>.<p>ಇಲ್ಲಿನ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ನಡೆದ ಜಾನುವಾರು ಸಂತೆಯಲ್ಲಿ ಅವರು ಅಳಲು ತೋಡಿಕೊಂಡಿದ್ದು ಹೀಗೆ. ಅವರೊಂದಿಗೆ ಹಲವು ರೈತರು ಸಂಕಷ್ಟ ಹೇಳಿಕೊಂಡರು.</p>.<p>ಪ್ರತಿ ಶನಿವಾರ ಜಾನುವಾರುಗಳ ಸಂತೆಗೆ ಅಮರಗೋಳ, ಕುಸಗಲ್ ಮತ್ತು ಕರ್ಲವಾಡ ಗ್ರಾಮಗಳಿಂದ ರೈತರು ವಾಹನಗಳಲ್ಲಿ ಆಕಳು, ದನ–ಕರು ಹಾಗೂ ಎಮ್ಮೆಗಳನ್ನು ತರುತ್ತಾರೆ. ನೋವು, ಬೇಸರದಿಂದ ಅವುಗಳನ್ನು ಮಾರುತ್ತಾರೆ.</p>.<p>‘ಮೇವು, ನೀರಿನ ಸಮಸ್ಯೆ ಆಗುವುದನ್ನು ತಪ್ಪಿಸಲು ಜಿಲ್ಲಾಡಳಿತವು ಗೋಶಾಲೆ, ಮೇವು ಬ್ಯಾಂಕ್ ತೆರೆದಿದೆ. ಆದರೂ ಆರ್ಥಿಕ ಸಂಕಷ್ಟ, ಮತ್ತಿತರ ಸಮಸ್ಯೆ ಕಾರಣ ರೈತರು ಸಂತೆಯಲ್ಲಿ ಮಾರಲು ಜಾನುವಾರುಗಳನ್ನು ತರುತ್ತಾರೆ.</p>.<p><strong>ಮೇವು ಉಚಿತವಾಗಿ ನೀಡಲಿ: ‘</strong>ಪ್ರತಿ ರೈತ ಕುಟುಂಬದ ಮನೆಯಲ್ಲಿ ಕನಿಷ್ಠ 3 ರಿಂದ 4 ಜಾನುವಾರು ಇವೆ. ಇವುಗಳಿಗೆ ದಿನಕ್ಕೆ ಕನಿಷ್ಠ 20ರಿಂದ 30 ಕೆಜಿ ಮೇವು ಬೇಕು. ಅಧಿಕಾರಿಗಳು ಪ್ರತಿ ಕೆಜಿ ₹2ರಂತೆ ಪ್ರತಿ ಟನ್ ₹2 ಸಾವಿರಕ್ಕೆ ಮೇವು ಮಾರುತ್ತಾರೆ. ಹಣ ಕೊಟ್ಟು ಮೇವು ಖರೀದಿಸುವ ಸ್ಥಿತಿಯಲ್ಲಿ ರೈತರಿಲ್ಲ. ಉಚಿತ ಮೇವು ಪೂರೈಸಲು ಸರ್ಕಾರ ಮುಂದಾಗಬೇಕು’ ಎಂದು ಕಲಘಟಗಿಯ ರೈತ ಮುಖಂಡ ಪರಶುರಾಮ ಎತ್ತಿನಗುಡ್ಡ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಜಿಲ್ಲೆಯಲ್ಲಿ 20ಲಕ್ಷಕ್ಕೂ ಅಧಿಕ ಜಾನುವಾರುಗಳಿವೆ. ಬರಪೀಡಿತ ತಾಲ್ಲೂಕಿನಲ್ಲಿನ ಜಾನುವಾರುಗಳಿಗೆ ರೈತರು ಮೇವು ನೀಡಲು ಸಾಧ್ಯವಾಗುತ್ತಿಲ್ಲ. ಕಲಘಟಗಿ ತಾಲ್ಲೂಕು ಕೇಂದ್ರದಲ್ಲಿ ಮೇವು ಬ್ಯಾಂಕ್ ಬೇಗ ಆರಂಭಿಸಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಕ್ರಮಕೈಗೊಳ್ಳುತ್ತಿಲ್ಲ’ ಎಂದರು.</p>.<p>‘8 ತಿಂಗಳ ಹಿಂದೆ ₹1.30ಲಕ್ಷಕ್ಕೆ ಜೋಡಿ ಎತ್ತುಗಳನ್ನು ಖರೀದಿಸಿದ್ದೆ. ಖರೀದಿದಾರರು ₹ 70 ಸಾವಿರಕ್ಕೆ ಕೇಳುತ್ತಾರೆ. ಮೇವಿನ ಕೊರತೆಯಿಂದ ಮಾರಬೇಕಾದ ಪರಿಸ್ಥಿತಿಯಿದೆ’ ಪಾಳ ಗ್ರಾಮದ ರೈತ ಸಿದ್ದಪ್ಪ ಎಲಿವಾಳ ತಿಳಿಸಿದರು.</p>.<p><strong>ಮಾದನಭಾವಿ ಗ್ರಾಮದ ಬಳಿ ಗೋಶಾಲೆ ಮತ್ತು ಶಿರಗುಪ್ಪಿಯಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ಅಗತ್ಯವಿರುವೆಡೆ ಮೇವು ಬ್ಯಾಂಕ್ ತೆರೆಯಲೂ ಸೂಚಿಸಲಾಗಿದೆ.</strong></p><p><strong>– ದಿವ್ಯಪ್ರಭು ಜಿಲ್ಲಾಧಿಕಾರಿ </strong></p>.<p> <strong>ಶಿರುಗುಪ್ಪಿ ಗ್ರಾಮದಲ್ಲಿ ಮೇವು ಬ್ಯಾಂಕ್ನಲ್ಲಿ ಜಾನುವಾರುಗಳಿಗೆ ಪೂರೈಸುವಷ್ಟು ಬಿಳಿ ಜೋಳದ ಮೇವಿನ ಸಂಗ್ರಹವಿದೆ. ಕೆಜಿಗೆ ₹2 ರಂತೆ ಸರ್ಕಾರ ಸೂಚಿಸಿದ ದರದಲ್ಲಿ ಮೇವು ಮಾರುತ್ತೇವೆ.</strong></p><p><strong>– ರಾಮಚಂದ್ರಪ್ಪ ಹೊಸಮನಿ ಕಾರ್ಯನಿರ್ವಹಣಾಧಿಕಾರಿ ತಾಲ್ಲೂಕು ಪಂಚಾಯಿತಿ.</strong></p>.<p><strong>ದನಕರುಗಳಿಗೆ ಮೇವು ಇಲ್ಲದೇ ರೈತರು ಮಾರಲು ದನದ ಸಂತೆಗೆ ಹೋದರೂ ಅವುಗಳನ್ನು ಖರೀದಿಸುವವರು ಇಲ್ಲ. ಅಧಿಕಾರಿಗಳು ಪ್ರತಿ ತಾಲ್ಲೂಕಿನಲ್ಲಿ ಉಚಿತವಾಗಿ ಮೇವು ಪೂರೈಸಬೇಕು.</strong></p><p><strong>– ಸುರೇಶ ಕಿರೆಸೂರ್ ಮಾಜಿ ಅಧ್ಯಕ್ಷ ಅಮರಗೋಳ ಎಪಿಎಂಸಿ ಹುಬ್ಬಳ್ಳಿ.</strong></p>.<p> <strong>ಜಿಲ್ಲೆಯಲ್ಲಿ 20ಲಕ್ಷಕ್ಕೂ ಅಧಿಕ ಜಾನುವಾರುಗಳಿವೆ. ಪ್ರತಿ ತಾಲ್ಲೂಕಿನಲ್ಲಿ 3 ರಿಂದ 4 ಮೇವು ಬ್ಯಾಂಕ್ ಆರಂಭಿಸಿ ಜಾನುವಾರುಗಳಿಗೆ ಉಚಿತವಾಗಿ ಮೇವು ಪೂರೈಸಬೇಕು.. </strong></p><p><strong>–ಹೇಮನಗೌಡ ಬಸನಗೌಡ್ರು ಉಪಾಧ್ಯಕ್ಷ ರತ್ನ ಭಾರತ ರೈತ ಸಮಾಜ ರಾಷ್ಟ್ರೀಯ ಘಟಕ</strong></p>.<p><strong>ದನ ಕರು ಆಕಳುಗಳನ್ನು ಸಾಕಲು ಕಷ್ಟವಾಗುತ್ತಿದೆ. ಮಾರಲು ಮುಂದಾದರೂ ಯಾರೂ ಖರೀದಿಸಲು ಬರುತ್ತಿಲ್ಲ. ಕಸಾಯಿಖಾನೆಯವರು ಕೇಳುತ್ತಾರೆ. ಕೊಡಲು ಮನಸಿಲ್ಲ. </strong></p><p><strong>–ಮಾಳಪ್ಪ ಹೊನ್ನೆಹಳ್ಳಿ ರೈತ ಬೀರವಳ್ಳಿ ಗ್ರಾಮ ಕಲಘಟಗಿ ತಾಲ್ಲೂಕು.</strong> </p>.<p><strong>ಮಾರ್ಚ್ 24ರಿಂದ ಕಲಘಟಗಿ ಕುಂದುಗೊಳ ಮತ್ತು ನವಲಗುಂದ ತಾಲ್ಲೂಕಿನ ಎಪಿಎಂಸಿ ಸೇರಿ ಹುಬ್ಬಳ್ಳಿಯ ಶೆರೆವಾಡದಲ್ಲಿ ಒಂದೊಂದು ಮೇವು ಬ್ಯಾಂಕ್ಗಳನ್ನು ತೆರೆಯಲಾಗಿದೆ. </strong></p><p><strong>–ಡಾ.ರವಿ ಸಾಲಿಗೌಡರ, ಉಪ ನಿರ್ದೇಶಕ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಧಾರವಾಡ</strong></p>.<p> ಜಿಲ್ಲೆಯ ಜಾನುವಾರುಗಳ ವಿವರ ತಾಲ್ಲೂಕು;ಜಾನುವಾರು ಧಾರವಾಡ;72182 ಅಳ್ನಾವರ;4287 ಹುಬ್ಬಳ್ಳಿ;25015 ಹುಬ್ಬಳ್ಳಿ ನಗರ;18151 ಕಲಘಟಗಿ;50637 ಕುಂದಗೋಳ;28162 ನವಲಗುಂದ;23261 ಅಣ್ಣಿಗೇರಿ;11769 ಒಟ್ಟು;233464</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ‘ಬರಗಾಲದಿಂದಾಗಿ ಆಕಳು, ದನ–ಕರು, ಎಮ್ಮೆ ಸಾಕಲು ನಮಗೆ ಕಷ್ಟವಾಗುತ್ತಿದೆ. ಹೀಗಾಗಿ ನಮ್ಮಲ್ಲಿನ ಕೆಲ ಜಾನುವಾರುಗಳನ್ನು ಅನಿವಾರ್ಯವಾಗಿ ಮಾರಾಟ ಮಾಡಲು ಬಂದಿದ್ದೇವೆ’ ಎಂದರು ಕುಸಗಲ್ ಗ್ರಾಮದ ರೈತ ಸೋಮಣ್ಣನವರ.</p>.<p>ಇಲ್ಲಿನ ಅಮರಗೋಳದ ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ನಡೆದ ಜಾನುವಾರು ಸಂತೆಯಲ್ಲಿ ಅವರು ಅಳಲು ತೋಡಿಕೊಂಡಿದ್ದು ಹೀಗೆ. ಅವರೊಂದಿಗೆ ಹಲವು ರೈತರು ಸಂಕಷ್ಟ ಹೇಳಿಕೊಂಡರು.</p>.<p>ಪ್ರತಿ ಶನಿವಾರ ಜಾನುವಾರುಗಳ ಸಂತೆಗೆ ಅಮರಗೋಳ, ಕುಸಗಲ್ ಮತ್ತು ಕರ್ಲವಾಡ ಗ್ರಾಮಗಳಿಂದ ರೈತರು ವಾಹನಗಳಲ್ಲಿ ಆಕಳು, ದನ–ಕರು ಹಾಗೂ ಎಮ್ಮೆಗಳನ್ನು ತರುತ್ತಾರೆ. ನೋವು, ಬೇಸರದಿಂದ ಅವುಗಳನ್ನು ಮಾರುತ್ತಾರೆ.</p>.<p>‘ಮೇವು, ನೀರಿನ ಸಮಸ್ಯೆ ಆಗುವುದನ್ನು ತಪ್ಪಿಸಲು ಜಿಲ್ಲಾಡಳಿತವು ಗೋಶಾಲೆ, ಮೇವು ಬ್ಯಾಂಕ್ ತೆರೆದಿದೆ. ಆದರೂ ಆರ್ಥಿಕ ಸಂಕಷ್ಟ, ಮತ್ತಿತರ ಸಮಸ್ಯೆ ಕಾರಣ ರೈತರು ಸಂತೆಯಲ್ಲಿ ಮಾರಲು ಜಾನುವಾರುಗಳನ್ನು ತರುತ್ತಾರೆ.</p>.<p><strong>ಮೇವು ಉಚಿತವಾಗಿ ನೀಡಲಿ: ‘</strong>ಪ್ರತಿ ರೈತ ಕುಟುಂಬದ ಮನೆಯಲ್ಲಿ ಕನಿಷ್ಠ 3 ರಿಂದ 4 ಜಾನುವಾರು ಇವೆ. ಇವುಗಳಿಗೆ ದಿನಕ್ಕೆ ಕನಿಷ್ಠ 20ರಿಂದ 30 ಕೆಜಿ ಮೇವು ಬೇಕು. ಅಧಿಕಾರಿಗಳು ಪ್ರತಿ ಕೆಜಿ ₹2ರಂತೆ ಪ್ರತಿ ಟನ್ ₹2 ಸಾವಿರಕ್ಕೆ ಮೇವು ಮಾರುತ್ತಾರೆ. ಹಣ ಕೊಟ್ಟು ಮೇವು ಖರೀದಿಸುವ ಸ್ಥಿತಿಯಲ್ಲಿ ರೈತರಿಲ್ಲ. ಉಚಿತ ಮೇವು ಪೂರೈಸಲು ಸರ್ಕಾರ ಮುಂದಾಗಬೇಕು’ ಎಂದು ಕಲಘಟಗಿಯ ರೈತ ಮುಖಂಡ ಪರಶುರಾಮ ಎತ್ತಿನಗುಡ್ಡ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಜಿಲ್ಲೆಯಲ್ಲಿ 20ಲಕ್ಷಕ್ಕೂ ಅಧಿಕ ಜಾನುವಾರುಗಳಿವೆ. ಬರಪೀಡಿತ ತಾಲ್ಲೂಕಿನಲ್ಲಿನ ಜಾನುವಾರುಗಳಿಗೆ ರೈತರು ಮೇವು ನೀಡಲು ಸಾಧ್ಯವಾಗುತ್ತಿಲ್ಲ. ಕಲಘಟಗಿ ತಾಲ್ಲೂಕು ಕೇಂದ್ರದಲ್ಲಿ ಮೇವು ಬ್ಯಾಂಕ್ ಬೇಗ ಆರಂಭಿಸಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರೂ ಕ್ರಮಕೈಗೊಳ್ಳುತ್ತಿಲ್ಲ’ ಎಂದರು.</p>.<p>‘8 ತಿಂಗಳ ಹಿಂದೆ ₹1.30ಲಕ್ಷಕ್ಕೆ ಜೋಡಿ ಎತ್ತುಗಳನ್ನು ಖರೀದಿಸಿದ್ದೆ. ಖರೀದಿದಾರರು ₹ 70 ಸಾವಿರಕ್ಕೆ ಕೇಳುತ್ತಾರೆ. ಮೇವಿನ ಕೊರತೆಯಿಂದ ಮಾರಬೇಕಾದ ಪರಿಸ್ಥಿತಿಯಿದೆ’ ಪಾಳ ಗ್ರಾಮದ ರೈತ ಸಿದ್ದಪ್ಪ ಎಲಿವಾಳ ತಿಳಿಸಿದರು.</p>.<p><strong>ಮಾದನಭಾವಿ ಗ್ರಾಮದ ಬಳಿ ಗೋಶಾಲೆ ಮತ್ತು ಶಿರಗುಪ್ಪಿಯಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ಅಗತ್ಯವಿರುವೆಡೆ ಮೇವು ಬ್ಯಾಂಕ್ ತೆರೆಯಲೂ ಸೂಚಿಸಲಾಗಿದೆ.</strong></p><p><strong>– ದಿವ್ಯಪ್ರಭು ಜಿಲ್ಲಾಧಿಕಾರಿ </strong></p>.<p> <strong>ಶಿರುಗುಪ್ಪಿ ಗ್ರಾಮದಲ್ಲಿ ಮೇವು ಬ್ಯಾಂಕ್ನಲ್ಲಿ ಜಾನುವಾರುಗಳಿಗೆ ಪೂರೈಸುವಷ್ಟು ಬಿಳಿ ಜೋಳದ ಮೇವಿನ ಸಂಗ್ರಹವಿದೆ. ಕೆಜಿಗೆ ₹2 ರಂತೆ ಸರ್ಕಾರ ಸೂಚಿಸಿದ ದರದಲ್ಲಿ ಮೇವು ಮಾರುತ್ತೇವೆ.</strong></p><p><strong>– ರಾಮಚಂದ್ರಪ್ಪ ಹೊಸಮನಿ ಕಾರ್ಯನಿರ್ವಹಣಾಧಿಕಾರಿ ತಾಲ್ಲೂಕು ಪಂಚಾಯಿತಿ.</strong></p>.<p><strong>ದನಕರುಗಳಿಗೆ ಮೇವು ಇಲ್ಲದೇ ರೈತರು ಮಾರಲು ದನದ ಸಂತೆಗೆ ಹೋದರೂ ಅವುಗಳನ್ನು ಖರೀದಿಸುವವರು ಇಲ್ಲ. ಅಧಿಕಾರಿಗಳು ಪ್ರತಿ ತಾಲ್ಲೂಕಿನಲ್ಲಿ ಉಚಿತವಾಗಿ ಮೇವು ಪೂರೈಸಬೇಕು.</strong></p><p><strong>– ಸುರೇಶ ಕಿರೆಸೂರ್ ಮಾಜಿ ಅಧ್ಯಕ್ಷ ಅಮರಗೋಳ ಎಪಿಎಂಸಿ ಹುಬ್ಬಳ್ಳಿ.</strong></p>.<p> <strong>ಜಿಲ್ಲೆಯಲ್ಲಿ 20ಲಕ್ಷಕ್ಕೂ ಅಧಿಕ ಜಾನುವಾರುಗಳಿವೆ. ಪ್ರತಿ ತಾಲ್ಲೂಕಿನಲ್ಲಿ 3 ರಿಂದ 4 ಮೇವು ಬ್ಯಾಂಕ್ ಆರಂಭಿಸಿ ಜಾನುವಾರುಗಳಿಗೆ ಉಚಿತವಾಗಿ ಮೇವು ಪೂರೈಸಬೇಕು.. </strong></p><p><strong>–ಹೇಮನಗೌಡ ಬಸನಗೌಡ್ರು ಉಪಾಧ್ಯಕ್ಷ ರತ್ನ ಭಾರತ ರೈತ ಸಮಾಜ ರಾಷ್ಟ್ರೀಯ ಘಟಕ</strong></p>.<p><strong>ದನ ಕರು ಆಕಳುಗಳನ್ನು ಸಾಕಲು ಕಷ್ಟವಾಗುತ್ತಿದೆ. ಮಾರಲು ಮುಂದಾದರೂ ಯಾರೂ ಖರೀದಿಸಲು ಬರುತ್ತಿಲ್ಲ. ಕಸಾಯಿಖಾನೆಯವರು ಕೇಳುತ್ತಾರೆ. ಕೊಡಲು ಮನಸಿಲ್ಲ. </strong></p><p><strong>–ಮಾಳಪ್ಪ ಹೊನ್ನೆಹಳ್ಳಿ ರೈತ ಬೀರವಳ್ಳಿ ಗ್ರಾಮ ಕಲಘಟಗಿ ತಾಲ್ಲೂಕು.</strong> </p>.<p><strong>ಮಾರ್ಚ್ 24ರಿಂದ ಕಲಘಟಗಿ ಕುಂದುಗೊಳ ಮತ್ತು ನವಲಗುಂದ ತಾಲ್ಲೂಕಿನ ಎಪಿಎಂಸಿ ಸೇರಿ ಹುಬ್ಬಳ್ಳಿಯ ಶೆರೆವಾಡದಲ್ಲಿ ಒಂದೊಂದು ಮೇವು ಬ್ಯಾಂಕ್ಗಳನ್ನು ತೆರೆಯಲಾಗಿದೆ. </strong></p><p><strong>–ಡಾ.ರವಿ ಸಾಲಿಗೌಡರ, ಉಪ ನಿರ್ದೇಶಕ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಧಾರವಾಡ</strong></p>.<p> ಜಿಲ್ಲೆಯ ಜಾನುವಾರುಗಳ ವಿವರ ತಾಲ್ಲೂಕು;ಜಾನುವಾರು ಧಾರವಾಡ;72182 ಅಳ್ನಾವರ;4287 ಹುಬ್ಬಳ್ಳಿ;25015 ಹುಬ್ಬಳ್ಳಿ ನಗರ;18151 ಕಲಘಟಗಿ;50637 ಕುಂದಗೋಳ;28162 ನವಲಗುಂದ;23261 ಅಣ್ಣಿಗೇರಿ;11769 ಒಟ್ಟು;233464</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>