<p><strong>ನವಲಗುಂದ</strong>: ‘ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಬದುಕಿನ ಯಶಸ್ಸಿಗೆ ದಾರಿದೀಪ. ಬದುಕಿನ ನಿಜವಾದ ಯಶಸ್ಸು ಎಂದರೆ ಸಂತೋಷವಾಗಿರುವುದು’ ಎಂದು ಶಂಕರ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ವಿ. ಬಡಿಗೇರ ಹೇಳಿದರು.</p>.<p>ಮಹಾವಿದ್ಯಾಲಯದ ಐಕ್ಯುಎಸಿ ವತಿಯಿಂದ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆಗಳ ಸಮಾರೋಪ, ವಾರ್ಷಿಕ ಸ್ನೇಹ ಸಮ್ಮೇಳನ, ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸೋಮವಾರ ಅವರು ಮಾತನಾಡಿದರು.</p>.<p>ವಿದ್ಯಾರ್ಥಿಗಳು ಬಿಳಿ ಪಂಚೆ ಹಾಗೂ ಬಿಳಿ ಅಂಗಿ ಧರಿಸಿದ್ದರೆ, ವಿದ್ಯಾರ್ಥಿನಿಯರು ಇಳಕಲ್ ಸೀರೆ ಹಾಗೂ ಕುಪ್ಪಸ ಧರಿಸಿ ಎತ್ತಿನ ಚಕ್ಕಡಿಯಲ್ಲಿ ಮಹಾವಿದ್ಯಾಲಯದ ಆವರಣದಲ್ಲಿ ಸಂಚರಿಸಿ ಸಂಪ್ರದಾಯವನ್ನು ಬಿಂಬಿಸಿದರು.</p>.<p>ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಎ.ಜಿ. ಜಕ್ಕನಗೌಡ್ರ, ಸಾಂಸ್ಕೃತಿಕ ಸಂಘದ ಕಾರ್ಯಾಧ್ಯಕ್ಷ ಎಂ.ಎನ್. ಹಾರೋಗೇರಿ, ಪ್ರಾಧ್ಯಾಪಕರಾದ ಶೀಲಾ ತುಬಚಿ, ಪಿ.ಜಿ. ಕೊಪ್ಪದ, ಆರ್.ಪಿ. ಚವ್ಹಾಣ, ರುದ್ರಮುನಿ ಹಿರೇಮಠ, ಬಿ.ಕೆ. ಬಂಕಾಪುರ, ಜಿ.ಎಸ್. ಚಿಣಗಿ, ಎಂ.ವಿ. ಹೊಳೆಯಣ್ಣವರ, ಬಿ.ಕೆ. ಮಹೇಶ, ದಾವಲಸಾಬ ಕಲ್ಬುರ್ಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವಲಗುಂದ</strong>: ‘ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಬದುಕಿನ ಯಶಸ್ಸಿಗೆ ದಾರಿದೀಪ. ಬದುಕಿನ ನಿಜವಾದ ಯಶಸ್ಸು ಎಂದರೆ ಸಂತೋಷವಾಗಿರುವುದು’ ಎಂದು ಶಂಕರ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ವಿ. ಬಡಿಗೇರ ಹೇಳಿದರು.</p>.<p>ಮಹಾವಿದ್ಯಾಲಯದ ಐಕ್ಯುಎಸಿ ವತಿಯಿಂದ ಶೈಕ್ಷಣಿಕ ವರ್ಷದ ಪಠ್ಯೇತರ ಚಟುವಟಿಕೆಗಳ ಸಮಾರೋಪ, ವಾರ್ಷಿಕ ಸ್ನೇಹ ಸಮ್ಮೇಳನ, ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸೋಮವಾರ ಅವರು ಮಾತನಾಡಿದರು.</p>.<p>ವಿದ್ಯಾರ್ಥಿಗಳು ಬಿಳಿ ಪಂಚೆ ಹಾಗೂ ಬಿಳಿ ಅಂಗಿ ಧರಿಸಿದ್ದರೆ, ವಿದ್ಯಾರ್ಥಿನಿಯರು ಇಳಕಲ್ ಸೀರೆ ಹಾಗೂ ಕುಪ್ಪಸ ಧರಿಸಿ ಎತ್ತಿನ ಚಕ್ಕಡಿಯಲ್ಲಿ ಮಹಾವಿದ್ಯಾಲಯದ ಆವರಣದಲ್ಲಿ ಸಂಚರಿಸಿ ಸಂಪ್ರದಾಯವನ್ನು ಬಿಂಬಿಸಿದರು.</p>.<p>ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಎ.ಜಿ. ಜಕ್ಕನಗೌಡ್ರ, ಸಾಂಸ್ಕೃತಿಕ ಸಂಘದ ಕಾರ್ಯಾಧ್ಯಕ್ಷ ಎಂ.ಎನ್. ಹಾರೋಗೇರಿ, ಪ್ರಾಧ್ಯಾಪಕರಾದ ಶೀಲಾ ತುಬಚಿ, ಪಿ.ಜಿ. ಕೊಪ್ಪದ, ಆರ್.ಪಿ. ಚವ್ಹಾಣ, ರುದ್ರಮುನಿ ಹಿರೇಮಠ, ಬಿ.ಕೆ. ಬಂಕಾಪುರ, ಜಿ.ಎಸ್. ಚಿಣಗಿ, ಎಂ.ವಿ. ಹೊಳೆಯಣ್ಣವರ, ಬಿ.ಕೆ. ಮಹೇಶ, ದಾವಲಸಾಬ ಕಲ್ಬುರ್ಗಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>