<p><strong>ಧಾರವಾಡ:</strong> ರಮ್ಜಾನ್ ಉಪವಾಸ ಮೇ 7ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಸಫಾ ಬೈತುಲ್ ಮಾಲ್ ಸಂಸ್ಥೆ ವತಿಯಿಂದ ಬಡವರಿಗೆ ಅಡುಗೆ ಸಾಮಗ್ರಿಗಳನ್ನು ಬುಧವಾರ ಹಂಚಲಾಯಿತು.</p>.<p>300 ಬಡವರಿಗೆ ಉಚಿತವಾಗಿ ಆಹಾರ ಧಾನ್ಯವುಳ್ಳ ₹1500 ಮೌಲ್ಯದ ಕಿಟ್ ನಿಡಲಾಯಿತು. ಇದರಲ್ಲಿ 15 ಕೆ.ಜಿ. ಅಕ್ಕಿ, 5 ಕೆ.ಜಿ. ಗೋಧಿ ಹಿಟ್ಟು, 2 ಕೆ.ಜಿ. ಬೇಳೆ, ಖಾರದಪುಡಿ, ರವೆ, ಅವಲಕ್ಕಿ, ಖರ್ಜೂರ, ಶಾವಿಗೆ, ಎಣ್ಣೆ, ಅರಿಶಿಣ, ಜೀರಿಗೆ, ಸಾಸಿವೆ ಸೇರಿದಂತೆ ಒಟ್ಟು 15 ವಸ್ತುಗಳು ಒಳಗೊಂಡಿವೆ.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಅಮೀರ ಮೆಹಬೂಬ್ಸಾಬ್ ಸೌದಾಗರ್, ‘ಉಪವಾಸದಲ್ಲಿ ಪವಿತ್ರತೆ ಇದೆ.ವ್ಯಕ್ತಿ ಮತ್ತು ಸಮುದಾಯ ಬೆಸೆಯುವ ಆಚರಣೆಯೇ ರಮ್ಜಾನ್. ಈ ಪದದ ಮೂಲ ಅರ್ಥ ರಮಿದ್ ಎಂಬುದಾಗಿದೆ. ಒಂದು ತಿಂಗಳ ಉಪವಾಸ, ಧಾನ– ಧರ್ಮ ಮಾಡುವ ಮೂಲಕ ನಿರಶನ ಹೊಂದುವುದು, ಅಹಂ, ಅರಿಷಡ್ವರ್ಗಗಳನ್ನು ಸುಟ್ಟು ಪಾವನಗೊಳ್ಳುವುದಾಗಿದೆ’ ಎಂದರು.</p>.<p>ಸಂಸ್ಥೆಯ ಮೊಹಮ್ಮದ್ ಅಲ್ತಾಫ್ ಶೇಖ್ ಮಾತನಾಡಿ,‘ಹಲವು ಗಂಟೆಗಳ ಕಾಲ ಕಟ್ಟುನಿಟ್ಟಿನ ಉಪವಾಸವಿದ್ದರೂ ಆರೋಗ್ಯದಲ್ಲಿ ಏರುಪೇರು ಆಗದಂತೆ ಹಾಗೂ ಅಗತ್ಯವಿರುವ ಜೀವಸತ್ವ ಕೊರತೆ ಅಗದಂತೆ ನೋಡಿಕೊಳ್ಳುವ ಈ ಉಪವಾಸ ಪದ್ಧತಿಯನ್ನು ಜಗತ್ತಿನೆಲ್ಲೆಡೆ ಮುಸ್ಲಿಮರು ಆಚರಿಸುತ್ತಾರೆ. ಈ ಹಬ್ಬ ಚಂದ್ರ ದರ್ಶನದಂತೆ 29 ಅಥವಾ 30 ದಿನಗಳ ಉಪವಾಸದ ಬಳಿಕ ಈದ್ ಉಲ್ ಫಿತರ್ ಮೂಲಕ ಕೊನೆಗೊಳ್ಳಲಿದೆ. ಈ ನಿಮಿತ್ತ ಬಡವರಿಗೆ ಅಕ್ಕಿ, ಅಹಾರ, ಬಟ್ಟೆ ಸಾಮಾಗ್ರಿಗಳನ್ನು ದಾನ ಮಾಡುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ’ ಎಂದು ವಿವರಿಸಿದರು.</p>.<p>‘ಮುಸ್ಲಿಮರು ಪಾಲಿಸಬೇಕಾದ ಐದು ಧರ್ಮಕಾರ್ಯಗಳಲ್ಲಿ ಒಂದಾಗಿರುವ ಉಪವಾಸವನ್ನು ಅರೆಬಿಕ್ ಭಾಷೆಯಲ್ಲಿ ‘ಸೌಮ’ ಎಂದೂ, ಪರ್ಷಿಯನ್ ಮತ್ತು ಉರ್ದು ಭಾಷೆಯಲ್ಲಿ ‘ರೋಜಾ’ ಎಂದೂ, ಕರಾವಳಿಯ ಬ್ಯಾರಿ ಭಾಷೆಯಲ್ಲಿ ‘ನೋಂಬು’ ಎಂದೂ ಕರೆಯುವುದುಂಟು. ಧಾನದ ಭಾಗವಾಗಿ ₹6ಲಕ್ಷ ಮೌಲ್ಯದ 400 ಕಿಟ್ಗಳನ್ನು ತರಿಸಲಾಗಿದೆ. ಬುಧವಾರ 300 ಬಡ ಕುಟುಂಬಗಳಿಗೆ ಹಂಚಲಾಗಿದೆ. ಉಳಿದವುಗಳನ್ನೂ ಅರ್ಹರಿಗೆ ವಿತರಿಸಲಾಗುವುದು’ ಎಂದು ಅಲ್ತಾಫ್ ತಿಳಿಸಿದರು.</p>.<p>ಎಸ್.ಎಂ. ಇನಾಯತುಲ್ಲಾ ಅಥಾರ್, ಮೆಹಬೂಬ್ಸಾಬ್ ಬೀಡಿ, ಅಯೂಬ್ಖಾನ್ ಕಿತ್ತೂರು, ಲಿಯಾಕತ್ ಅಲಿ ಉಸ್ತಾದ್, ಅಬ್ದುಲ್ ರಶೀದ್ ತಹಶೀಲ್ದಾರ್, ದಾದಾಪೀರ್ ಮುಲ್ಲೂರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ರಮ್ಜಾನ್ ಉಪವಾಸ ಮೇ 7ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಸಫಾ ಬೈತುಲ್ ಮಾಲ್ ಸಂಸ್ಥೆ ವತಿಯಿಂದ ಬಡವರಿಗೆ ಅಡುಗೆ ಸಾಮಗ್ರಿಗಳನ್ನು ಬುಧವಾರ ಹಂಚಲಾಯಿತು.</p>.<p>300 ಬಡವರಿಗೆ ಉಚಿತವಾಗಿ ಆಹಾರ ಧಾನ್ಯವುಳ್ಳ ₹1500 ಮೌಲ್ಯದ ಕಿಟ್ ನಿಡಲಾಯಿತು. ಇದರಲ್ಲಿ 15 ಕೆ.ಜಿ. ಅಕ್ಕಿ, 5 ಕೆ.ಜಿ. ಗೋಧಿ ಹಿಟ್ಟು, 2 ಕೆ.ಜಿ. ಬೇಳೆ, ಖಾರದಪುಡಿ, ರವೆ, ಅವಲಕ್ಕಿ, ಖರ್ಜೂರ, ಶಾವಿಗೆ, ಎಣ್ಣೆ, ಅರಿಶಿಣ, ಜೀರಿಗೆ, ಸಾಸಿವೆ ಸೇರಿದಂತೆ ಒಟ್ಟು 15 ವಸ್ತುಗಳು ಒಳಗೊಂಡಿವೆ.</p>.<p>ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಅಮೀರ ಮೆಹಬೂಬ್ಸಾಬ್ ಸೌದಾಗರ್, ‘ಉಪವಾಸದಲ್ಲಿ ಪವಿತ್ರತೆ ಇದೆ.ವ್ಯಕ್ತಿ ಮತ್ತು ಸಮುದಾಯ ಬೆಸೆಯುವ ಆಚರಣೆಯೇ ರಮ್ಜಾನ್. ಈ ಪದದ ಮೂಲ ಅರ್ಥ ರಮಿದ್ ಎಂಬುದಾಗಿದೆ. ಒಂದು ತಿಂಗಳ ಉಪವಾಸ, ಧಾನ– ಧರ್ಮ ಮಾಡುವ ಮೂಲಕ ನಿರಶನ ಹೊಂದುವುದು, ಅಹಂ, ಅರಿಷಡ್ವರ್ಗಗಳನ್ನು ಸುಟ್ಟು ಪಾವನಗೊಳ್ಳುವುದಾಗಿದೆ’ ಎಂದರು.</p>.<p>ಸಂಸ್ಥೆಯ ಮೊಹಮ್ಮದ್ ಅಲ್ತಾಫ್ ಶೇಖ್ ಮಾತನಾಡಿ,‘ಹಲವು ಗಂಟೆಗಳ ಕಾಲ ಕಟ್ಟುನಿಟ್ಟಿನ ಉಪವಾಸವಿದ್ದರೂ ಆರೋಗ್ಯದಲ್ಲಿ ಏರುಪೇರು ಆಗದಂತೆ ಹಾಗೂ ಅಗತ್ಯವಿರುವ ಜೀವಸತ್ವ ಕೊರತೆ ಅಗದಂತೆ ನೋಡಿಕೊಳ್ಳುವ ಈ ಉಪವಾಸ ಪದ್ಧತಿಯನ್ನು ಜಗತ್ತಿನೆಲ್ಲೆಡೆ ಮುಸ್ಲಿಮರು ಆಚರಿಸುತ್ತಾರೆ. ಈ ಹಬ್ಬ ಚಂದ್ರ ದರ್ಶನದಂತೆ 29 ಅಥವಾ 30 ದಿನಗಳ ಉಪವಾಸದ ಬಳಿಕ ಈದ್ ಉಲ್ ಫಿತರ್ ಮೂಲಕ ಕೊನೆಗೊಳ್ಳಲಿದೆ. ಈ ನಿಮಿತ್ತ ಬಡವರಿಗೆ ಅಕ್ಕಿ, ಅಹಾರ, ಬಟ್ಟೆ ಸಾಮಾಗ್ರಿಗಳನ್ನು ದಾನ ಮಾಡುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ’ ಎಂದು ವಿವರಿಸಿದರು.</p>.<p>‘ಮುಸ್ಲಿಮರು ಪಾಲಿಸಬೇಕಾದ ಐದು ಧರ್ಮಕಾರ್ಯಗಳಲ್ಲಿ ಒಂದಾಗಿರುವ ಉಪವಾಸವನ್ನು ಅರೆಬಿಕ್ ಭಾಷೆಯಲ್ಲಿ ‘ಸೌಮ’ ಎಂದೂ, ಪರ್ಷಿಯನ್ ಮತ್ತು ಉರ್ದು ಭಾಷೆಯಲ್ಲಿ ‘ರೋಜಾ’ ಎಂದೂ, ಕರಾವಳಿಯ ಬ್ಯಾರಿ ಭಾಷೆಯಲ್ಲಿ ‘ನೋಂಬು’ ಎಂದೂ ಕರೆಯುವುದುಂಟು. ಧಾನದ ಭಾಗವಾಗಿ ₹6ಲಕ್ಷ ಮೌಲ್ಯದ 400 ಕಿಟ್ಗಳನ್ನು ತರಿಸಲಾಗಿದೆ. ಬುಧವಾರ 300 ಬಡ ಕುಟುಂಬಗಳಿಗೆ ಹಂಚಲಾಗಿದೆ. ಉಳಿದವುಗಳನ್ನೂ ಅರ್ಹರಿಗೆ ವಿತರಿಸಲಾಗುವುದು’ ಎಂದು ಅಲ್ತಾಫ್ ತಿಳಿಸಿದರು.</p>.<p>ಎಸ್.ಎಂ. ಇನಾಯತುಲ್ಲಾ ಅಥಾರ್, ಮೆಹಬೂಬ್ಸಾಬ್ ಬೀಡಿ, ಅಯೂಬ್ಖಾನ್ ಕಿತ್ತೂರು, ಲಿಯಾಕತ್ ಅಲಿ ಉಸ್ತಾದ್, ಅಬ್ದುಲ್ ರಶೀದ್ ತಹಶೀಲ್ದಾರ್, ದಾದಾಪೀರ್ ಮುಲ್ಲೂರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>