<p class="rtejustify"><strong>ಧಾರವಾಡ: </strong>ತಾಲ್ಲೂಕಿನ ಮುಗದ ಗ್ರಾಮದಲ್ಲಿ ಆಹಾರ ಕಿಟ್ ಹಂಚಲು ಬಂದ ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್ ವಿರುದ್ಧ ಪಕ್ಷದವರೇ ಆದ ನಾಗರಾಜ ಛಬ್ಬಿ ಬೆಂಬಲಿಗರು ಎಂದು ಹೇಳಿಕೊಂಡ ಗುಂಪು ಅಡ್ಡಿಪಡಿಸಿ ‘ಧಿಕ್ಕಾರ’ ಕೂಗಿದ ಪ್ರಕರಣ ಬುಧವಾರ ಜರುಗಿತು.</p>.<p class="rtejustify">ಕಲಘಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ನಾಗರಾಜ ಛೆಬ್ಬಿ ಅವರು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಲಾಡ್ ಅವರು ಆಹಾರ ಕಿಟ್ ಹಂಚಲು ತೆರಳಿದ್ದು ಸಾಕಷ್ಟು ಗೊಂದಲ ಉಂಟು ಮಾಡಿರುವ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ. ಜತೆಗೆ ಇದರ ವಿಡಿಯೊ ಈಗ ಎಲ್ಲೆಡೆ ಹರಿದಾಡುತ್ತಿದೆ.</p>.<p class="rtejustify">ಕೊರೊನಾ ಹಿನ್ನೆಲೆಯಲ್ಲಿ ಕ್ಷೇತ್ರದನಿಗದಿ, ಮನಗುಂಡಿ, ಮನಸೂರ, ಮುಗದ ಗ್ರಾಮಗಳಲ್ಲಿ ಆಹಾರದ ಕಿಟ್ ವಿತರಣೆಗೆ ಸಂತೋಷ ಲಾಡ್ ಬಂದಿದ್ದರು. ಈ ವೇಳೆ ಮುಗದ ಕ್ರಾಸ್ ಬಳಿ ಲಾಡ್ ಅವರನ್ನು ತಡೆದು ನಿಲ್ಲಿಸಿದ ಗುಂಪು, ಲಾಡ್ ವಿರುದ್ಧ ಘೋಷಣೆ ಕೂಗಿದರು. ಇಷ್ಟು ಮಾತ್ರವಲ್ಲ ನಾಗರಾಜ ಛಬ್ಬಿ ಪರ ಘೋಷಣೆಯೂ ಕೇಳಿ ಬಂತು. ಇದರಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.</p>.<p class="rtejustify">‘ಇಷ್ಟು ದಿನ ಕ್ಷೇತ್ರಕ್ಕೆ ಬಂದಿಲ್ಲ. ಈಗ ಏಕೆ ಬಂದಿದ್ದೀರಿ? ನಿಮ್ಮ ಅವಶ್ಯಕತೆ ನಮಗೆ ಇಲ್ಲ’ ಎಂದು ಛಬ್ಬಿ ಬೆಂಬಲಿಗರು ಎಂದುಕೊಂಡ ಕೆಲ ಯುವಕರು ಲಾಡ್ ಅವರಿಗೆ ಹೇಳಿದರು.</p>.<p class="rtejustify">ಇದಕ್ಕೆ ಪ್ರತಿಕ್ರಿಯಿಸಿದ ಲಾಡ್, ‘ಇದನ್ನು ಪ್ರಶ್ನಿಸಲು ನೀವು ಯಾರು? ನೀವು ಕ್ಷೇತ್ರದ ಜನ ಅಲ್ಲವಲ್ಲ’ ಎಂದರು. ಇದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.</p>.<p class="rtejustify">ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಲಾಡ್, ದಿನ ಬಳಕೆಯ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.</p>.<p class="rtejustify">ಈ ಸಂದರ್ಭದಲ್ಲಿ ಪಕ್ಷದ ಇಸ್ಮಾಯಿಲ್ ತಮಟಗಾರ, ಬಸವರಾಜ ಮರಿತಮ್ಮನವರ, ಸಹದೇವ ಪಾಗೋಜಿ, ದೀಪಕ್ ದುರ್ಗಾಯಿ, ರುದ್ರಪ್ಪ ಕೊಂಪಣ್ಣವರ, ನಿಂಗಪ್ಪ ಘಾಟಿನ, ಸುನೀಲ ಪಾಟೀಲ್, ನಾಮದೇವ ಭೋವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="rtejustify"><strong>ಧಾರವಾಡ: </strong>ತಾಲ್ಲೂಕಿನ ಮುಗದ ಗ್ರಾಮದಲ್ಲಿ ಆಹಾರ ಕಿಟ್ ಹಂಚಲು ಬಂದ ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್ ವಿರುದ್ಧ ಪಕ್ಷದವರೇ ಆದ ನಾಗರಾಜ ಛಬ್ಬಿ ಬೆಂಬಲಿಗರು ಎಂದು ಹೇಳಿಕೊಂಡ ಗುಂಪು ಅಡ್ಡಿಪಡಿಸಿ ‘ಧಿಕ್ಕಾರ’ ಕೂಗಿದ ಪ್ರಕರಣ ಬುಧವಾರ ಜರುಗಿತು.</p>.<p class="rtejustify">ಕಲಘಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ನಾಗರಾಜ ಛೆಬ್ಬಿ ಅವರು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಲಾಡ್ ಅವರು ಆಹಾರ ಕಿಟ್ ಹಂಚಲು ತೆರಳಿದ್ದು ಸಾಕಷ್ಟು ಗೊಂದಲ ಉಂಟು ಮಾಡಿರುವ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ. ಜತೆಗೆ ಇದರ ವಿಡಿಯೊ ಈಗ ಎಲ್ಲೆಡೆ ಹರಿದಾಡುತ್ತಿದೆ.</p>.<p class="rtejustify">ಕೊರೊನಾ ಹಿನ್ನೆಲೆಯಲ್ಲಿ ಕ್ಷೇತ್ರದನಿಗದಿ, ಮನಗುಂಡಿ, ಮನಸೂರ, ಮುಗದ ಗ್ರಾಮಗಳಲ್ಲಿ ಆಹಾರದ ಕಿಟ್ ವಿತರಣೆಗೆ ಸಂತೋಷ ಲಾಡ್ ಬಂದಿದ್ದರು. ಈ ವೇಳೆ ಮುಗದ ಕ್ರಾಸ್ ಬಳಿ ಲಾಡ್ ಅವರನ್ನು ತಡೆದು ನಿಲ್ಲಿಸಿದ ಗುಂಪು, ಲಾಡ್ ವಿರುದ್ಧ ಘೋಷಣೆ ಕೂಗಿದರು. ಇಷ್ಟು ಮಾತ್ರವಲ್ಲ ನಾಗರಾಜ ಛಬ್ಬಿ ಪರ ಘೋಷಣೆಯೂ ಕೇಳಿ ಬಂತು. ಇದರಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.</p>.<p class="rtejustify">‘ಇಷ್ಟು ದಿನ ಕ್ಷೇತ್ರಕ್ಕೆ ಬಂದಿಲ್ಲ. ಈಗ ಏಕೆ ಬಂದಿದ್ದೀರಿ? ನಿಮ್ಮ ಅವಶ್ಯಕತೆ ನಮಗೆ ಇಲ್ಲ’ ಎಂದು ಛಬ್ಬಿ ಬೆಂಬಲಿಗರು ಎಂದುಕೊಂಡ ಕೆಲ ಯುವಕರು ಲಾಡ್ ಅವರಿಗೆ ಹೇಳಿದರು.</p>.<p class="rtejustify">ಇದಕ್ಕೆ ಪ್ರತಿಕ್ರಿಯಿಸಿದ ಲಾಡ್, ‘ಇದನ್ನು ಪ್ರಶ್ನಿಸಲು ನೀವು ಯಾರು? ನೀವು ಕ್ಷೇತ್ರದ ಜನ ಅಲ್ಲವಲ್ಲ’ ಎಂದರು. ಇದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.</p>.<p class="rtejustify">ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಲಾಡ್, ದಿನ ಬಳಕೆಯ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.</p>.<p class="rtejustify">ಈ ಸಂದರ್ಭದಲ್ಲಿ ಪಕ್ಷದ ಇಸ್ಮಾಯಿಲ್ ತಮಟಗಾರ, ಬಸವರಾಜ ಮರಿತಮ್ಮನವರ, ಸಹದೇವ ಪಾಗೋಜಿ, ದೀಪಕ್ ದುರ್ಗಾಯಿ, ರುದ್ರಪ್ಪ ಕೊಂಪಣ್ಣವರ, ನಿಂಗಪ್ಪ ಘಾಟಿನ, ಸುನೀಲ ಪಾಟೀಲ್, ನಾಮದೇವ ಭೋವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>