<p><strong>ಹುಬ್ಬಳ್ಳಿ</strong>: ನಗರದ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಕೆಎಂಸಿ– ಆರ್ಐ) ಕಳೆದ ಆರು ತಿಂಗಳಲ್ಲಿ 101 ಮಂದಿ ಹೃದ್ರೋಗ ಸಮಸ್ಯೆಯಿಂದ ಮೃತಪಟ್ಟಿದ್ದು, ಅದರಲ್ಲಿ ಹೃದಯಾಘಾತದಿಂದ 35 ಮಂದಿ ಸಾವನ್ನಪ್ಪಿದ್ದಾರೆ.</p>.<p>2025ರ ಜನವರಿಯಿಂದ ಜೂನ್ವರೆಗೆ ಕೆಎಂಸಿ–ಆರ್ಐ ಆಸ್ಪತ್ರೆಯಲ್ಲಿ 1,449 ಮಂದಿ ಹೃದ್ರೋಗಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆದಿದ್ದಾರೆ. ಅದರಲ್ಲಿ ಹೃದಯಾಘಾತದಿಂದ 40 ವರ್ಷದೊಳಗಿನವರು ಇಬ್ಬರು, ಅದಕ್ಕಿಂತ ಹೆಚ್ಚಿನ ವಯೋಮಾನದ 33 ಮಂದಿ ಮೃತಪಟ್ಟಿದ್ದಾರೆ.</p>.<p>ರಾಜ್ಯದ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಜನರು ಆತಂಕಗೊಂಡಿದ್ದಾರೆ. ಧಾರವಾಡ ಜಿಲ್ಲೆ ಮಾತ್ರವಲ್ಲದೆ, ಸುತ್ತಮುತ್ತಲಿನ ಜಿಲ್ಲೆಗಳ ಜನರು ಕೆಎಂಸಿ–ಆರ್ಐ ಸೇರಿದಂತೆ ನಗರದ ವಿವಿಧ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಹೃದಯ ತಪಾಸಣೆಗೆ ಒಳಗಾಗುತ್ತಿದ್ದಾರೆ.</p>.<p>ಈ ಮುಂಚೆ ಹೃದಯ ಸಂಬಂಧ ರೋಗಗಳ ಚಿಕಿತ್ಸೆ ಹಾಗೂ ತಪಾಸಣೆಗಾಗಿ ದಿನವೊಂದಕ್ಕೆ ಅಂದಾಜು 100ರಿಂದ 120 ಜನರು ಕೆಎಂಸಿ–ಆರ್ಐ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಕಳೆದ ಮೂರು ವಾರಗಳಿಂದ ಹೃದಯ ತಪಾಸಣೆಗೆ ಬರುವವರ ಸಂಖ್ಯೆ ಶೇ 20ರಷ್ಟು ಹೆಚ್ಚಳವಾಗಿದೆ ಎನ್ನುತ್ತಾರೆ ಆಸ್ಪತ್ರೆಯ ವೈದ್ಯರು.</p>.<p>ಕೆಎಂಸಿ–ಆರ್ಐ ಮೂಲಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಹೃದ್ರೋಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದವರ ಸಂಖ್ಯೆ ಈ ವರ್ಷವೇ ಹೆಚ್ಚು. ಪ್ರಸಕ್ತ ವರ್ಷದ ಜೂನ್ವರೆಗೆ 13,872 ಮಂದಿ ಹೊರ ರೋಗಿ ಹಾಗೂ 1,752 ಮಂದಿ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆ ಹಾಗೂ ತಪಾಸಣೆಗೆ ಒಳಗಾಗಿದ್ದಾರೆ.</p>.<p>‘ಆಧುನಿಕ ಜೀವನಶೈಲಿಯೇ ಹೃದ್ರೋಗಕ್ಕೆ ಕಾರಣ. ಎದೆ ನೋವು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು. ನಿರ್ಲಕ್ಷ್ಯ ಮಾಡಿದ್ದರಿಂದ ಹೃದಯಾಘಾತ ಸಂಭವಿಸಿ ಸಾವಿನ ಪ್ರಕರಣಗಳು ವರದಿ ಆಗುತ್ತಿವೆ’ ಎಂದು ಕೆಎಂಸಿ–ಆರ್ಐನ ವೈದ್ಯಕೀಯ ಅಧೀಕ್ಷಕ ಡಾ.ಈಶ್ವರ ಹಸಬಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><blockquote>ಅನಾರೋಗ್ಯಕರ ಜೀವನಶೈಲಿಯೇ ಹೃದಯಾಘಾತಕ್ಕೆ ಕಾರಣ. ಉತ್ತಮ ಆಹಾರ ಸೇವಿಸಬೇಕು ದುಶ್ಚಟಗಳಿಂದ ದೂರ ಇರಬೇಕು. ನಿತ್ಯ ವ್ಯಾಯಾಮ ಮಾಡಬೇಕು</blockquote><span class="attribution"> ಈಶ್ವರ ಹಸಬಿ ವೈದ್ಯಕೀಯ ಅಧೀಕ್ಷಕ ಕೆಎಂಸಿ–ಆರ್ಐ</span></div>.<p>ಹೃದಯಾಘಾತಕ್ಕೆ ಕಾರಣಗಳೇನು?</p><p>* ಅನಾರೋಗ್ಯಕರ ಜೀವನಶೈಲಿ</p><p>* ನಿತ್ಯ ವ್ಯಾಯಾಮ ಮಾಡದಿರುವುದು</p><p>* ಅಧಿಕ ರಕ್ತದೊತ್ತಡ ಮಧುಮೇಹ</p><p>* ಧೂಮಪಾನ ಮಧ್ಯಪಾನ</p><p>* ಜಂಕ್ಫುಡ್ ಎಣ್ಣೆ ಪದಾರ್ಥ ಸೇವನೆ</p><p>* ಮಾನಸಿಕ ಒತ್ತಡ</p>.<h4> ಹೃದ್ರೋಗ ತಡೆಗೆ ಏನು ಮಾಡಬೇಕು? </h4><h4>* ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು</h4><h4>* ಪ್ರತಿದಿನ 30 ನಿಮಿಷ ವ್ಯಾಯಾಮ ಮಾಡಬೇಕು</h4><h4>* ಪ್ರತಿದಿನ ಕನಿಷ್ಠ 2 ಕಿ.ಮೀ ನಡಿಗೆ/ಓಟ</h4><h4>* ಉತ್ತಮ ಆಹಾರ ಹಣ್ಣುಗಳನ್ನು ಸೇವಿಸಬೇಕು</h4><h4>* ನಿಯಮಿತವಾಗಿ ಹೃದಯ ತಪಾಸಣೆ ಮಾಡಿಸಬೇಕು</h4><h4>* ಸರಿಯಾದ ಸಮಯಕ್ಕೆ ಊಟ ನಿದ್ರೆ ಮಾಡಬೇಕು</h4>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ನಗರದ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಕೆಎಂಸಿ– ಆರ್ಐ) ಕಳೆದ ಆರು ತಿಂಗಳಲ್ಲಿ 101 ಮಂದಿ ಹೃದ್ರೋಗ ಸಮಸ್ಯೆಯಿಂದ ಮೃತಪಟ್ಟಿದ್ದು, ಅದರಲ್ಲಿ ಹೃದಯಾಘಾತದಿಂದ 35 ಮಂದಿ ಸಾವನ್ನಪ್ಪಿದ್ದಾರೆ.</p>.<p>2025ರ ಜನವರಿಯಿಂದ ಜೂನ್ವರೆಗೆ ಕೆಎಂಸಿ–ಆರ್ಐ ಆಸ್ಪತ್ರೆಯಲ್ಲಿ 1,449 ಮಂದಿ ಹೃದ್ರೋಗಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆದಿದ್ದಾರೆ. ಅದರಲ್ಲಿ ಹೃದಯಾಘಾತದಿಂದ 40 ವರ್ಷದೊಳಗಿನವರು ಇಬ್ಬರು, ಅದಕ್ಕಿಂತ ಹೆಚ್ಚಿನ ವಯೋಮಾನದ 33 ಮಂದಿ ಮೃತಪಟ್ಟಿದ್ದಾರೆ.</p>.<p>ರಾಜ್ಯದ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಜನರು ಆತಂಕಗೊಂಡಿದ್ದಾರೆ. ಧಾರವಾಡ ಜಿಲ್ಲೆ ಮಾತ್ರವಲ್ಲದೆ, ಸುತ್ತಮುತ್ತಲಿನ ಜಿಲ್ಲೆಗಳ ಜನರು ಕೆಎಂಸಿ–ಆರ್ಐ ಸೇರಿದಂತೆ ನಗರದ ವಿವಿಧ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಹೃದಯ ತಪಾಸಣೆಗೆ ಒಳಗಾಗುತ್ತಿದ್ದಾರೆ.</p>.<p>ಈ ಮುಂಚೆ ಹೃದಯ ಸಂಬಂಧ ರೋಗಗಳ ಚಿಕಿತ್ಸೆ ಹಾಗೂ ತಪಾಸಣೆಗಾಗಿ ದಿನವೊಂದಕ್ಕೆ ಅಂದಾಜು 100ರಿಂದ 120 ಜನರು ಕೆಎಂಸಿ–ಆರ್ಐ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಕಳೆದ ಮೂರು ವಾರಗಳಿಂದ ಹೃದಯ ತಪಾಸಣೆಗೆ ಬರುವವರ ಸಂಖ್ಯೆ ಶೇ 20ರಷ್ಟು ಹೆಚ್ಚಳವಾಗಿದೆ ಎನ್ನುತ್ತಾರೆ ಆಸ್ಪತ್ರೆಯ ವೈದ್ಯರು.</p>.<p>ಕೆಎಂಸಿ–ಆರ್ಐ ಮೂಲಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಹೃದ್ರೋಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದವರ ಸಂಖ್ಯೆ ಈ ವರ್ಷವೇ ಹೆಚ್ಚು. ಪ್ರಸಕ್ತ ವರ್ಷದ ಜೂನ್ವರೆಗೆ 13,872 ಮಂದಿ ಹೊರ ರೋಗಿ ಹಾಗೂ 1,752 ಮಂದಿ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆ ಹಾಗೂ ತಪಾಸಣೆಗೆ ಒಳಗಾಗಿದ್ದಾರೆ.</p>.<p>‘ಆಧುನಿಕ ಜೀವನಶೈಲಿಯೇ ಹೃದ್ರೋಗಕ್ಕೆ ಕಾರಣ. ಎದೆ ನೋವು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು. ನಿರ್ಲಕ್ಷ್ಯ ಮಾಡಿದ್ದರಿಂದ ಹೃದಯಾಘಾತ ಸಂಭವಿಸಿ ಸಾವಿನ ಪ್ರಕರಣಗಳು ವರದಿ ಆಗುತ್ತಿವೆ’ ಎಂದು ಕೆಎಂಸಿ–ಆರ್ಐನ ವೈದ್ಯಕೀಯ ಅಧೀಕ್ಷಕ ಡಾ.ಈಶ್ವರ ಹಸಬಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><blockquote>ಅನಾರೋಗ್ಯಕರ ಜೀವನಶೈಲಿಯೇ ಹೃದಯಾಘಾತಕ್ಕೆ ಕಾರಣ. ಉತ್ತಮ ಆಹಾರ ಸೇವಿಸಬೇಕು ದುಶ್ಚಟಗಳಿಂದ ದೂರ ಇರಬೇಕು. ನಿತ್ಯ ವ್ಯಾಯಾಮ ಮಾಡಬೇಕು</blockquote><span class="attribution"> ಈಶ್ವರ ಹಸಬಿ ವೈದ್ಯಕೀಯ ಅಧೀಕ್ಷಕ ಕೆಎಂಸಿ–ಆರ್ಐ</span></div>.<p>ಹೃದಯಾಘಾತಕ್ಕೆ ಕಾರಣಗಳೇನು?</p><p>* ಅನಾರೋಗ್ಯಕರ ಜೀವನಶೈಲಿ</p><p>* ನಿತ್ಯ ವ್ಯಾಯಾಮ ಮಾಡದಿರುವುದು</p><p>* ಅಧಿಕ ರಕ್ತದೊತ್ತಡ ಮಧುಮೇಹ</p><p>* ಧೂಮಪಾನ ಮಧ್ಯಪಾನ</p><p>* ಜಂಕ್ಫುಡ್ ಎಣ್ಣೆ ಪದಾರ್ಥ ಸೇವನೆ</p><p>* ಮಾನಸಿಕ ಒತ್ತಡ</p>.<h4> ಹೃದ್ರೋಗ ತಡೆಗೆ ಏನು ಮಾಡಬೇಕು? </h4><h4>* ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು</h4><h4>* ಪ್ರತಿದಿನ 30 ನಿಮಿಷ ವ್ಯಾಯಾಮ ಮಾಡಬೇಕು</h4><h4>* ಪ್ರತಿದಿನ ಕನಿಷ್ಠ 2 ಕಿ.ಮೀ ನಡಿಗೆ/ಓಟ</h4><h4>* ಉತ್ತಮ ಆಹಾರ ಹಣ್ಣುಗಳನ್ನು ಸೇವಿಸಬೇಕು</h4><h4>* ನಿಯಮಿತವಾಗಿ ಹೃದಯ ತಪಾಸಣೆ ಮಾಡಿಸಬೇಕು</h4><h4>* ಸರಿಯಾದ ಸಮಯಕ್ಕೆ ಊಟ ನಿದ್ರೆ ಮಾಡಬೇಕು</h4>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>