ದಿಢೀರನೆ ಜೋರಾಗಿ ಮಳೆ ಸುರಿದ ಕಾರಣ ಈರುಳ್ಳಿ ಹಾಗೂ ವಿವಿಧ ಪಲ್ಲೆಗಳ ವ್ಯಾಪಾರಿಗಳಿಗೆ ತರಕಾರಿಗಳನ್ನು ಸುರಕ್ಷಿತವಾಗಿ ಬುಟ್ಟಿಯಲ್ಲಿ ತುಂಬಿಡಲು ಸಾಧ್ಯವಾಗಲಿಲ್ಲ. ಎರಡು ದಿನಗಳ ಹಿಂದೆಯೂ ನಗರದಲ್ಲಿ ಇದೇ ರೀತಿ ಮಳೆ ಅಬ್ಬರಿಸಿತ್ತು. ಪತ್ರಿಕೆ ಹಂಚುವವರು, ಹಾಲಿನ ವ್ಯಾಪಾರಿಗಳು ಕೂಡ ಮಳೆಯಲ್ಲಿ ನೆಂದುಕೊಂಡೇ ಕೆಲಸ ನಿರ್ವಹಿಸಿದ ಚಿತ್ರಣ ಕಂಡು ಬಂತು.