<p><strong>ಹುಬ್ಬಳ್ಳಿ</strong>: ಗದುಗಿನ ಕಡೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸಾರಿಗೆ ಬಸ್ ಅನ್ನು ನಗರದ ಗದಗ ರಸ್ತೆ ಬಳಿ ಬೈಕ್ ಅಡ್ಡಗಟ್ಟಿ ನಲ್ಲಿಸಿದ ವ್ಯಕ್ತಿಯೊಬ್ಬ, ಬಸ್ ಗಾಜು ಒಡೆದು, ಚಾಲಕ ಹಾಗೂ ನಿರ್ವಾಹಕರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಕುರಿತು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<p>ಚಾಲಕ ಮಲ್ಲಿಕಾರ್ಜುನ ಮತ್ತು ನಿರ್ವಾಹಕ ಯಲ್ಲಪ್ಪ ಅವರು ಗದಗ ರಸ್ತೆಯ ಡೇವಿಡ್ ಎಂಬಾತನ ವಿರುದ್ಧ, ಬೈಕ್ ನಂಬರ್ ಸಮೇತ ದೂರು ನೀಡಿದ್ದಾರೆ. ಬೈಕ್ನಲ್ಲಿ ಬಂದ ಡೇವಿಡ್ ಏಕಾಏಕಿ ಬಸ್ ತಡೆದು ಅವಾಚ್ಯವಾಗಿ ನಿಂದಿಸಿದ್ದಾನೆ. ಕೈಯಿಂದ ಗಾಜು ಒಡೆದು ಕೊಲೆಗೆ ಯತ್ನಿಸಿ, ನಂತರ ನಿರ್ವಾಹಕಗೂ ಅವಾಚ್ಯವಾಗಿ ನಿಂದಿಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p><strong>₹9.70 ಲಕ್ಷ ವಂಚನೆ:</strong> ಸ್ಮಾರ್ಟ್ ಮೈಂಡ್ಸ್ ಅಲೈಯನ್ಸ್ ಗ್ರೂಪ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ನಗರದ ರಿಯಾಜ್ ಅಹ್ಮದ್ ಅವರಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ ವ್ಯಕ್ತಿ, ₹9.70 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ವಂಚನೆ:</strong> ಆನ್ಲೈನ್ನಲ್ಲಿ ಸಾಲ ನೀಡುವುದಾಗಿ ನಗರದ ಖಾಜಾಸಾಬ್ ನದಾಫ್ ಅವರಿಗೆ ಕರೆ ಮಾಡಿದ ವ್ಯಕ್ತಿ, ಅವರಿಂದಲೇ ಹಣ ವರ್ಗಾಯಿಕೊಂಡು ವಂಚಿಸಿದ್ದಾನೆ.</p>.<p>ಸಾಲ ನೀಡುವುದಾಗಿ ನಂಬಿಸಿದ ವಂಚಕ, ಖಾಜಾಸಾಬ್ ಅವರಿಂದ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಗದುಗಿನ ಕಡೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸಾರಿಗೆ ಬಸ್ ಅನ್ನು ನಗರದ ಗದಗ ರಸ್ತೆ ಬಳಿ ಬೈಕ್ ಅಡ್ಡಗಟ್ಟಿ ನಲ್ಲಿಸಿದ ವ್ಯಕ್ತಿಯೊಬ್ಬ, ಬಸ್ ಗಾಜು ಒಡೆದು, ಚಾಲಕ ಹಾಗೂ ನಿರ್ವಾಹಕರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಕುರಿತು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<p>ಚಾಲಕ ಮಲ್ಲಿಕಾರ್ಜುನ ಮತ್ತು ನಿರ್ವಾಹಕ ಯಲ್ಲಪ್ಪ ಅವರು ಗದಗ ರಸ್ತೆಯ ಡೇವಿಡ್ ಎಂಬಾತನ ವಿರುದ್ಧ, ಬೈಕ್ ನಂಬರ್ ಸಮೇತ ದೂರು ನೀಡಿದ್ದಾರೆ. ಬೈಕ್ನಲ್ಲಿ ಬಂದ ಡೇವಿಡ್ ಏಕಾಏಕಿ ಬಸ್ ತಡೆದು ಅವಾಚ್ಯವಾಗಿ ನಿಂದಿಸಿದ್ದಾನೆ. ಕೈಯಿಂದ ಗಾಜು ಒಡೆದು ಕೊಲೆಗೆ ಯತ್ನಿಸಿ, ನಂತರ ನಿರ್ವಾಹಕಗೂ ಅವಾಚ್ಯವಾಗಿ ನಿಂದಿಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p><strong>₹9.70 ಲಕ್ಷ ವಂಚನೆ:</strong> ಸ್ಮಾರ್ಟ್ ಮೈಂಡ್ಸ್ ಅಲೈಯನ್ಸ್ ಗ್ರೂಪ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು ಎಂದು ನಗರದ ರಿಯಾಜ್ ಅಹ್ಮದ್ ಅವರಿಗೆ ವಾಟ್ಸ್ಆ್ಯಪ್ ಸಂದೇಶ ಕಳುಹಿಸಿದ ವ್ಯಕ್ತಿ, ₹9.70 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ವಂಚನೆ:</strong> ಆನ್ಲೈನ್ನಲ್ಲಿ ಸಾಲ ನೀಡುವುದಾಗಿ ನಗರದ ಖಾಜಾಸಾಬ್ ನದಾಫ್ ಅವರಿಗೆ ಕರೆ ಮಾಡಿದ ವ್ಯಕ್ತಿ, ಅವರಿಂದಲೇ ಹಣ ವರ್ಗಾಯಿಕೊಂಡು ವಂಚಿಸಿದ್ದಾನೆ.</p>.<p>ಸಾಲ ನೀಡುವುದಾಗಿ ನಂಬಿಸಿದ ವಂಚಕ, ಖಾಜಾಸಾಬ್ ಅವರಿಂದ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಪಡೆದು ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>