<p><strong>ಹುಬ್ಬಳ್ಳಿ: </strong>ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸಾಕಷ್ಟು ಗೊಂದಲಗಳು ಇರುವುದು ನಿಜ. ಆದರೆ ಇದಕ್ಕೆ ನಾವು ಕಾರಣವಲ್ಲ ಎಂದು 46ನೇ ವಾರ್ಡ್ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ವೀರಣ್ಣ ಸವಡಿ ಹೇಳಿದರು.</p>.<p>ಮತಗಟ್ಟೆ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು 'ಒಂದೇ ಮನೆ ಸದಸ್ಯರದ್ದು ಬೇರೆ ಬೇರೆ ವಾರ್ಡ್ಗಳಲ್ಲಿ ಮತದಾನದ ಹಕ್ಕುಬಂದಿದೆ. ಮತದಾನಕ್ಕಾಗಿ ಬೇರೆ ಬೇರೆ ಕೇಂದ್ರಗಳಿಗೆ ಅಲೆದಾಡಬೇಕಾಗುತ್ತಿದೆ' ಎಂದು ದೂರಿದರು.</p>.<p><a href="https://www.prajavani.net/district/dharwad/bjp-congress-fight-in-hubli-karnataka-politics-863492.html" itemprop="url">ಕಾಂಗ್ರೆಸ್ ಗಟ್ಟಿನೆಲೆ ಇರುವಲ್ಲಿ ಬಿಜೆಪಿ ಕುತಂತ್ರ: ಪ್ರಸಾದ ಅಬ್ಬಯ್ಯ</a></p>.<p>ಮತದಾರರ ಪಟ್ಟಿ ಪರಿಷ್ಕರಣೆಯನ್ನು ಅಧಿಕಾರಿಗಳು ಆಯಾ ಬಡಾವಣೆಗಳಿಗೆ ಹೋಗಿ ಮಾಡಿಲ್ಲ. ಕಚೇರಿಯಲ್ಲಿದ್ದುಕೊಂಡೇ ಪಟ್ಟಿ ತಯಾರಿಸಿದ್ದಾರೆ. ಹೀಗಾಗಿ ಮೃತಪಟ್ಟವರ ಹೆಸರುಗಳು ಸಹ ಈಗಲೂ ಪಟ್ಟಿಯಲ್ಲಿ ಉಳಿದುಕೊಂಡಿವೆ. ಇದಕ್ಕೆ ಅಧಿಕಾರಿಗಳ ಲೋಪ ಕಾರಣ ಎಂದರು.</p>.<p>ದತ್ತಿ ರೋಟರಿ ಕಿವುಡ ಮಕ್ಕಳ ಶಾಲೆಯಲ್ಲಿ ಮತದಾನ ಮಾಡಿದ ರಾಘವೇಂದ್ರ ಗುತ್ತಲ ಎಂಬುವರು ನಮ್ಮ ಮನೆಯ ಸದಸ್ಯರದ್ದು ಬೇರೆ ಬೇರೆ ವಾರ್ಡ್ಗಳಲ್ಲಿ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ನನ್ನ ಮಗಳಿಗೆ ಕಾಲಿಲ್ಲ. ಮತಗಟ್ಟೆ ಕೇಂದ್ರಗಳಿಗೆ ಪದೇ ಪದೇ ಅಲೆದಾಡುವುದೇ ಕೆಲಸವಾದರೆ ಮಗಳನ್ನು ಹಕ್ಕು ಚಲಾಯಿಸಲು ಹೇಗೆ ಕರೆದುಕೊಂಡು ಹೋಗಬೇಕು ಎಂದು ಪ್ರಶ್ನಿಸಿದರು.</p>.<p><a href="https://www.prajavani.net/photo/karnataka-news/municipal-corporation-election-in-karnataka-hubli-dharwad-belagavi-and-kalaburagi-863486.html" itemprop="url">3 ಮಹಾನಗರ ಪಾಲಿಕೆಗಳ ಚುನಾವಣೆ: ಗರಿಗೆದರಿದ ಮತದಾನ (ಫೋಟೊಗಳು)</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸಾಕಷ್ಟು ಗೊಂದಲಗಳು ಇರುವುದು ನಿಜ. ಆದರೆ ಇದಕ್ಕೆ ನಾವು ಕಾರಣವಲ್ಲ ಎಂದು 46ನೇ ವಾರ್ಡ್ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ವೀರಣ್ಣ ಸವಡಿ ಹೇಳಿದರು.</p>.<p>ಮತಗಟ್ಟೆ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು 'ಒಂದೇ ಮನೆ ಸದಸ್ಯರದ್ದು ಬೇರೆ ಬೇರೆ ವಾರ್ಡ್ಗಳಲ್ಲಿ ಮತದಾನದ ಹಕ್ಕುಬಂದಿದೆ. ಮತದಾನಕ್ಕಾಗಿ ಬೇರೆ ಬೇರೆ ಕೇಂದ್ರಗಳಿಗೆ ಅಲೆದಾಡಬೇಕಾಗುತ್ತಿದೆ' ಎಂದು ದೂರಿದರು.</p>.<p><a href="https://www.prajavani.net/district/dharwad/bjp-congress-fight-in-hubli-karnataka-politics-863492.html" itemprop="url">ಕಾಂಗ್ರೆಸ್ ಗಟ್ಟಿನೆಲೆ ಇರುವಲ್ಲಿ ಬಿಜೆಪಿ ಕುತಂತ್ರ: ಪ್ರಸಾದ ಅಬ್ಬಯ್ಯ</a></p>.<p>ಮತದಾರರ ಪಟ್ಟಿ ಪರಿಷ್ಕರಣೆಯನ್ನು ಅಧಿಕಾರಿಗಳು ಆಯಾ ಬಡಾವಣೆಗಳಿಗೆ ಹೋಗಿ ಮಾಡಿಲ್ಲ. ಕಚೇರಿಯಲ್ಲಿದ್ದುಕೊಂಡೇ ಪಟ್ಟಿ ತಯಾರಿಸಿದ್ದಾರೆ. ಹೀಗಾಗಿ ಮೃತಪಟ್ಟವರ ಹೆಸರುಗಳು ಸಹ ಈಗಲೂ ಪಟ್ಟಿಯಲ್ಲಿ ಉಳಿದುಕೊಂಡಿವೆ. ಇದಕ್ಕೆ ಅಧಿಕಾರಿಗಳ ಲೋಪ ಕಾರಣ ಎಂದರು.</p>.<p>ದತ್ತಿ ರೋಟರಿ ಕಿವುಡ ಮಕ್ಕಳ ಶಾಲೆಯಲ್ಲಿ ಮತದಾನ ಮಾಡಿದ ರಾಘವೇಂದ್ರ ಗುತ್ತಲ ಎಂಬುವರು ನಮ್ಮ ಮನೆಯ ಸದಸ್ಯರದ್ದು ಬೇರೆ ಬೇರೆ ವಾರ್ಡ್ಗಳಲ್ಲಿ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ನನ್ನ ಮಗಳಿಗೆ ಕಾಲಿಲ್ಲ. ಮತಗಟ್ಟೆ ಕೇಂದ್ರಗಳಿಗೆ ಪದೇ ಪದೇ ಅಲೆದಾಡುವುದೇ ಕೆಲಸವಾದರೆ ಮಗಳನ್ನು ಹಕ್ಕು ಚಲಾಯಿಸಲು ಹೇಗೆ ಕರೆದುಕೊಂಡು ಹೋಗಬೇಕು ಎಂದು ಪ್ರಶ್ನಿಸಿದರು.</p>.<p><a href="https://www.prajavani.net/photo/karnataka-news/municipal-corporation-election-in-karnataka-hubli-dharwad-belagavi-and-kalaburagi-863486.html" itemprop="url">3 ಮಹಾನಗರ ಪಾಲಿಕೆಗಳ ಚುನಾವಣೆ: ಗರಿಗೆದರಿದ ಮತದಾನ (ಫೋಟೊಗಳು)</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>