<p><strong>ಹುಬ್ಬಳ್ಳಿ</strong>: ರಸ್ತೆ, ಉದ್ಯಾನ ಅಭಿವೃದ್ಧಿಗೆ ಸರ್ಕಾರಿ ಅನುದಾನವೇ ಬೇಕು ಎನ್ನುವ ಕಾಲದಲ್ಲಿ ದಾನಿಗಳ ನೆರವಿನಿಂದಾಗಿ ನಗರದ ಸಬ್ ಜೈಲ್ನಿಂದ ನೃಪತುಂಗ ಬೆಟ್ಟದ ಮಾರ್ಗದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಯಾವುದೇ ಸರ್ಕಾರಿ ಅನುದಾನಕ್ಕೆ ಕಾಯದೇ ದಾನಿಗಳ ಅನುದಾನದಲ್ಲಿ ನೃಪತುಂಗ ಬೆಟ್ಟದ ರಸ್ತೆ ತನ್ನ ಸೌಂದರ್ಯೀಕಣ ಹೆಚ್ಚಿಸಿಕೊಳ್ಳುತ್ತಿದೆ.</p>.<p>ಹೌದು... ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ ಅವರು ವಾರ್ಡ್ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಈ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಅದರಲ್ಲಿ ತಮ್ಮ ಸ್ವಂತ ಹಣದಲ್ಲಿ ನೃಪತುಂಗ ಬೆಟ್ಟಕ್ಕೆ ತೆರಳುವ ಪಾದಚಾರಿ ಮಾರ್ಗದ ಮೇಲೆ ಆಸನಗಳನ್ನು ಅಳವಡಿಸುವ ಕನಸು ಕಂಡಿದ್ದ ಇವರ ಕನಸಿಗೆ ದಾನಿಗಳು ಕೂಡ ಕೈಜೋಡಿಸಿದ್ದಾರೆ.</p>.<p>ರಸ್ತೆ ಪಕ್ಕದಲ್ಲಿ 12 ಆಸನಗಳನ್ನು ಅಳವಡಿಸುವ ಕನಸು ಕಂಡಿದ್ದ ಇವರು, ಇಂದು 20 ಆಸನಗಳನ್ನು ಅಳವಡಿಸುವ ಮೂಲಕ ವೃದ್ಧರು, ವಾಯು ವಿಹಾರಕ್ಕೆ ಬರುವವರು, ವಿಶ್ರಾಂತಿ ಪಡೆಯುವವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಿತ್ಯ ನೂರಾರು ಜನರು ಓಡಾಡುವ ಈ ರಸ್ತೆಯಲ್ಲಿ ಮೊದಲು ಕುಳಿತುಕೊಳ್ಳಲು ಆಸನಗಳಿರಲಿಲ್ಲ. </p>.<p>ಈ ಕಾರ್ಯಕ್ಕೆ ರೋಟರಿ ಕ್ಲಬ್, ಇನ್ನರ್ ವಿಲ್ ಕ್ಲಬ್, ಶಕ್ತಿ ಕಾಲೊನಿ ನಿವಾಸಿಗಳು ಕೈಜೋಡಿಸಿದ್ದು, ಶಕ್ತಿ ಕಾಲೊನಿ ನಿವಾಸಿ ಜೀವನ ಮೊಟಗಿ ಅವರು ತಮ್ಮ ಮಗನ ನೆನಪಿಗಾಗಿ 6 ಆಸನಗಳ ಅಳವಡಿಕೆಗೆ ಹಣ ನೀಡಿದ್ದಾರೆ.</p>.<p>ಉದ್ಯಮಿ ಧೀರಜ್ ಎಂಬುವವರು ನೃಪತುಂಗ ಬೆಟ್ಟ ಇನ್ನಷ್ಟು ಅಂದಗೊಳಿಸಲು ರಸ್ತೆಯಲ್ಲಿ ಎಲ್ಇಡಿ ಬಲ್ಬ್ ಅಳವಡಿಸುವುದು, ಕುಡಿಯುವ ನೀರಿನ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ಹಾಕಿಕೊಂಡು ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಿದ್ದಾರೆ.</p>.<p>‘ಫಾರೆಸ್ಟ್ ಕಾಲೊನಿಯಲ್ಲಿರುವ ಪಾಲಿಕೆ ವ್ಯಾಪ್ತಿಯ ಉದ್ಯಾನದಲ್ಲಿ ಬಯಲು ರಂಗಮಂದಿರ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದು, ₹20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಬಯಲು ರಂಗಮಂದಿರ ನಿರ್ಮಾಣದಿಂದ ಹಲವು ಕಾರ್ಯಕ್ರಮಗಳ ಆಯೋಜನೆಗೆ ಸಹಕಾರಿ ಆಗಲಿದೆ’ ಎಂದು ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ್ ತಿಳಿಸಿದರು.</p>.<p>‘ಶಕ್ತಿ ಕಾಲೊನಿ ನಿವಾಸಿ ಜೀವನ ಮೊಟಗಿ 6, ರೋಟರಿ ಕ್ಲಬ್ನಿಂದ 2, ಇನ್ನರ್ ವೀಲ್ ಕ್ಲಬ್ನಿಂದ 6 ಮತ್ತು ವೈಯಕ್ತಿಕವಾಗಿ 6 ಆಸನಗಳ ಅಳವಡಿಕೆಗೆ ಹಣ ನೀಡಿದ್ದೇನೆ. ಒಂದು ಆಸನಕ್ಕೆ ₹5 ಸಾವಿರ ಖರ್ಚು ತಗುಲಿದ್ದು, ಒಟ್ಟು ₹1 ಲಕ್ಷ ವೆಚ್ಚದಲ್ಲಿ ಆಸನಗಳನ್ನು ಅಳವಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.</p>.<p>ಒಂದು ಆಸನಕ್ಕೆ ₹5 ಸಾವಿರ ಖರ್ಚು ₹1 ಲಕ್ಷ ವೆಚ್ಚದಲ್ಲಿ ಆಸನಗಳ ಅಳವಡಿಕೆ ಬಯಲು ರಂಗಮಂದಿರ ನಿರ್ಮಾಣಕ್ಕೆ ಚಿಂತನೆ </p>.<div><blockquote>ವಾರ್ಡ್ ಅಭಿವೃದ್ಧಿ ಕನಸು ಕಂಡಿದ್ದ ನನಗೆ ದಾನಿಗಳು ಕೈ ಜೋಡಿಸಿ ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಮಾದರಿ ವಾರ್ಡ್ ನಿರ್ಮಿಸಲಾಗುವುದು </blockquote><span class="attribution">ಸೀಮಾ ಮೊಗಲಿಶೆಟ್ಟರ್ ಪಾಲಿಕೆ ಸದಸ್ಯೆ</span></div>.<div><blockquote>ಬಿಸಿಲಿನ ವೇಳೆ ಕೆಲ ಸಮಯ ಕುಳಿತು ದಣಿವಾರಿಸಿಕೊಳ್ಳಲು ಈ ಆಸನಗಳು ತುಂಬಾ ಅನುಕೂಲವಾಗಿವೆ. ಇನ್ನೂ ಹೆಚ್ಚು ಆಸನ ಅಳವಡಿಸಿದರೆ ಉತ್ತಮ. </blockquote><span class="attribution">ಕಲ್ಮೇಶ ವಿಶ್ವೇಶ್ವರ ನಗರ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ರಸ್ತೆ, ಉದ್ಯಾನ ಅಭಿವೃದ್ಧಿಗೆ ಸರ್ಕಾರಿ ಅನುದಾನವೇ ಬೇಕು ಎನ್ನುವ ಕಾಲದಲ್ಲಿ ದಾನಿಗಳ ನೆರವಿನಿಂದಾಗಿ ನಗರದ ಸಬ್ ಜೈಲ್ನಿಂದ ನೃಪತುಂಗ ಬೆಟ್ಟದ ಮಾರ್ಗದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಯಾವುದೇ ಸರ್ಕಾರಿ ಅನುದಾನಕ್ಕೆ ಕಾಯದೇ ದಾನಿಗಳ ಅನುದಾನದಲ್ಲಿ ನೃಪತುಂಗ ಬೆಟ್ಟದ ರಸ್ತೆ ತನ್ನ ಸೌಂದರ್ಯೀಕಣ ಹೆಚ್ಚಿಸಿಕೊಳ್ಳುತ್ತಿದೆ.</p>.<p>ಹೌದು... ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ ಅವರು ವಾರ್ಡ್ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಈ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಅದರಲ್ಲಿ ತಮ್ಮ ಸ್ವಂತ ಹಣದಲ್ಲಿ ನೃಪತುಂಗ ಬೆಟ್ಟಕ್ಕೆ ತೆರಳುವ ಪಾದಚಾರಿ ಮಾರ್ಗದ ಮೇಲೆ ಆಸನಗಳನ್ನು ಅಳವಡಿಸುವ ಕನಸು ಕಂಡಿದ್ದ ಇವರ ಕನಸಿಗೆ ದಾನಿಗಳು ಕೂಡ ಕೈಜೋಡಿಸಿದ್ದಾರೆ.</p>.<p>ರಸ್ತೆ ಪಕ್ಕದಲ್ಲಿ 12 ಆಸನಗಳನ್ನು ಅಳವಡಿಸುವ ಕನಸು ಕಂಡಿದ್ದ ಇವರು, ಇಂದು 20 ಆಸನಗಳನ್ನು ಅಳವಡಿಸುವ ಮೂಲಕ ವೃದ್ಧರು, ವಾಯು ವಿಹಾರಕ್ಕೆ ಬರುವವರು, ವಿಶ್ರಾಂತಿ ಪಡೆಯುವವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಿತ್ಯ ನೂರಾರು ಜನರು ಓಡಾಡುವ ಈ ರಸ್ತೆಯಲ್ಲಿ ಮೊದಲು ಕುಳಿತುಕೊಳ್ಳಲು ಆಸನಗಳಿರಲಿಲ್ಲ. </p>.<p>ಈ ಕಾರ್ಯಕ್ಕೆ ರೋಟರಿ ಕ್ಲಬ್, ಇನ್ನರ್ ವಿಲ್ ಕ್ಲಬ್, ಶಕ್ತಿ ಕಾಲೊನಿ ನಿವಾಸಿಗಳು ಕೈಜೋಡಿಸಿದ್ದು, ಶಕ್ತಿ ಕಾಲೊನಿ ನಿವಾಸಿ ಜೀವನ ಮೊಟಗಿ ಅವರು ತಮ್ಮ ಮಗನ ನೆನಪಿಗಾಗಿ 6 ಆಸನಗಳ ಅಳವಡಿಕೆಗೆ ಹಣ ನೀಡಿದ್ದಾರೆ.</p>.<p>ಉದ್ಯಮಿ ಧೀರಜ್ ಎಂಬುವವರು ನೃಪತುಂಗ ಬೆಟ್ಟ ಇನ್ನಷ್ಟು ಅಂದಗೊಳಿಸಲು ರಸ್ತೆಯಲ್ಲಿ ಎಲ್ಇಡಿ ಬಲ್ಬ್ ಅಳವಡಿಸುವುದು, ಕುಡಿಯುವ ನೀರಿನ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ಹಾಕಿಕೊಂಡು ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಿದ್ದಾರೆ.</p>.<p>‘ಫಾರೆಸ್ಟ್ ಕಾಲೊನಿಯಲ್ಲಿರುವ ಪಾಲಿಕೆ ವ್ಯಾಪ್ತಿಯ ಉದ್ಯಾನದಲ್ಲಿ ಬಯಲು ರಂಗಮಂದಿರ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದು, ₹20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಬಯಲು ರಂಗಮಂದಿರ ನಿರ್ಮಾಣದಿಂದ ಹಲವು ಕಾರ್ಯಕ್ರಮಗಳ ಆಯೋಜನೆಗೆ ಸಹಕಾರಿ ಆಗಲಿದೆ’ ಎಂದು ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ್ ತಿಳಿಸಿದರು.</p>.<p>‘ಶಕ್ತಿ ಕಾಲೊನಿ ನಿವಾಸಿ ಜೀವನ ಮೊಟಗಿ 6, ರೋಟರಿ ಕ್ಲಬ್ನಿಂದ 2, ಇನ್ನರ್ ವೀಲ್ ಕ್ಲಬ್ನಿಂದ 6 ಮತ್ತು ವೈಯಕ್ತಿಕವಾಗಿ 6 ಆಸನಗಳ ಅಳವಡಿಕೆಗೆ ಹಣ ನೀಡಿದ್ದೇನೆ. ಒಂದು ಆಸನಕ್ಕೆ ₹5 ಸಾವಿರ ಖರ್ಚು ತಗುಲಿದ್ದು, ಒಟ್ಟು ₹1 ಲಕ್ಷ ವೆಚ್ಚದಲ್ಲಿ ಆಸನಗಳನ್ನು ಅಳವಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.</p>.<p>ಒಂದು ಆಸನಕ್ಕೆ ₹5 ಸಾವಿರ ಖರ್ಚು ₹1 ಲಕ್ಷ ವೆಚ್ಚದಲ್ಲಿ ಆಸನಗಳ ಅಳವಡಿಕೆ ಬಯಲು ರಂಗಮಂದಿರ ನಿರ್ಮಾಣಕ್ಕೆ ಚಿಂತನೆ </p>.<div><blockquote>ವಾರ್ಡ್ ಅಭಿವೃದ್ಧಿ ಕನಸು ಕಂಡಿದ್ದ ನನಗೆ ದಾನಿಗಳು ಕೈ ಜೋಡಿಸಿ ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಮಾದರಿ ವಾರ್ಡ್ ನಿರ್ಮಿಸಲಾಗುವುದು </blockquote><span class="attribution">ಸೀಮಾ ಮೊಗಲಿಶೆಟ್ಟರ್ ಪಾಲಿಕೆ ಸದಸ್ಯೆ</span></div>.<div><blockquote>ಬಿಸಿಲಿನ ವೇಳೆ ಕೆಲ ಸಮಯ ಕುಳಿತು ದಣಿವಾರಿಸಿಕೊಳ್ಳಲು ಈ ಆಸನಗಳು ತುಂಬಾ ಅನುಕೂಲವಾಗಿವೆ. ಇನ್ನೂ ಹೆಚ್ಚು ಆಸನ ಅಳವಡಿಸಿದರೆ ಉತ್ತಮ. </blockquote><span class="attribution">ಕಲ್ಮೇಶ ವಿಶ್ವೇಶ್ವರ ನಗರ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>