ಯೆಸ್ ಚಂಡಮಾರುತದ ಆತಂಕ ಇರುವ ಕಾರಣ ಮೇ 25ರಿಂದ ಮುಂದಿನ ಆದೇಶದ ತನಕ ಹೌರಾ–ವಾಸ್ಕೋಡಗಾಮ ಅಮರಾವತಿ ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಎರಡೂ ಮಾರ್ಗದಿಂದ ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿ ಈ ರೈಲು ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್ರಾಕ್ ಮೂಲಕ ಸಂಚರಿಸುತ್ತಿತ್ತು.