ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ: 3 ದಿನದಲ್ಲಿ ವರದಿಗೆ ಮೇಯರ್ ಸೂಚನೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಸದನ ಸಮಿತಿ ರಚನೆ
Last Updated 25 ಆಗಸ್ಟ್ 2022, 12:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದ ಬಳಿ‌ ಇರುವ ಈದ್ಗಾ‌ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ, ಐವರು ಸದಸ್ಯರ ಸದನ ಸಮಿತಿಯನ್ನು ಮಹಾನಗರ ಪಾಲಿಕೆ ಗುರುವಾರ ರಚಿಸಲಾಯಿತು.

ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಸಮಿತಿಯಲ್ಲಿ ಆಡಳಿತ ಪಕ್ಷದ ಮೂವರು ಹಾಗೂ ವಿರೋಧ ಪಕ್ಷದ ಇಬ್ಬರು ಇರಲಿದ್ದಾರೆ. ನಾಗರಿಕರು, ಅಧಿಕಾರಿಗಳು‌ ಹಾಗೂ ವಿವಿಧ ಇಲಾಖೆಗಳ ಅಭಿಪ್ರಾಯ ಪಡೆಯಲಿರುವ ಸಮಿತಿಯು, ಆ.‌ 29ರಂದು‌ ಬೆಳಿಗ್ಗೆ 11ರೊಳಗೆ ನಿರ್ಧಾರ ತಿಳಿಸಲಿದೆ ಎಂದು ಮೇಯರ್ ಈರೇಶ ಅಂಚಟಗೇರಿ ಮಾಧ್ಯಮದವರಿಗೆ ತಿಳಿಸಿದರು.

ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ, ಸಮಿತಿಯು ಎಲ್ಲಾ ಆಯಾಮಗಳಿಂದಲೂ‌ ಪರಿಶೀಲನೆ‌ ನಡೆಸಲಿದೆ. ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆಯಾಗದಂತೆ ಮೂರು ದಿನದೊಳಗೆ ತೀರ್ಮಾನ ಕೈಗೊಳ್ಳಲಿದೆ. ಅದಕ್ಕೆ ಎಲ್ಲಾ ಸದಸ್ಯರು ಬದ್ಧವಾಗಿರಲಿದ್ದು, ಈ ತೀರ್ಮಾನವೇ ಮುಂದಕ್ಕೂ ಅನ್ವಯವಾಗಲಿದೆ‌ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT