<p><strong>ಧಾರವಾಡ:</strong> ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಯು.ಆರ್. ರಾವ್ ಉಪಗ್ರಹ ಕೇಂದ್ರವು ನಡೆಸಿದ ‘ಇಸ್ರೊ ರೊಬೊಟಿಕ್ಸ್ ಚಾಲೆಂಜ್’ ಸ್ಪರ್ಧೆಯಲ್ಲಿಇಲ್ಲಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ತಂಡ 3ನೇ ಬಹುಮಾನ ಪಡೆದಿದೆ.</p>.<p>‘ಫ್ಲೈ ಮಿ ಆನ್ ಮಾರ್ಸ್’ ವಿಷಯ ಕುರಿತ ಸ್ಪರ್ಧೆಯಲ್ಲಿ ವಿವಿಧ ಐಐಟಿ, ಎನ್ಐಟಿ, ಎಂಜಿನಿಯರಿಂಗ್ ವಿದ್ಯಾಲಯ, ತಾಂತ್ರಿಕ ವಿಶ್ವವಿದ್ಯಾಲಯಗಳ 510ಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದವು. ತೃತೀಯ ಸ್ಥಾನ ಗಳಿಸಿದ ಸಂಸ್ಥೆಯ ತಂಡವು ₹ 5 ಲಕ್ಷ ಬಹುಮಾನ ಪಡೆದಿದೆ’ ಎಂದು ಐಐಐಟಿ ನಿರ್ದೇಶಕ ಎಸ್.ಆರ್.ಮಹದೇವ ಪ್ರಸನ್ನ ತಿಳಿಸಿದರು.</p>.<p>‘ಮಂಗಳಯಾನಕ್ಕೆ ಇಸ್ರೊ ಉದ್ದೇಶಿಸಿದೆ. ಮಂಗಳ ಗ್ರಹದಲ್ಲಿ ಗುರುತ್ವಾಕರ್ಷಣೆ ಮತ್ತು ಜಿಪಿಎಸ್ ಸೌಲಭ್ಯ ಇಲ್ಲ. ಆ ಗ್ರಹದಲ್ಲಿ ಡ್ರೋನ್ ಹಾರಾಟ ಮತ್ತು ಕೆಳಗಿಳಿಯುವ ವಿಷಯ ಆಧರಿಸಿ ತಂಡವು ಡ್ರೋನ್ ವಿನ್ಯಾಸಗೊಳಿಸಿತ್ತು’ ಎಂದು ತಿಳಿಸಿದರು.</p>.<p>‘ಸೌರವ್ ಸುರೇಶ್ ಕರ್ಕಿ ನೇತೃತ್ವದ ತಂಡದಲ್ಲಿ ಅಮಿತ್ ಮ್ಯಾಥ್ಯೂ, ರಂಜಿತ್ ಬಾಬು, ಕೃಷ್ಣ ಸಾಯಿ ಗೊಲ್ಲಮುಡಿ, ಅರ್ನವ್ ಅಮಿತ್ ಅಂಗರ್ಕರ್, ಪುರೋಹಿತ್ ಗೌರವ್ ಘನಶ್ಯಾಮ್ ಮತ್ತು ಲೋಹಿತ್ ಬಿ. ಇದ್ದರು. ಪ್ರಾಧ್ಯಾಪಕ ಮಲ್ಲಿಕಾರ್ಜುನ ಕಂಡೆ ಮಾರ್ಗದರ್ಶನ ನೀಡಿದರು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಯು.ಆರ್. ರಾವ್ ಉಪಗ್ರಹ ಕೇಂದ್ರವು ನಡೆಸಿದ ‘ಇಸ್ರೊ ರೊಬೊಟಿಕ್ಸ್ ಚಾಲೆಂಜ್’ ಸ್ಪರ್ಧೆಯಲ್ಲಿಇಲ್ಲಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ತಂಡ 3ನೇ ಬಹುಮಾನ ಪಡೆದಿದೆ.</p>.<p>‘ಫ್ಲೈ ಮಿ ಆನ್ ಮಾರ್ಸ್’ ವಿಷಯ ಕುರಿತ ಸ್ಪರ್ಧೆಯಲ್ಲಿ ವಿವಿಧ ಐಐಟಿ, ಎನ್ಐಟಿ, ಎಂಜಿನಿಯರಿಂಗ್ ವಿದ್ಯಾಲಯ, ತಾಂತ್ರಿಕ ವಿಶ್ವವಿದ್ಯಾಲಯಗಳ 510ಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದವು. ತೃತೀಯ ಸ್ಥಾನ ಗಳಿಸಿದ ಸಂಸ್ಥೆಯ ತಂಡವು ₹ 5 ಲಕ್ಷ ಬಹುಮಾನ ಪಡೆದಿದೆ’ ಎಂದು ಐಐಐಟಿ ನಿರ್ದೇಶಕ ಎಸ್.ಆರ್.ಮಹದೇವ ಪ್ರಸನ್ನ ತಿಳಿಸಿದರು.</p>.<p>‘ಮಂಗಳಯಾನಕ್ಕೆ ಇಸ್ರೊ ಉದ್ದೇಶಿಸಿದೆ. ಮಂಗಳ ಗ್ರಹದಲ್ಲಿ ಗುರುತ್ವಾಕರ್ಷಣೆ ಮತ್ತು ಜಿಪಿಎಸ್ ಸೌಲಭ್ಯ ಇಲ್ಲ. ಆ ಗ್ರಹದಲ್ಲಿ ಡ್ರೋನ್ ಹಾರಾಟ ಮತ್ತು ಕೆಳಗಿಳಿಯುವ ವಿಷಯ ಆಧರಿಸಿ ತಂಡವು ಡ್ರೋನ್ ವಿನ್ಯಾಸಗೊಳಿಸಿತ್ತು’ ಎಂದು ತಿಳಿಸಿದರು.</p>.<p>‘ಸೌರವ್ ಸುರೇಶ್ ಕರ್ಕಿ ನೇತೃತ್ವದ ತಂಡದಲ್ಲಿ ಅಮಿತ್ ಮ್ಯಾಥ್ಯೂ, ರಂಜಿತ್ ಬಾಬು, ಕೃಷ್ಣ ಸಾಯಿ ಗೊಲ್ಲಮುಡಿ, ಅರ್ನವ್ ಅಮಿತ್ ಅಂಗರ್ಕರ್, ಪುರೋಹಿತ್ ಗೌರವ್ ಘನಶ್ಯಾಮ್ ಮತ್ತು ಲೋಹಿತ್ ಬಿ. ಇದ್ದರು. ಪ್ರಾಧ್ಯಾಪಕ ಮಲ್ಲಿಕಾರ್ಜುನ ಕಂಡೆ ಮಾರ್ಗದರ್ಶನ ನೀಡಿದರು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>