ಕಲಘಟಗಿ: ಪಟ್ಟಣದ ಹಳಿಯಾಳ ರಸ್ತೆ ಪಕ್ಕದಲ್ಲಿ ಸೇವಾಲಾಲ್ ಮಹಾರಾಜರ 283ನೇ ಜಯಂತಿ ಅಂಗವಾಗಿ ನಡೆದ ಭೋಗ ಪೂಜಾ ಕಾರ್ಯಕ್ರಮಕ್ಕೆ ಅಖಿಲ ಭಾರತ ಬಂಜಾರ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಪಾಂಡುರಂಗ ಪಮ್ಮಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ’ದೇಶದಲ್ಲಿ ಬಂಜಾರ ಸಮಾಜ ತ್ಯಾಗ, ಬಲಿದಾನಕ್ಕೆ ಹೆಸರಾಗಿದೆ.ಇತಿಹಾಸ ಕಾಲದಿಂದಲೂ ಸಮಾಜಕ್ಕೆ ಕೂಡುಗೆ ನೀಡುತ್ತಾ ಬಂದಿದೆ. ಇಂದಿನ ದಿನಮಾನದಲ್ಲಿ ಸಮಾನತೆ ಬಹಳ ಮುಖ್ಯವಾಗಿದ್ದು ಸಮಾಜ ಬಾಂಧವರು ದೇಶದ ಪ್ರಗತಿಗೆ ಶ್ರಮಿಸಬೇಕು’ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಮಂಗಲಪ್ಪ ಲಮಾಣಿ ನಮ್ಮ ಸಮಾಜದವರು ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಸಂಘಟಿತರಾಗಬೇಕಾಗಿದೆ ಎಂದರು.
ಬಂಜಾರ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ವಾಸು ಲಮಾಣಿ, ಡಾ.ಬಿ.ಪಿ ಪೂಜಾರ, ಸಿಪಿಐ ಪ್ರಭುಸೂರಿನ ಅವರನ್ನು ಸಮಾಜದ ಬಾಂಧವರು ಸನ್ಮಾನಿಸಿದರು.