<p><strong>ಕಲಘಟಗಿ</strong>: ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಕಲಘಟಗಿ ಪೊಲೀಸರು, ಆರೋಪಿಯಿಂದ 4 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.</p>.<p>ಧಾರವಾಡ ತಾಲ್ಲೂಕಿನ ಬೋಗೂರ ಗ್ರಾಮದ ಧರ್ಮರಾಜ ಗಂಗಪ್ಪ ಹರಿಜನ ಬಂಧಿತ ಆರೋಪಿ. </p>.<p>ಜೂನ್ 28 ರಂದು ಕಲಘಟಗಿ ಪಟ್ಟಣದ ಸತ್ಯಮೂರ್ತಿ ಜೋಶಿ ಎಂಬುವರು ತಾಲ್ಲೂಕಿನ ಮಾಚಾಪುರ ಗ್ರಾಮದ ಹತ್ತಿರದ ಶ್ರೀಕೃಷ್ಣ ದೇವಸ್ಥಾನದ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿದ್ದ ₹45 ಸಾವಿರ ಮೌಲ್ಯದ ದ್ವಿಚಕ್ರ ವಾಹನ ಕಳವು ಮಾಡಲಾಗಿತ್ತು. ಈ ಬಗ್ಗೆ ಸತ್ಯಮೂರ್ತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿತ್ತು. </p>.<p>ಸಿಪಿಐ ಶ್ರೀಶೈಲ್ ಕೌಜಲಗಿ, ಅಪರಾಧ ವಿಭಾಗದ ಪಿಎಸ್ಐ ಸಿ.ಎನ್.ಕರವೀರಪ್ಪನವರ, ಬಸವರಾಜ ಯದ್ದಲಗುಡ್ಡ ಸಿಬ್ಬಂದಿ ಮಾತೇಶ್, ಶ್ರೀಧರ ಗುಗ್ಗರಿ, ಗೋಪಾಲ ಪಿರಗಿ, ಮಲ್ಲಿಕಾರ್ಜುನ, ಪ್ರಭುದೇವ ಎನ್, ವಿನಾಯಕ, ಹುಸೇನ ಯಲಿಗಾರ, ಮಾದೇವ ಹೊಸಮನಿ ತನಿಖಾ ತಂಡದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಘಟಗಿ</strong>: ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಕಲಘಟಗಿ ಪೊಲೀಸರು, ಆರೋಪಿಯಿಂದ 4 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.</p>.<p>ಧಾರವಾಡ ತಾಲ್ಲೂಕಿನ ಬೋಗೂರ ಗ್ರಾಮದ ಧರ್ಮರಾಜ ಗಂಗಪ್ಪ ಹರಿಜನ ಬಂಧಿತ ಆರೋಪಿ. </p>.<p>ಜೂನ್ 28 ರಂದು ಕಲಘಟಗಿ ಪಟ್ಟಣದ ಸತ್ಯಮೂರ್ತಿ ಜೋಶಿ ಎಂಬುವರು ತಾಲ್ಲೂಕಿನ ಮಾಚಾಪುರ ಗ್ರಾಮದ ಹತ್ತಿರದ ಶ್ರೀಕೃಷ್ಣ ದೇವಸ್ಥಾನದ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿದ್ದ ₹45 ಸಾವಿರ ಮೌಲ್ಯದ ದ್ವಿಚಕ್ರ ವಾಹನ ಕಳವು ಮಾಡಲಾಗಿತ್ತು. ಈ ಬಗ್ಗೆ ಸತ್ಯಮೂರ್ತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿತ್ತು. </p>.<p>ಸಿಪಿಐ ಶ್ರೀಶೈಲ್ ಕೌಜಲಗಿ, ಅಪರಾಧ ವಿಭಾಗದ ಪಿಎಸ್ಐ ಸಿ.ಎನ್.ಕರವೀರಪ್ಪನವರ, ಬಸವರಾಜ ಯದ್ದಲಗುಡ್ಡ ಸಿಬ್ಬಂದಿ ಮಾತೇಶ್, ಶ್ರೀಧರ ಗುಗ್ಗರಿ, ಗೋಪಾಲ ಪಿರಗಿ, ಮಲ್ಲಿಕಾರ್ಜುನ, ಪ್ರಭುದೇವ ಎನ್, ವಿನಾಯಕ, ಹುಸೇನ ಯಲಿಗಾರ, ಮಾದೇವ ಹೊಸಮನಿ ತನಿಖಾ ತಂಡದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>