ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶುಕವಿ ವಿ.ಸಿ.ಐರಸಂಗ ಇನ್ನಿಲ್ಲ

Last Updated 13 ನವೆಂಬರ್ 2020, 5:04 IST
ಅಕ್ಷರ ಗಾತ್ರ

ಧಾರವಾಡ: ಆಶುಕವಿತೆಗಳ ಮೂಲಕವೇ ಚಿರಪರಿಚಿತರಾಗಿದ್ದ ಕವಿ ವಿ.ಸಿ.ಐರಸಂಗ (91) ಶುಕ್ರವಾರ ನಸುಕಿನಲ್ಲಿ ನಿಧನರಾದರು. ಅವರಿಗೆ ಮಗ ಹಾಗೂ ಮಗಳು ಇದ್ದಾರೆ.

ನೂರಾರು ಆಶುಕವಿತೆಗಳನ್ನು ಬರೆದಿರುವ ಅವರು, ಅವುಗಳನ್ನು ಪುಟ್ಟ ಪ್ಯಾಕೆಟ್ ಪುಸ್ತಕ ರೂಪದಲ್ಲಿ ಮುದ್ರಿಸಿ ತಮ್ಮ ಸೈಕಲ್ ಮೇಲಿಟ್ಟು ಮಾರುತ್ತಿದ್ದರು. ಇವರ ಕವಿತೆಗಳನ್ನು ಧಾರವಾಡ ಆಕಾಶವಾಣಿ ಆಗಾಗ ಪ್ರಸಾರ ಮಾಡುತ್ತಲೇ ಇರುತ್ತಿತ್ತು.

ಅತ್ಯಂತ ಸರಳ ಜೀವಿಯಾಗಿದ್ದ ಇವರು ಇಳಿ ವಯಸ್ಸಿನಲ್ಲೂ ಮಲ್ಲಕಂಬಪಟುವಾಗಿದ್ದರು, ನಿತ್ಯ ಸೈಕಲ್ ಓಡಿಸುವುದು, ಈಜುವ ಹವ್ಯಾಸ ಹೊಂದಿದ್ದರು. ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತ್ತು.

ಐರಸಂಗರ ಮೃತ ಪಾರ್ಥಿವ ಶರೀರದ ಅಂತ್ಯಕ್ರಿಯೆ ಧಾರವಾಡದ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ಶುಕ್ರವಾರ 11.30ಕ್ಕೆ ಜರುಗಲಿದೆ ಅವರ ಪುತ್ರಿ ರತ್ನಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT