ಧಾರವಾಡ: ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ಶನಿವಾರ ರಾತ್ರಿ ಮಳೆ ಸುರಿಯಿತು.
ರಾತ್ರಿ 8 ಗಂಟೆ ವೇಳೆಗೆ ಶುರುವಾಗಿ ಸುಮಾರು ಒಂದು ತಾಸು ಸಾಧಾರಣವಾಗಿ ಸುರಿಯಿತು. ಕೆಎಂಎಫ್ ಬಳಿ, ಎನ್ಟಿಟಿಎಫ್ ಸಮೀಪ ರಸ್ತೆಯಲ್ಲಿ ನೀರು ನಿಂತಿತ್ತು.
ಕೆಎಂಎಫ್ ಬಳಿ ರಸ್ತೆಯ ಬದಿಯ ಕಸ, ತ್ಯಾಜ್ಯ ಸರಿಸಿ ನೀರು ಚರಂಡಿಗೆ ಹರಿಯುವಂತೆ ಮಾಡಿದರು.
ನಗರದ ದೊಡ್ಡನಾಯಕನ ಕೊಪ್ಪ, ಪಿಬಿ ರಸ್ತೆ ಭಾಗ ಸಹಿತ ವಿವಿಧೆಡೆಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು.
ಬಿಸಿಲಿನಿಂದ ಕಾದಿದ್ದ ಇಳೆಗೆ ಮಳೆ ತಂಪೆರೆಯಿತು. ಮಳೆ ಶುರುವಾಗಿರುವುದು ರೈತರಲ್ಲಿ ಹರ್ಷ ಮೂಡಿಸಿದೆ.
ಕುಂದಗೋಳ ತಾಲ್ಲೂಕಿನ ಶಿರೂರು, ಹಿರೇ ಹರಕುಣಿ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು. ಕುಂದಗೋಳ ಪಟ್ಟಣ ಯರಗುಪ್ಪಿ ಗ್ರಾಮಗಳಲಿ ಸಾಧಾರಣ ಮಳೆಯಾಗಿದೆ.