ಸೌಕರ್ಯ ಉನ್ನತೀಕರಣಕ್ಕೆ ಪ್ರಸ್ತಾವ
‘ಉತ್ತರ ಕರ್ನಾಟಕ ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿನ ಎಪಿಎಂಸಿ ಮಾರುಕಟ್ಟೆಗಳಲ್ಲಿ ಸೌಕರ್ಯಗಳ ಉನ್ನತೀಕರಣವಾಗಬೇಕಿದೆ’ ಎಂದು ಕೆಸಿಸಿಐ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ತಿಳಿಸಿದರು. ‘ಅಗತ್ಯವಿರುವ ಎಲ್ಲ ಎಪಿಎಂಸಿಗಳಲ್ಲಿ ಇ– ಟೆಂಡರ್ ವ್ಯವಸ್ಥೆ ಕಲ್ಪಿಸಿಕೊಡಬೇಕು. ವೈ–ಫೈ ಸೌಲಭ್ಯ ಅಳವಡಿಸಬೇಕು. ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಇ– ಸ್ವತ್ತು ಸರಳೀಕರಣ ಮಾಡಬೇಕು. ಸೂಪರ್ವೈಜ್ ಚಾರ್ಜ್ ರದ್ದು ಮಾಡಬೇಕು. ವರ್ತಕರಿಗೆ ಎಪಿಎಂಸಿಯಿಂದ ಹಂಚಿಕೆಯಾದ ಆಸ್ತಿಗಳ ಮೇಲೆ ತೆರಿಗೆ ವಿನಾಯಿತಿ ನೀಡಬೇಕು. ಶಿತಲೀಕರಣ ಘಟಕ ಗೋದಾಮುಗಳನ್ನು ನಿರ್ಮಾಣ ಮಾಡಬೇಕು. ಕುಡಿಯುವ ನೀರು ರಸ್ತೆ ಒಳಚರಂಡಿ ವ್ಯವಸ್ಥೆ ಇನ್ನಿತರ ಸೌಕರ್ಯ ಕಲ್ಪಿಸಲು ಈ ಬಾರಿಯ ಬಜೆಟ್ನಲ್ಲಿ ಅನುದಾನ ಮೀಸಲಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.